ಪ್ರತಿಭಟನಾಕಾರರ ಮೇಲೆ ಹರಿದ ಸಿಆರ್ಪಿಎಫ್ ವಾಹನ
ನವದೆಹಲಿ/ಶ್ರೀನಗರ, ಜೂನ್ 2: ಪ್ರತಿಭಟನಾಕಾರರಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಸಿಆರ್ಪಿಎಫ್ನ ವಾಹನವೊಂದು ಮೂವರ ಮೇಲೆ ಹರಿದ ಘಟನೆ ಶ್ರೀನಗರದಲ್ಲಿ ನಡೆದಿದೆ.
ಮೂವರಲ್ಲಿ ಒಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಮತ್ತು ಪ್ರತಿಭಟನೆಗಳು ಮತ್ತೆ ಆರಂಭವಾಗಿವೆ.
ಪುಣ್ಯತಿಥಿಯ ನೆಪದಲ್ಲಿ ಚುನಾವಣೆಯ ಲಾಭ: ಹೊಸ ವಿವಾದದಲ್ಲಿ ಕಾಂಗ್ರೆಸ್
ಗೃಹಸಚಿವ ರಾಜನಾಥ್ ಸಿಂಗ್ ಕಾಶ್ಮೀರ ಕಣಿವೆಗೆ ಭೇಟಿ ನೀಡುವ ಕೆಲವೇ ದಿನಗಳಿರುವಂತೆಯೇ ಈ ಘಟನೆ ನಡೆದಿದೆ. ರಂಜಾನ್ ಪ್ರಯುಕ್ತ ಉಗ್ರರ ಮೇಲಿನ ಕಾರ್ಯಾಚರಣೆಗೆ ವಿರಾಮ ಘೋಷಣೆ ಮಾಡುವ ಮೂಲಕ ಕಾಶ್ಮೀರದ ಯುವಜನರನ್ನು ತಲುಪುವ ಪ್ರಯತ್ನದಲ್ಲಿರುವ ಕೇಂದ್ರ ಸರ್ಕಾರಕ್ಕೆ ಈ ಘಟನೆ ಹಿನ್ನಡೆ ಉಂಟುಮಾಡಲಿದೆ.
Look at how a mob of stone pelters today targeted a @crpf_srinagar vehicle at Nowhatta in Srinagar, Kashmir. Just imagine what could have happened if they would’ve been able to open the gypsy doors. No Kashmir media outlets will show this truth as it doesn’t suit the propaganda. pic.twitter.com/drOyKEtTwz
— Aditya Raj Kaul (@AdityaRajKaul) 1 June 2018
ಸಿಆರ್ಪಿಎಫ್ನ ಹಿರಿಯ ಅಧಿಕಾರಿಯೊಬ್ಬರನ್ನು ಡ್ರಾಪ್ ಮಾಡಿ ಮರಳಿ ಬರುವ ವೇಳೆ ಸಿಆರ್ಪಿಎಫ್ ವಾಹನ ಪ್ರತಿಭಟನಾಕಾರರ ಮೇಲೆ ಹರಿದಿದೆ ಎನ್ನಲಾಗಿದೆ.
ಉಗ್ರರನ್ನು ಓಡಿಸಿದ ಸೈನಿಕರಿಗೆ ಸಿಕ್ಕಿತು ವಿಶಿಷ್ಟ ಏಣಿ
ಆದರೆ, ವಾಹನವನ್ನು ಜನರ ಗುಂಪು ಸುತ್ತುವರಿದಿತ್ತು. ವಾಹನದ ಮೇಲೆ ದಾಳಿ ಮಾಡುತ್ತಿದ್ದರು. ಚಾಲಕನಿಗೆ ಮುಂದೆ ಹೋಗಲು ಯಾವುದೇ ದಾರಿ ಇರಲಿಲ್ಲ ಎಂಬುದು ಒಂದು ವಿಡಿಯೋದಲ್ಲಿ ಕಂಡುಬಂದಿದೆ.
ಇನ್ನೊಂದು ವಿಡಿಯೋದಲ್ಲಿ ಸಮೀಪದಿಂದ ಕಲ್ಲು, ಇಟ್ಟಿಗೆಗಳನ್ನು ತೂರುತ್ತಿದ್ದ ಜನರ ಗುಂಪಿನ ಮಧ್ಯೆಯೇ ಚಾಲಕ ವಾಹನ ಚಲಾಯಿಸಿಕೊಂಡು ಮುಂದೆ ಸಾಗುವುದು ಸೆರೆಯಾಗಿದೆ.
ಪ್ರತಿಭಟನಾಕಾರರ ಪರವಾಗಿರುವ ಕೆಲವರು ಜೀಪ್ನ ಅಡಿಯಲ್ಲಿ ವ್ಯಕ್ತಿ ಸಿಲುಕಿರುವ ಚಿತ್ರಗಳನ್ನು ಪ್ರಕಟಿಸಿ ಸೇಮೆ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುತಾತ್ಮ ಯೋಧನಿಗೆ ಪುಟ್ಟ ಮಗಳ ಭಾವಪೂರ್ಣ ಬಾಷ್ಪಾಂಜಲಿ
ಅದಕ್ಕೆ ಪ್ರತಿಯಾಗಿ ಜನರ ಗುಂಪು ಅದಕ್ಕೂ ಮೊದಲು ವಾಹನದ ಮೇಲೆ ದಾಳಿ ನಡೆಸುವ ಚಿತ್ರಗಳನ್ನು ಪ್ರಕಟಿಸುತ್ತಿರುವ ಕೆಲವರು, ವಾಸ್ತವ ಸಂಗತಿಯನ್ನು ಮರೆಮಾಚಬೇಡಿ ಎಂದು ಟ್ವೀಟ್ ಮಾಡಿದ್ದಾರೆ.
ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ, 'ಕದನ ವಿರಾಮ ಎಂದರೆ ಬಂದೂಕಿನ ಬದಲು ಜೀಪ್ ಬಳಸುವುದು' ಎಂದು ಟ್ವೀಟ್ ಮಾಡಿದ್ದಾರೆ.
Earlier they tied people to the fronts of jeeps & paraded them around villages to deter protestors now they just drive their jeeps right over protestors. Is this your new SOP @MehboobaMufti sahiba? Ceasefire means no guns so use jeeps? https://t.co/42W6vGAPVi
— Omar Abdullah (@OmarAbdullah) 1 June 2018
ಕೆಲವು ಆಯ್ದ ಚಿತ್ರಗಳು ಇಡೀ ಘಟನೆಯ ಚಿತ್ರಣವನ್ನು ನೀಡುವುದಿಲ್ಲ. ವಿಡಿಯೋಗಳು ಮತ್ತು ಚಿತ್ರಗಳು ಪುಂಡಾಟಿಕೆಯ ಗುಂಪು ವಾಹನದ ಮೇಲೆ ದಾಳಿ ಮಾಡುವುದನ್ನು ತೋರಿಸಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿದ್ದಾರೆ.