ಕೊರೊನಾ ನಿರ್ವಹಣೆ ಸಮೀಕ್ಷೆ: ಪ್ರಧಾನಿ ಮೋದಿ ಜನಪ್ರಿಯತೆ ಆಕಾಶಕ್ಕೋ, ಪಾತಾಳಕ್ಕೋ?
ಮಹಾಮಾರಿ ಕೊರೊನಾಗೆ ದೇಶಾದ್ಯಂತ ಇದುವರೆಗೆ 1,120 ಮಂದಿ ಸಾವನ್ನಪ್ಪಿದ್ದಾರೆ. ಈ ವೈರಾಣು ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಜನರನ್ನು ಬಲಿ ಪಡೆದುಕೊಂಡಿದೆ.
ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಂದ್ ಮಾಡುವುದು ಸೇರಿದಂತೆ, ಆರಂಭದಲ್ಲಿ ಮೋದಿ ಸರಕಾರ, ಕ್ರಿಯಾಶೀಲವಾಗಿ ಕೆಲಸ ಮಾಡಿಲ್ಲ ಎನ್ನುವ ಆಪಾದನೆಯ ನಂತರ, ಕೊರೊನಾ ನಿರ್ವಹಣೆಯ ವಿಚಾರದಲ್ಲಿ ಮೋದಿ ಸರಕಾರ, ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿರುವುದಂತೂ ಹೌದು.
ಒಟ್ಟಾರೆಯಾಗಿ, ಕೊರೊನಾ ವಿಚಾರದಲ್ಲಿ ಮೋದಿ ಸರಕಾರ ಹೇಗೆ ಕೆಲಸ ಮಾಡುತ್ತಿದೆ. ಅವರ ಕಾರ್ಯವೈಖರಿ ಸಾರ್ವಜನಿಕರಿಗೆ ತೃಪ್ತಿ ತಂದಿದೆಯಾ ಎನ್ನುವ ವಿಚಾರದಲ್ಲಿ ಅಮೆರಿಕ ಮೂಲದ ಸಂಸ್ಥೆಯೊಂದು ಇತ್ತೀಚೆಗೆ ಸರ್ವೇ ನಡೆಸಿತ್ತು.
ನೇತಾ ಮತ್ತು ಸಿವೋಟರ್, ಮೋದಿ ಸರಕಾರದ ಕಾರ್ಯ ನಿರ್ವಹಣೆಯ ಬಗ್ಗೆಯೂ ಸಮೀಕ್ಷೆ ನಡೆಸಿತ್ತು. ಮಾರ್ನಿಂಗ್ ಕನ್ಸಲ್ಟ್ ಎನ್ನುವ ಸಂಸ್ಥೆಯ ಸಮೀಕ್ಷಾ ಫಲಿತಾಂಶ ಹೀಗಿದೆ:

ನೇತಾ ಆಪ್ ಏಪ್ರಿಲ್ ಎರಡನೇ ವಾರದಲ್ಲಿ ನಡೆಸಿದ ಸಮೀಕ್ಷೆ
ನೇತಾ ಆಪ್ , ಏಪ್ರಿಲ್ ಎರಡನೇ ವಾರದಲ್ಲಿ ಸಮೀಕ್ಷೆ ನಡೆಸಿ, ಏಪ್ರಿಲ್ ಹದಿನಾಲ್ಕಕ್ಕೆ ವರದಿಯನ್ನು ಪ್ರಕಟಿಸಿತ್ತು. ಸುಮಾರು ಐವತ್ತು ಸಾವಿರ ಜನ ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಶೇ. 71ರಷ್ಟು ಜನ, ಮೋದಿ ಸರಕಾರದ ನಿರ್ವಹಣೆ ತೃಪ್ತಿ ತಂದಿದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಐಎಎನ್ಎಸ್ ಮತ್ತು ಸಿವೋಟರ್ ಜಂಟಿಯಾಗಿ ಸಮೀಕ್ಷೆ
ಐಎಎನ್ಎಸ್ ಮತ್ತು ಸಿವೋಟರ್ ಜಂಟಿಯಾಗಿ ಸಮೀಕ್ಷೆಯೊಂದನ್ನು ನಡೆಸಿತ್ತು. ಮಾರ್ಚ್ 16ರಿಂದ ಏಪ್ರಿಲ್ 21ರ ಅವಧಿಯಲ್ಲಿ ನಡೆಸಿದ ಸಮೀಕ್ಷೆ ಇದಾಗಿತ್ತು. ಲಾಕ್ ಡೌನ್ ಘೋಷಣೆ ಮಾಡಿದ ಆರಂಭದಲ್ಲಿ ಎಷ್ಟು ಜನರು ಮೋದಿ ಸರಕಾರದ ನಿರ್ವಹಣೆಯ ಬಗ್ಗೆ ತೃಪ್ತಿ ಹೊಂದಿದ್ದರೋ, ಅದು ಏಪ್ರಿಲ್ 21ರ ವೇಳೆ ಶೇ. 15ರಷ್ಟು ಜಾಸ್ತಿಯಾಗಿತ್ತು. ಇನ್ನೊಂದು, ಸಮೀಕ್ಷೆಯ ಪ್ರಕಾರ ಶೇ. 93.5 ಜನ ಮೋದಿ ಸರಕಾರದ ಕೊರೊನಾ ನಿರ್ವಹಣೆಯ ಖುಷಿ ಪಟ್ಟಿದ್ದಾರೆಂದು ಸಮೀಕ್ಷೆಯಲ್ಲಿ ವರದಿ ಬಂದಿತ್ತು.

