ಡಿಸೆಂಬರ್ 1: ದೇಶ, ವಿದೇಶಗಳ ಚುಟುಕು ಸುದ್ದಿ ಅಪ್ಡೇಟ್
ಬೆಂಗಳೂರು, ಡಿ.1: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
8:00- ಕರ್ನಾಟಕದಲ್ಲಿ ಇಂದು 1,330 ಹೊಸ ಕೋವಿಡ್-19 ಪ್ರಕರಣ ಪತ್ತೆ, 886 ಪ್ರಕರಣಗಳು ಚೇತರಿಕೆ ಕಂಡಿದ್ದು, 14 ಸಾವುಗಳು ಸಂಭವಿಸಿವೆ. ಒಟ್ಟು ಪ್ರಕರಣಗಳು: 8,86,227; ಒಟ್ಟು ಚೇತರಿಕೆ ಪ್ರಕರಣಗಳು: 8,50,707; ಒಟ್ಟು ಸಾವುಗಳು: 11,792; ಸಕ್ರಿಯ ಪ್ರಕರಣಗಳು: 23,709.
6:00: ಟೆಕ್ಸಾಸ್ ರಸ್ತೆಯಲ್ಲಿ ಇನ್ಸ್ಟಾಗ್ರಾಂ ಸೆಲೆಬ್ರಿಟಿ ಎನಿಸಿಕೊಂಡಿದ್ದ 26 ವರ್ಷದ ಮಹಿಳೆ ಅಲೆಕ್ಸಿಸ್ ಶಾರ್ಕಿ ಅವರ ಶವ ನಗ್ನವಾಗಿ ಪತ್ತೆಯಾಗಿದೆ. ಕಳೆದ ವಾರದಿಂದ ಮಹಿಳೆ ನಾಪತ್ತೆಯಾಗಿದ್ದರು.
5:30- ಸಂಗೀತಾ ಶ್ರೀವಾಸ್ತವ ಅವರು ಅಲಹಾಬಾದ್ ವಿಶ್ವವಿದ್ಯಾಲಯದ ಮೊಟ್ಟ ಮೊದಲ ಮಹಿಳಾ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
5:00- ಹಡಗು ಮೂಲಕ ಹಾರಿ ಬಿಡಬಹುದಾದ ಬ್ರಹ್ಮೋಸ್ ಕ್ಷಿಪಣಿ ಯಶಸ್ವಿಯಾಗಿ ಪರೀಕ್ಷೆಯಾಗಿದೆ.
4:45- ಹರ್ಯಾಣ ಗಡಿಯಲ್ಲಿನ ರೈತರ ಸಂಘಟನೆಗಳ ಪ್ರತಿಭಟನೆಗೆ ಭೀಮ್ ಆರ್ಮಿ ಬೆಂಬಲ ವ್ಯಕ್ತಪಡಿಸಿದೆ.
4:30- ಹೈದರಾಬಾದ್ ಪಾಲಿಕೆ ಚುನಾವಣೆಯಲ್ಲಿ 4 ಗಂಟೆ ತನಕ ಶೇ 30ರಷ್ಟು ಮತದಾನ ದಾಖಲಾಗಿದೆ.
3:00- ಕೇಂದ್ರ ಸರ್ಕಾರದ ಜೊತೆ ಮಾತುಕತೆ ಮಾಡಲು ಮುಂದಾದ 32ಕ್ಕೂ ಅಧಿಕ ರೈತ ಸಂಘಟನೆಗಳು
2:45- ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಹತ್ಯೆ ಮಾಡಲಾಗಿದೆ ಎಂಬ ಗಾಳಿ ಸುದ್ದಿಯನ್ನು ಹೈದರಾಬಾದ್ ಪೆಲೆಸ್ ಆಯುಕ್ತ ವಿಶ್ವನಾಥ್ ಅಲ್ಲಗೆಳೆದಿದ್ದಾರೆ
2:30- ಇದೇ ಮೊದಲ ಬಾರಿಗೆ ಭಾರತೀಯ ಮೂಲದ ಸಂದೀಪ್ ಕಠಾರಿಯಾರನ್ನು ಸಿಇಒ ಆಗಿ ನೇಮಿಸಿದ ಬಾಟಾ ಸಂಸ್ಥೆ.
2:10- ಶಿವಸೇನಾ ಸೇರ್ಪಡೆಗೊಂಡ ನಟಿ ಊರ್ಮಿಳಾ ಮಾತೋಂಡ್ಕರ್, ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆ, ಈ ಮುಂಚೆ ಕಾಂಗ್ರೆಸ್ ಟಿಕೆಟ್ ನಿಂದ ಚುನಾವಣೆ ಎದುರಿಸಿದ ಸೋಲು ಕಂಡಿದ್ದರು.
