Get Updates
Get notified of breaking news, exclusive insights, and must-see stories!

Cyclone Remal: ಬಂಗಾಳಕ್ಕಿಂದು ರೆಮಲ್ ಚಂಡಮಾರುತ: ವಿಮಾನ ಹಾರಾಟ ಸ್ಥಗಿತ- ಹಲವು ರಾಜ್ಯಗಳಿಗೆ ಐಎಂಡಿ ಎಚ್ಚರಿಕೆ!

ಪಶ್ಚಿಮ ಬಂಗಾಳಕ್ಕೆ ಇಂದು ರೆಮಲ್ ಚಂಡಮಾರುತ ಅಪ್ಪಳಿಸಲಿದೆ. ಹೀಗಾಗಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಈಶಾನ್ಯ ಪ್ರದೇಶಗಳಿಗೆ ಎಚ್ಚರಿಕೆ ನೀಡಿದೆ. ರೆಮಲ್ ಚಂಡಮಾರುತದ ಪರಿಣಾಮ ಮೇ 26ರ ಮಧ್ಯರಾತ್ರಿ ಗಂಟೆಗೆ 110-120 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ.

ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗುವುದರ ಜೊತೆಗೆ ತ್ರಿಪುರಾ ಮತ್ತು ಈಶಾನ್ಯ ರಾಜ್ಯಗಳ ಇತರ ಕೆಲವು ಭಾಗಗಳಲ್ಲಿ ಚಂಡಮಾರುತ ತನ್ನ ಪ್ರಭಾವವನ್ನು ಬೀರಲಿದೆ. ಹೀಗಾಗಿ ಕರಾವಳಿ ರಾಜ್ಯಗಳು ಎಚ್ಚರಿಕೆಯಿಂದ ಇರುವಂತೆ ಐಎಂಡಿ ಸೂಚನೆ ನೀಡಿದೆ.

Cyclone Remal to hit Bengal today Flight suspended in Kolkata - IMD warning for many states

ಆಂಧ್ರಪ್ರದೇಶದ ಪ್ರಾದೇಶಿಕ ಹವಾಮಾನ ಇಲಾಖೆಯ ಪ್ರಕಾರ, ಉತ್ತರ ಮತ್ತು ಪಕ್ಕದ ಪೂರ್ವ-ಮಧ್ಯ ಬಂಗಾಳ ಕೊಲ್ಲಿಯ ಮೇಲೆ ಸೈಕ್ಲೋನಿಕ್ ಚಂಡಮಾರುತ 'ರೆಮಲ್' ಆಗಿ ತೀವ್ರಗೊಂಡಿದೆ.

ಇದು ಮೇ 26ರ ಬೆಳಿಗ್ಗೆ ವಾಯುವ್ಯ ಮತ್ತು ಪಕ್ಕದ ಈಶಾನ್ಯ ಬಂಗಾಳ ಕೊಲ್ಲಿಯ ಮೇಲಿಂದ ಉತ್ತರಕ್ಕೆ ಚಲಿಸುತ್ತಿದೆ. ಇಲ್ಲಿ ಅದು ಚಂಡಮಾರುತವಾಗಿ ತೀವ್ರಗೊಳ್ಳುತ್ತದೆ. ನಂತರ ಇದು ಸಾಗರ್ ದ್ವೀಪ ಮತ್ತು ಖೇಪುಪಾರಾ ನಡುವೆ ಬಾಂಗ್ಲಾದೇಶ ಮತ್ತು ಪಕ್ಕದ ಪಶ್ಚಿಮ ಬಂಗಾಳ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ.

ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳು:-

*ನೈಋತ್ಯ ಮತ್ತು ಪಶ್ಚಿಮ-ಮಧ್ಯ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ವ್ಯವಸ್ಥೆಯಿಂದ ಚಂಡಮಾರುತದ ರಚನೆ ಪ್ರಾರಂಭವಾಯಿತು. ಇದು ನಂತರ ಚಂಡಮಾರುತ ರೆಮಲ್ ಆಗಿ ತೀವ್ರಗೊಂಡಿದೆ. ಈ ರೆಮಲ್ ಚಂಡಮಾರುತ ಭಾರೀ ಮಳೆ, ಬಲವಾದ ಗಾಳಿಯನ್ನು ತರಲಿದ್ದು ಎಚ್ಚರಿಕೆಯಿಂದಿರುವಂತೆ IMD ಮುನ್ಸೂಚನೆ ನೀಡಿದೆ.

