ದೇವೇಗೌಡ್ರ ಆಪ್ತ ಲೋಕಸಭೆಯಲ್ಲಿ ಬಿಎಸ್ಪಿ ನಾಯಕ
ನವದೆಹಲಿ, ಜೂನ್ 24: ಲೋಕಸಭಾ ಚುನಾವಣೆಗಾಗಿಯೇ ಜೆಡಿಎಸ್ ತೊರೆದಿದ್ದ ಡ್ಯಾನಿಷ್ ಆಲಿ, ಲೋಕಸಭೆಯಲ್ಲಿ ಬಹುಜನ ಸಮಾಜ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ.
ದೇವೇಗೌಡ್ರ ಆಪ್ತರಾಗಿರುವ ಆಲಿ, ಅವರ ಅನುಮತಿ ಪಡೆದು, ಜೆಡಿಎಸ್ ತೊರೆದು, ಬಿಎಸ್ಪಿ ಸೇರಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಜಯ ಸಾಧಿಸಿದ್ದರು.
ಸದನದಲ್ಲಿ ಹನ್ನೊಂದು ಸಂಸದರನ್ನು ಹೊಂದಿರುವ ಬಿಎಸ್ಪಿ, ಮಾಯಾವತಿ ಸಹೋದರ ಆನಂದ್ ಕುಮಾರ್ ಅವರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಿಸಿದೆ.

ಗಿರೀಶ್ ಚಂದ್ರ ಪಕ್ಷದ ಸಚೇತಕರಾಗಿ, ಆಕಾಶ್ ಆನಂದ್ ಮತ್ತು ರಾಮಜೀ ಗೌತಂ ಅವರನ್ನು ಬಿಎಸ್ಪಿಯ ರಾಷ್ಟ್ರೀಯ ಸಂಚಾಲಕರನ್ನಾಗಿ ಮಾಯಾವತಿ ನೇಮಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಅಮ್ರೋಹ ಕ್ಷೇತ್ರದಿಂದ ಕುನ್ವರ್ ಡ್ಯಾನಿಷ್ ಆಲಿ, ಬಿಜೆಪಿಯ ಕನ್ವರ್ ಸಿಂಗ್ ತನ್ವರ್ ಅವರನ್ನು 63,248 ಮತಗಳ ಅಂತರದಿಂದ ಸೋಲಿಸಿದ್ದರು.
ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿಯಲ್ಲೂ ಡ್ಯಾನಿಷ್ ಆಲಿ ಜೆಡಿಎಸ್ ಕಡೆಯಿಂದ ಸದ್ಯಸ್ಯರಾಗಿದ್ದರು.












Click it and Unblock the Notifications