Mumbai: Actor turned politician Urmila Matondkar joins Shiv Sena, in the presence of party president Uddhav Thackeray pic.twitter.com/wMnZJatzHr
— ANI (@ANI) December 1, 2020
1;30-ರೈತರಿಗೆ ಬೆಂಬಲ ನೀಡಲು ನಿರ್ಧರಿಸಿದ ಹರ್ಯಾಣ ಶಾಸಕ ಸೋಂಬೀರ್ ಸಾಂಗ್ವಾನ್ ಅವರು ನಿಗಮ ಮಂಡಳೀ ಅಧ್ಯಕ್ಷ ಸ್ಥಾನವನ್ನು ತೊರೆದಿದ್ದಾರೆ.
Recommended Video
12:45: ಅರಬ್ಬೀ ಸಮುದ್ರದ ಕಡಲಿಗೆ ಇಳಿದ 6 ಮೀನುಗಾರರು ಬೋಟ್ ಸಮೇತ ನಾಪತ್ತೆ. ಸುಮಾರು 16 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ. 22 ಮೀನುಗಾರರಿದ್ದ ಬೋಟ್ ಮಗಚಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
12:30: ಕೇಂದ್ರ ಸರ್ಕಾರ ಜನ ವಿರೋಧಿ, ರೈತ ವಿರೋಧಿ ಕಾನೂನು ಜಾರಿಗೊಳಿಸಿದೆ, ಕೃಷಿ ವಿಧೇಯಕ, ಕಾರ್ಮಿಕ ಕಾಯ್ದೆಗಳನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಕಾರ್ಯಕರ್ತರಿಂದ ಪ್ರತಿಭಟನೆ.
Bengaluru: Congress Party holds protest against Central Government over the new farm and labour Laws and high fuel prices#Karnataka pic.twitter.com/UY7tLzgyme
— ANI (@ANI) December 1, 2020
12: 15: ಮಾಜಿ ಐಎಎಸ್ ಅಧಿಕಾರಿ ಸಂತೋಷ್ ಬಾಬು ಅವರು ಮಕ್ಕಳ್ ನೀತಿ ಮೈಯಂ ಸೇರ್ಪಡೆಗೊಂಡಿದ್ದಾರೆ. ಪಕ್ಷದ ಅಧ್ಯಕ್ಷ ಕಮಲ್ ಹಾಸನ್ ಅವರು ಉಪಸ್ಥಿತರಿದ್ದು, ಸ್ವಾಗತಿಸಿದರು.
12: 00: ಅಕ್ರಮ ಆಸ್ತಿಗಳಿಕೆ ಪ್ರಕರಣ: ಶಿವಸೇನಾ ಶಾಸಕ ಪ್ರತಾಪ್ ಸರ್ ನಾಯಕ್ ಅವರ ಪುತ್ರ ವಿಹಾಂಗ್ ಸರ್ ನಾಯ್ಕ್ ಅವರಿಗೂ ಜಾರಿ ನಿರ್ದೇಶನಾಲಯದಿಂದ ವಿಚಾರಣೆಗಾಗಿ ಸಮನ್ಸ್ ಜಾರಿ
11:45: ರೈತರ ಪರ ನಿಲ್ಲಲು ಇದು ಸಕಾಲ: ಕೇರಳ ಸಿಎಂ ಪಿಣರಾಯಿ ವಿಜಯನ್
It is time to stand with our farmers. We urge the Government of India to listen to the protesting farmers and resolve the issue in an amicable manner. The whole of our country needs to come together on this; because farmers are the lifeblood of this country.
— Pinarayi Vijayan (@vijayanpinarayi) December 1, 2020
11: 30- ''ಸಚಿವರಾಗಲು ಅನರ್ಹ ಎಂಬ ಹೈಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ಇದರಿಂದ ನನಗೆ ಮುಜುಗರವಾಗಿಲ್ಲ. ನನ್ನ ಎಂಎಲ್ಸಿ ಸ್ಥಾನ ಅಬಾಧಿತ. ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸುತ್ತೇನೆ'' ಎಂದು ಎಚ್ ವಿಶ್ವನಾಥ್ ಹೇಳಿದ್ದಾರೆ.
11:00-
ತಮಿಳುನಾಡಿನಲ್ಲಿ
ವನ್ನಿಯಾರ್
ಸಮುದಾಯಕ್ಕೆ
ಶೇ
20ರಷ್ಟು
ಮೀಸಲಾತಿ
ನೀಡುವಂತೆ
ಒತ್ತಾಯಿಸಿ
ನಡೆಯುತ್ತಿರುವ
ಪ್ರತಿಭಟನೆ
ವೇಳೆ
ಮಂಗಳವಾರ
ಬೆಳಿಗ್ಗೆ
ಪ್ರತಿಭಟನಾಕಾರರು
ಚಲಿಸುವ
ರೈಲಿನ
ಮೇಲೆ
ಕಲ್ಲು
ತೂರಾಟ
ನಡೆಸಿದ್ದಾರೆ.