Cyclone Remal to hit Bengal today Flight suspended in Kolkata - IMD warning for many states

*ಮೇ 26 ಮತ್ತು 27 ರಂದು ಪಶ್ಚಿಮ ಬಂಗಾಳ, ಒಡಿಶಾ, ತ್ರಿಪುರಾದ ಹಲವು ಜಿಲ್ಲೆಗಳಲ್ಲಿ ಪ್ರತ್ಯೇಕವಾದ ಅತ್ಯಂತ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

*ಮೇ 26 ರಿಂದ ಪ್ರಾರಂಭವಾಗುವ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳನ್ನು ಎದುರಿಸಲು ಅಧಿಕಾರಿಗಳು ಕರಾವಳಿ ಪ್ರದೇಶಗಳಲ್ಲಿನ ನಿವಾಸಿಗಳನ್ನು ಬೇರೆಡೆ ವರ್ಗಾವಣೆಗೊಳ್ಳುವಂತೆ ಒತ್ತಾಯಿಸಿದ್ದಾರೆ.

*ರೆಮಲ್ ಚಂಡಮಾರುತದ ಎಚ್ಚರಿಕೆ ಮೇ 28 ರವರೆಗೆ ಜಾರಿಯಲ್ಲಿರುತ್ತದೆ, ಆದರೆ ಅಗತ್ಯವಿದ್ದರೆ ಅದನ್ನು ವಿಸ್ತರಿಸಬಹುದು ಎಂದು IMD ಹೇಳಿದೆ.

*ರೆಮಲ್ ಚಂಡಮಾರುತದಿಂದಾಗಿ ಮೇ 26 ರಂದು 1200 IST ನಿಂದ ಮೇ 27 ರಂದು 0900 IST ವರೆಗೆ 21 ಗಂಟೆಗಳ ಕಾಲ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಕೋಲ್ಕತ್ತಾ ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಶನಿವಾರ ಪ್ರಕಟಿಸಿದೆ.

ವಿಮಾನ ಕಾರ್ಯಾಚರಣೆ ಸ್ಥಗಿತ

ಕೋಲ್ಕತ್ತಾ ಸೇರಿದಂತೆ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶದ ಮೇಲೆ ರೆಮಲ್ ಚಂಡಮಾರುತದ ಪ್ರಭಾವ ಹೆಚ್ಚಾಗುವುದರಿಂದ ವಿಮಾನ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.

ಸಬೆಯಲ್ಲಿ ಮೇ 26 ರಂದು 1200 IST ನಿಂದ ಮೇ 27 ರಂದು 0900 IST ವರೆಗೆ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಕೋಲ್ಕತ್ತಾದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಕೋಲ್ಕತ್ತಾ ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.

ಚಂಡಮಾರುತ ಪರಿಣಾಮ ಎದುರಿಸಲು ಕೊಲ್ಕತ್ತಾ ಸಿದ್ಧತೆ

ಇನ್ನೂ ಎನ್‌ಡಿಆರ್‌ಎಫ್ ಇನ್‌ಸ್ಪೆಕ್ಟರ್ ಜಹೀರ್ ಅಬ್ಬಾಸ್ ಅವರು ಚಂಡಮಾರುತದ ಪರಿಣಾಮಗಳನ್ನು ಎದುರಿಸಲು ಸಂಪೂರ್ಣವಾಗಿ ಸಿದ್ಧರಾಗಿರುವುದಾಗಿ ತಿಳಿಸಿದ್ದಾರೆ.

"ನಾವು ಚಂಡಮಾರುತದ ಪರಿಣಾಮಗಳನ್ನು ಎದುರಿಸಲು ಸಂಪೂರ್ಣ ಸಿದ್ಧರಾಗಿದ್ದೇವೆ. ಇಲ್ಲಿ ಸೈಕ್ಲೋನ್ ಅಪ್ಪಳಿಸಿದರೆ, ನಮ್ಮ ಸೈನಿಕರು ಎಲ್ಲಾ ರೀತಿಯ ವಿಪತ್ತುಗಳನ್ನು ಎದುರಿಸಲು ಸಿದ್ಧರಾಗಿದ್ದಾರೆ. ನಮ್ಮ ತಂಡವು ಸುಸಜ್ಜಿತವಾಗಿದೆ. ನಮ್ಮ ತಂಡ ಮರ ಬೀಳುವಿಕೆ ಅಥವಾ ಪ್ರವಾಹ ರಕ್ಷಣೆ ಇತ್ಯಾದಿಗಳನ್ನು ಎದುರಿಸಲು ಸಿದ್ದವಾಗಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ಧರಿದ್ದೇವೆ'' ಎಂದು ಅಬ್ಬಾಸ್ ಎಎನ್‌ಐಗೆ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+