Tirupati: 1 ವರ್ಷದೊಳಗಿನ ಮಕ್ಕಳಿರುವ ಪೋಷಕರು ತಿರುಪತಿ ದೇವಸ್ಥಾನದಲ್ಲಿ ದೇವರ ದರ್ಶನವನ್ನು ಹೇಗೆ ಮಾಡಬಹುದು?
ತಿರುಪತಿ ಬಾಲಾಜಿ ದೇವಾಲಯ ಇಂದು ಭೂಮಿಯ ಮೇಲಿನ ಅತ್ಯಂತ ಜನಪ್ರಿಯ ದೇವಾಲಯವಾಗಿದೆ. ವರ್ಷದ ಯಾವುದೇ ದಿನ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ನಿತ್ಯ ಲಕ್ಷಾಂತರ ಭಕ್ತರ ಸಮೂಹವನ್ನು ಇಲ್ಲಿ ನೋಡಬಹುದು. ಹೀಗಾಗಿ ತಿರುಪತಿ ತಿಮ್ಮಪ್ಪನ ದರ್ಶನ ಅಷ್ಟು ಸುಲಭವಲ್ಲ. ನಿತ್ಯ ಇಲ್ಲಿ ಭಕ್ತ ಸಾಗರ ಹೆಚ್ಚಾಗಿರುವುದರಿಂದ ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ 1 ವರ್ಷದೊಳಗಿನ ಮಕ್ಕಳಿರುವ ಪೋಷಕರ ದರ್ಶನದ ವಿಧಾನವನ್ನು ದೇವಸ್ತಾನ ಪ್ರಕಟಿಸಿದೆ.
1 ವರ್ಷದೊಳಗಿನ ಮಕ್ಕಳಿರುವ ಪೋಷಕರು ನೇರ ದರ್ಶನ ಪಡೆಯಬಹುದು. ಇದಕ್ಕಾಗಿ ಪೋಷಕರು ಆಧಾರ್ ಕಾರ್ಡ್ ಮತ್ತು ಮಗುವಿನ ಜನನ ಪ್ರಮಾಣಪತ್ರವನ್ನು ತರಬೇಕು ಎಂದು ದೇವಸ್ತಾನ ಪ್ರಕಟಿಸಿದೆ. ನಿಯಮ ಪಾಲಿಸುವ 1 ವರ್ಷದೊಳಗಿನ ಮಕ್ಕಳಿರುವ ಪೋಷಕರು ದೇವಸ್ಥಾನದಲ್ಲಿ ನೇರವಾಗಿ ತಿಮ್ಮಪ್ಪನ ದರ್ಶನ ಪಡೆಯಲು ಅನುಮತಿಸಲಾಗುತ್ತದೆ. ಅವರ ಎಲ್ಲಾ ಆಧಾರ್ ಕಾರ್ಡ್ಗಳನ್ನು ಕೊಂಡೊಯ್ಯಬೇಕು. ಆದರೆ ಅವರೊಂದಿಗೆ ಬರುವ ಸಂಬಂಧಿಕರನ್ನು ಅನುಮತಿಸಲಾಗುವುದಿಲ್ಲ.

ದರ್ಶನಕ್ಕೆ ಅರ್ಹರಾದವರಿಗೆ ಮಧ್ಯಾಹ್ನ 12 ರಿಂದ ಸಂಜೆ 6 ಗಂಟೆಯವರೆಗೆ ಸುಬಾದಮ್ ಪ್ರವೇಶ ದ್ವಾರದಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಅವರು 1 ತಿಂಗಳಿಗೊಮ್ಮೆ ಮಾತ್ರ ದರ್ಶನ ಪಡೆಯಬಹುದು. ದರ್ಶನವನ್ನು ಪೂರ್ಣಗೊಳಿಸಲು ಅವರಿಗೆ ಸುಮಾರು 2 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ. ದಕ್ಷಿಣ ಮಾತಾ ರಸ್ತೆಯಲ್ಲಿ ತಿರುಮಲ ನಂಬಿ ಸನ್ನಿಧಿಯ ಪಕ್ಕದಲ್ಲಿ ಸುಬಾದಮ್ ಪ್ರವೇಶದ್ವಾರವಿದೆ.
ಅಂಥವರಿಗೆ ದರ್ಶನ ಟಿಕೆಟ್ ಅಥವಾ ಮೀಸಲಾತಿ ಅಗತ್ಯವಿಲ್ಲ. ನೇರವಾಗಿ ದೇವಸ್ಥಾನಕ್ಕೆ ಭೇಟಿ ನೀಡಬಹುದು. ಈ ದರ್ಶನವನ್ನು ಪ್ರತಿನಿತ್ಯ ಪಾಲಿಸಲಾಗುತ್ತದೆ. ವಿಶೇಷ ಉತ್ಸವದ ದಿನಗಳಲ್ಲಿ ಮತ್ತು ಹೆಚ್ಚಿನ ಸಂಖ್ಯೆಯ ಭಕ್ತರು ಇರುವ ದಿನಗಳಲ್ಲಿ ದೇವಾಲಯವು ಈ ದರ್ಶನವನ್ನು ರದ್ದುಗೊಳಿಸಬಹುದು.