10-45- ಬೆಳಗ್ಗೆ 9.41ರ ವೇಳೆಗೆ ಉತ್ತರಾಖಂಡ್ ರಾಜ್ಯದ ಹರಿದ್ವಾರದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಚರ್ ಮಾಪಕದಲ್ಲಿ 3.9 ರಷ್ಟು ತೀವ್ರತೆ ಕಂಡು ಬಂದಿದೆ.
10: 30- ಡಾಲರ್ ಎದುರು ರುಪಾಯಿ ಮೌಲ್ಯ- 16 ಪೈಸೆ ಏರಿಕೆ ಕಂಡು 73.89 ರು ಪ್ರತಿ ಡಾಲರ್ ನಂತೆ ಆರಂಭಿಕ ವಹಿವಾಟು ನಡೆಸಿದೆ.
10:15- ಭಾರತದಲ್ಲಿ ಒಂದೇ ದಿನ 31118 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆ, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 94,62,810ಕ್ಕೆ ಏರಿಕೆ, 24 ಗಂಟೆಗಳಲ್ಲಿ ಮಂದಿ 482 ಬಲಿ, ಸಾವಿನ ಸಂಖ್ಯೆ 1,37,621ಕ್ಕೆ ಏರಿಕೆ, ದೇಶದಲ್ಲಿ ಈವರೆಗೂ 88,89,585 ಸೋಂಕಿತರು ಗುಣಮುಖ.
10:00- ವಿದೇಶಿ ವಿದ್ಯಾರ್ಥಿಗಳಿಗೆ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾದ ವಿವಿಗಳು ಬಾಗಿಲು ತೆರೆದಿವೆ. ಕೊವಿಡ್ 19 ದೆಸೆಯಿಂದ ಇದ್ದ ನಿರ್ಬಂಧ ತೆರವುಗೊಳಿಸಲಾಗಿದೆ.
9:45- ಕ್ರೊಯೇಷಿಯಾದ ಪ್ರಧಾನಿ ಆಂಡ್ರೆ ಪ್ಲೆಂಕೊವಿಚ್ ಅವರಿಗೆ ಕೊರೊನಾವೈರಸ್ ಸೋಂಕು ದೃಢಪಟ್ಟಿದ್ದು, ಐಸೋಲೇಷನ್ ವಾಸ ಮುಂದುವರೆಸಲಾಗಿದೆ.
9:30- ಡೊನಾಲ್ಡ್ ಟ್ರಂಪ್ ಅವರಿಗೆ ಕೊರೊನಾ ಸಲಹೆಗಾರರಾಗಿದ್ದ ಸ್ಕಾಟ್ ಅಟ್ಲಾಸ್ ರಾಜೀನಾಮೆ.
9:15: ನಾಗಪುರದ ಶಿಕ್ಷಕರ ಪದವೀಧರ ಚುನಾವಣೆಯಲ್ಲಿ ಮತದಾನ ಮಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ.
9:00- ಜಮ್ಮು ಮತ್ತು ಕಾಶ್ಮೀರದ ಉಧಂಪುರದ ಪಂಚಾರಿಯಲ್ಲಿ ಡಿಡಿಸಿ ಚುನಾವಣೆಯ ಎರಡನೇ ಹಂತದ ಮತದಾನ ಜಾರಿಯಲ್ಲಿದೆ.
8:30-ಹೈದರಾಬಾದ್ ಪಾಲಿಕೆ ಚುನಾವಣೆಯಲ್ಲಿ ಮತದಾನ ಮಾಡಿದ ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಕಿಶನ್ ರೆಡ್ಡಿ, ಎಐಎಂಐಎಂ ಮುಖ್ಯಸ್ಥ ಅಸಾಸುದ್ದೀನ್ ಓವೈಸಿ.
8:15-ಸಿಂಘು ಗಡಿಯನ್ನು ಇನ್ನೂ ಮುಕ್ತಗೊಳಿಸಿಲ್ಲ-ದೆಹಲಿ ಸಂಚಾರ ವಿಭಾಗದ ಪೊಲೀಸರ ಸ್ಪಷ್ಟನೆ. ರೈತರ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆ ಗಡಿ ಬಂದ್ ಮಾಡಲಾಗಿದೆ. ಮುಕರ್ಬಾ ಚೌಕ್ ಹಾಗೂ ಜಿಟಿಕೆ ರಸ್ತೆ ಬದಲಿ ಮಾರ್ಗ ಬಳಸಲು ಸೂಚಿಸಲಾಗಿದೆ.
8:00-150 ಸ್ಥಾನಗಳಿಗಾಗಿ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ ಇಂದು ಬೆಳಗ್ಗೆ 7 ರಿಂದ ಮತದಾನ ಆರಂಭವಾಗಿದೆ.