ಅಮೆರಿಕಾದ ಮಾರ್ನಿಂಗ್ ಕನ್ಸಲ್ಟ್
ಅಮೆರಿಕಾದ ಮಾರ್ನಿಂಗ್ ಕನ್ಸಲ್ಟ್ ನಡೆಸಿದ ಸಮೀಕ್ಷೆಯ ಪ್ರಕಾರ, ಕೊರೊನಾ ನಿರ್ವಹಣೆಯ ನಂತರ ಪ್ರಧಾನಿ ಮೋದಿಯ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ. ಅವರು ಸಮರ್ಥ ಪ್ರಧಾನಿ ಮತ್ತು ಅವರ ಕಾರ್ಯವೈಖರಿ ಶೇ. 83 ಜನರಿಗೆ ತೃಪ್ತಿ ತಂದಿದೆ. ಭಾರತದ ಆರ್ಥಿಕತೆ (ಕೊರೊನಾ ವಕ್ಕರಿಸುವ ಮುನ್ನ) ತೊಂದರೆಯಲ್ಲಿದ್ದರೂ, ಮೋದಿಯ ವರ್ಚಸ್ಸು ಕಮ್ಮಿಯಾಗಿಲ್ಲ.

ಮೋದಿ ಈ ಸಮಯವನ್ನು ಬಳಸಿಕೊಂಡು, ವರ್ಚಸ್ಸನ್ನೂ ವೃದ್ದಿಸಿಕೊಳ್ಳಲಿದ್ದಾರೆ
ಜನವರಿ ಮೊದಲ ವಾರದಲ್ಲಿ ಈ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ ಮೋದಿಯ ಜನಪ್ರಿಯತೆ ಶೇ.76ರಷ್ಟಿತ್ತು. ಅದು ಈಗ, ಶೇ. 83ಕ್ಕೆ ಏರಿದೆ. "ಅತಿದೊಡ್ಡ ಪ್ರಜಾಪ್ರಭುತ್ವ ದೇಶ, ಪಕ್ಷದ ಬೆಂಬಲ, ಸರಕಾರೀ ಮೆಷನರಿಗಳ ಸಹಾಯದೊಂದಿಗೆ, ಮೋದಿ ಈ ಸಮಯವನ್ನು ಸಮರ್ಥವಾಗಿ ಬಳಸಿಕೊಂಡು, ಸ್ವಯಂ ವರ್ಚಸ್ಸನ್ನೂ ವೃದ್ದಿಸಿಕೊಳ್ಳಲಿದ್ದಾರೆ"ಎಂದು ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆಯ ನಿರ್ದೇಶಕ ಮಿಲಾನ್ ವೈಷ್ಣವ್ ಹೇಳಿದ್ದಾರೆ.
-
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ -
Government Employees: ಪಶ್ಚಿಮ ಬಂಗಾಳ ಸರ್ಕಾರಿ ನೌಕರರಿಗೆ ಸಿಎಂ ಮಮತಾ ಬ್ಯಾನರ್ಜಿ ಬಂಪರ್ ಕೊಡುಗೆ -
ರಾಜ್ಯದಲ್ಲಿ ಕಮರ್ಷಿಯಲ್ ಉದ್ದೇಶಕ್ಕೆ ಗೃಹಬಳಕೆ LPG ಸಿಲಿಂಡರ್ ಬಳಸಿದವರ ಮೇಲೆ ಅಧಿಕಾರಿಗಳ ಖಡಕ್ ದಾಳಿ












Click it and Unblock the Notifications