Cyclone Biparjoy: ಚಂಡಮಾರುತದ ಅಬ್ಬರಕ್ಕೆ ಇಬ್ಬರು ಸಾವು: ಗುಜರಾತ್ನಲ್ಲಿ ಬಿರುಗಾಳಿ, ಮಳೆ ಆರ್ಭಟ
ಗುಜರಾತ್ನಲ್ಲಿ ಬಿಪರ್ಜಾಯ್ ಚಂಡಮಾರುತದ ಅಬ್ಬರ ತೀವ್ರವಾಗಿದೆ. ಗುರುವಾರ ರಾತ್ರಿ ಗುಜರಾತ್ ಕಡಲ ತೀರಕ್ಕೆ ಅಪ್ಪಳಿದ್ದು ಇದುವರೆಗೂ ಇಬ್ಬರನ್ನು ಬಲಿ ಪಡೆದುಕೊಂಡಿದ್ದು. 23 ಮಂದಿ ಗಾಯಗೊಂಡಿದ್ದು, ಜಾನುವಾರುಗಳು ಕೂಡ ಸಾವನ್ನಪ್ಪಿವೆ ಎಂದು ವರದಿಯಾಗಿದೆ.
ಚಂಡಮಾರುತದ ಪರಿಣಾಮ ಗುಜರಾತ್ ಸುಮಾರು 950 ಹಳ್ಳಿಗಳು ವಿದ್ಯುತ್ ಸಂಪರ್ಕ ಕಳೆದುಕೊಂಡಿದ್ದು, ಕತ್ತಲಿನಲ್ಲಿ ಪರದಾಡುವಂತಾಗಿದೆ. ಕಛ್ ಜಿಲ್ಲೆಯಲ್ಲಿ ಚಂಡಮಾರುತದ ಅಬ್ಬರ ತೀವ್ರವಾಗಿದ್ದು, ಭಾರಿ ಮಳೆಗೆ ಕಾರಣವಾಗಿದೆ. ಶುಕ್ರವಾರ ಬೆಳಿಗ್ಗೆಯಿಂದ ಚಂಡಮಾರುತದ ತೀವ್ರತೆ ಸ್ವಲ್ಪ ಕಡಿಮೆಯಾಗಿದೆ ಎಂದು ವರದಿಯಾಗಿದೆ.

ಗುರುವಾರ ಸಂಜೆ ತೀವ್ರವಾದ ಚಂಡಮಾರುತ ಅಪ್ಪಳಿಸಿದ ಕಾರಣ ಕನಿಷ್ಠ 23 ಜನರು ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಅಥವಾ ಎನ್ಡಿಆರ್ಎಫ್ ತಿಳಿಸಿದೆ, ಚಂಡಮಾರುತ ಅಪ್ಪಳಿಸುವ ಮೊದಲು ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು.
ಬಿಪರ್ಜಾಯ್ ಚಂಡಮಾರುತವು ಸೌರಾಷ್ಟ್ರ-ಕಚ್ ಪ್ರದೇಶದಲ್ಲಿ ಮಧ್ಯರಾತ್ರಿ 2.30 ರವರೆಗೆ ನಲಿಯಾದಿಂದ ಉತ್ತರಕ್ಕೆ 30 ಕಿಮೀ ದೂರದಲ್ಲಿದೆ. ಇದು ಶುಕ್ರವಾರ ಮುಂಜಾನೆ ಈಶಾನ್ಯಕ್ಕೆ ಚಲಿಸಿ ಚಂಡಮಾರುತದ ಚಂಡಮಾರುತವಾಗಿ ದುರ್ಬಲಗೊಳ್ಳುವ ನಿರೀಕ್ಷೆಯಿದೆ ಮತ್ತು ಸಂಜೆಯ ವೇಳೆಗೆ ದಕ್ಷಿಣ ರಾಜಸ್ಥಾನದ ಮೇಲೆ ಚಲಿಸುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಪಾಕಿಸ್ತಾನದ ಮೇಲೂ ಪ್ರಭಾವ
ಶುಕ್ರವಾರ ಬಿಪರ್ ಜಾಯ್ ಚಂಡಮಾರುತ ಕರಾಚಿ ಮತ್ತು ಹೈದರಾಬಾದ್ ಪ್ರದೇಶಗಳನ್ನು ದಾಟಿ ಮುಂದೆ ಚಲಿಸಲಿದ್ದು, ಮಧ್ಯಾಹ್ನದ ವೇಳೆ ಗಂಟೆಗೆ 35-40 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಸಂಜೆ ವೇಳೆಗೆ ತೀವ್ರ ಸ್ವರೂಪ ಪಡೆಯಲಿದೆ. ಪಾಕಿಸ್ತಾನದ ಕರಾಚಿ ಮತ್ತು ಇತರೆ ಭಾಗಗಳಲ್ಲಿ ಗಂಟೆಗೆ 90-110 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಭಾರತದ ಉತ್ತರ ಮತ್ತು ಮಧ್ಯ ಭಾಗಗಳಲ್ಲಿ ಕೂಡ ಗಾಳಿಯ ತೀವ್ರತೆ ಹೆಚ್ಚಾಗಲಿದೆ.
ಶನಿವಾರ ಬಿಪರ್ ಜಾಯ್ ಚಂಡಮಾರುತ ಮತ್ತೆ ಭಾರತದ ಕಡೆಗೆ ಚಲಿಸಲಿದೆ. ರಾಜಸ್ಥಾನದ ಮೇಲೆ ಚಂಡಮಾರುತ ಹಾದುಹೋಗಲಿದ್ದು, ಗಾಳಿಯ ವೇಗ ಗಂಟೆಗೆ 90-110 ಕಿಮೀ ನಷ್ಟಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಂತಹ ಭಾರತದ ಇತರ ಭಾಗಗಳಲ್ಲಿ ಸಹ ಬಲವಾದ ಗಾಳಿ ಬೀಸಲಿದ್ದು, ಪಾಕಿಸ್ತಾನದಲ್ಲಿ ಕೂಡ ಹವಾಮಾನ ಬದಲಾವಣೆಗೂ ಕಾರಣವಾಗಲಿದೆ.
ಭಾನುವಾರ, ಸೋಮವಾರ ರಾಜಸ್ಥಾನದಲ್ಲಿ ಬಿಪರ್ ಜಾಯ್ ಚಂಡಮಾರುತ ಪ್ರಭಾವ ಬೀರಲಿದೆ. ಜೂನ್ 20ರಂದು ಮಂಗಳವಾರ ಚಂಡಮಾರತ ಮತ್ತೊಮ್ಮೆ ಹೆಚ್ಚಾಗಲಿದೆ. ಈಗಾಗಲೇ ಚಂಡಮಾರುತದಿಂದ ಆಗುವ ಹಾನಿಯನ್ನು ತಪ್ಪಿಸಲು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಗುಜರಾತ್ನ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಸುಮಾರು 1 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.












Click it and Unblock the Notifications