ಆದ್ದರಿಂದ 1 ವರ್ಷದೊಳಗಿನ ಮಕ್ಕಳ ಪೋಷಕರು ಇದನ್ನು ಪರಿಗಣಿಸುವ ಮೂಲಕ ಇದರ ಅನುಕೂಲವನ್ನು ಪಡೆಯಬಹುದು. ಆದರೆ ವಿಶೇಷ ದಿನಗಳಲ್ಲಿ ಈ ದರ್ಶನವನ್ನು ದೇವಸ್ತಾನ ರದ್ದುಗೊಳಿಸಬಹುದು. ಆದ್ದರಿಂದ 1 ವರ್ಷದೊಳಗಿನ ಮಕ್ಕಳ ಪೋಷಕರು ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣ ಮಾಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ 76,526 ಮಂದಿ ಬಾಲಾಜಿ ದೇವಸ್ಥಾನದಲ್ಲಿ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದಿದ್ದಾರೆ. 32,238 ಮಂದಿ ಮುಡಿ ಕಾಣಿಕೆ ಸಲ್ಲಿಸಿದ್ದಾರೆ. 3.54 ಕೋಟಿ ರೂಪಾಯಿ ಬಿಲ್ ಸಂಗ್ರಹವಾಗಿದೆ. ಇಲ್ಲಿ ನೇರ ಉಚಿತ ದರ್ಶನಕ್ಕೆ 16 ಗಂಟೆ ತೆಗೆದುಕೊಳ್ಳುತ್ತದೆ.
ತಿರುಪತಿ ಬಾಲಾಜಿ ಅಥವಾ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವು ಹಿಂದೂ ಪುರಾಣದ ಅತ್ಯಂತ ಪ್ರಮುಖ ಹೆಗ್ಗರುತುಗಳಲ್ಲಿ ಒಂದೆನೆಸಿಕೊಂಡಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಾವು ಈ ಅದ್ಬುತವಾದ ಹಾಗೂ ಪ್ರಭಾವಶಾಲಿಯಾದ ದೇವಾಲಯವನ್ನು ನೋಡಬಹುದು.
ಕಲಿಯುಗದಲ್ಲಿ ಭಕ್ತರನ್ನು ಅಶೀರ್ವದಿಸಲು ಭಗವಂತನು ಭೂಮಿಯ ಮೇಲೆ ತಿರುಪತಿಯಲ್ಲಿ ನೆಲೆಸುತ್ತಾನೆ ಎಂದು ಪುರಾಣದ ಕೆಲವು ಆಸಕ್ತಿದಾಯಕ ಕಥೆಗಳು ಹೇಳುತ್ತವೆ. ತಿರುಮಲ ತಿರುಪತಿ ದೇವಾಲಯವನ್ನು ಹಿಂದೂ ಧರ್ಮಗ್ರಂಥಗಳಲ್ಲಿ ವಿಷ್ಣು ದೇವನು ಕಲಿಯುಗದಲ್ಲಿ ವಾಸಿಸುವ ಐಹಿಕ ಸ್ಥಳವೆಂದು ವೈಭವಯುತವಾಗಿ ವಿವರಿಸಲಾಗಿದೆ. ಇದು ಹೆಚ್ಚಿನ ಪ್ರಮಾಣದ ದಾನಗಳನ್ನು ಪಡೆದುಕೊಳ್ಳುವ ದೇವಾಲಯಗಳಲ್ಲಿ ಒಂದಾಗಿದೆ. ಇಚ್ಚೆ ಫಲಿಸಿದ ನಂತರ ದೇವಾಲಯದ ಹುಂಡಿಯಲ್ಲಿ ತಮ್ಮ ದಾನವನ್ನು ನೀಡುವುದು ವಾಡಿಕೆಯ ಅಭ್ಯಾಸವಾಗಿದೆ.












Click it and Unblock the Notifications