ಕೊಯಿಮತ್ತೂರಿನಿಂದ ಹೊರಟ ಮೊದಲು ಖಾಸಗಿ ರೈಲು 'ಭಾರತ್ ಗೌರವ್'
ಕೊಯಿಮತ್ತೂರು ಜೂ.15: ತಮಿಳುನಾಡಿನ ಕೊಯಮತ್ತೂರಲ್ಲಿರುವ ಉತ್ತರ ರೈಲು ನಿಲ್ದಾಣದಲ್ಲಿ ಬುಧವಾರ ಹಬ್ಬದ ವಾತಾವರಣ ಕಂಡು ಬಂತು. ಒಂದೆಡೆ ನಾದಸ್ವರ ಮೊಳಗಿಸುವ ಕಲಾವಿದರ ಮತ್ತೊಂದೆರೆ ನೃತ್ಯ ಕಲಾವಿದರು, ವಿವಿಧ ಹೂಗಳಿಂದ ಸಿಂಗರಿಸಲಾಗಿದ್ದ ರೈಲು ನಿಲ್ದಾಣ. ಇವೆಲ್ಲವು ದೇಶದ ಮೊದಲ ಖಾಸಗಿ ರೈಲೊಂದರ ಸಂಚಾರ ಕಾರ್ಯಾರಂಭಕ್ಕೆ ಸಾಕ್ಷಿಯಾದವು.
'ಸೌಥ್ ಸ್ಟಾರ್ ರೈಲ್' ಖಾಸಗಿ ಕಂಪನಿಯಿಂದ ನಿರ್ವಹಿಸಲ್ಪಡುವ 'ಭಾರತ್ ಗೌರವ್' ರೈಲು ಕೊಯಿಮತ್ತೂರು ರೈಲು ನಿಲ್ದಾಣದಿಂದ ಬೆಳಗ್ಗೆ ಪ್ರಯಾಣ ಆರಂಭಿಸಿದೆ. ಇದಕ್ಕಾಗಿ ರೈಲ್ವೆ ಇಲಾಖೆ ಅಧಿಕಾರಿಗಳು, ಪ್ರಯಾಣಿಕರ ಸಮ್ಮುಖದಲ್ಲಿ ಮೊದಲ ಪ್ರಯಾಣಕ್ಕೆ ಚಾಲನೆ ದೊರೆಯಿತು. ಈ ರೈಲನ್ನು ಕಂಪನಿಯು ಶಿರಡಿ ಸೇವಾ ಪೂರೈಕೆದಾರರಿಗೆ ಎರಡು ವರ್ಷದ ಅವಧಿಗೆ ಪ್ರಯಾಣಕ್ಕಾಗಿ ನೀಡಿದೆ ಎನ್ನಲಾಗಿದೆ.
ಬೆಂಗಳೂರಿಗರ ಕನಸು ನನಸು; ಉಪನಗರ ರೈಲು ಯೋಜನೆಗೆ ವೇಗ
ಕೊಯಿಮತ್ತೂರು ಭಾಗದಿಂದ ಮಂತ್ರಾಲಯ ಮಾರ್ಗದ ಮೂಲಕ ಸಾಗಿ ಶಿರಡಿ ತಲುಪಲಿದೆ. ಪ್ರಯಾಣಿಕರಿಗೆ ಇದೊಂದು ಉತ್ತಮ ಅನುಭವ ನೀಡಲಿದ್ದು, ಒಟ್ಟು ಐದು ತಿಂಗಳು ಪ್ರಯಾಣದ ಯೋಜನೆ ರೂಪಿಸಿದೆ. ಯೋಜನೆ ಪೈಕಿ ತಿಂಗಳಿಗೆ ಮೂರು ಭಾರಿ ಕೊಯಿಮತ್ತೂರಿನಿಂದ ಶಿರಡಿಗೆ ಪ್ರಯಾಣ ಬೆಳೆಸಲು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಿದೆ. ಒಂದು ಸಲದ ಪ್ರಯಾಣ ಸುಮಾರು ಐದು ದಿನಗಳು ಹಿಡಿಯುತ್ತದೆ ಎಂದು ಮೂಲಗಳು ತಿಳಿಸಿವೆ.

ಪ್ರಯಾಣಿಕರಿಂದ ಹರ್ಷ ವ್ಯಕ್ತ:
ಈ ಕುರಿತು ಶಿರಡಿಗೆ ಮೊದಲ ಪ್ರಯಾಣ ಆರಂಭಿಸಿರುವ ಇಲ್ಲಿನ ಪ್ರೆಸ್ ಕಾಲೋನಿ ನಿವಾಸಿ ಸರೋಜಿನಿ ಎಂಬುವವರು ಹರ್ಷ ವ್ಯಕ್ತಪಡಿಸಿದ್ದಾರೆ. ಕುಟುಂಬ ಸಮೇತರಾಗಿ ಶಿರಡಿಗೆ ಪ್ರಯಾಣ ಬೆಳೆಸಬೇಕು ಎಂಬುದು ನಮ್ಮ ಬಹುದಿನದ ಕನಸು ಈ ಭಾರತ್ ಗೌರವ್ ಖಾಸಗಿ ರೈಲಿನ ಮೂಲಕ ನೆರವೇರಿದೆ. ಪ್ರಯಾಣಿಕರು ಕೊಯಿಮತ್ತೂರಿನಿಂದ ಒಂದೇ ರೈಲಿನಲ್ಲಿ ಶಿರಡಿ ವರೆಗೂ ತಲಪಲು ಸಾಧ್ಯವಾಗುತ್ತಿದೆ. ಮಾರ್ಗ ಮತ್ತು ವಾಹನಗಳ ಬದಲಾವಣೆ, ಹತ್ತುವುದು ಹಾಗೂ ಅಲ್ಲಲ್ಲಿ ಇಳಿಯುವ ಸಮಸ್ಯೆಯೇ ಇಲ್ಲ. ಈ ಪ್ರಯಾಣದ ಟಿಕೆಟ್ ದರ ಹಿರಿಯ ಮಹಿಳಾ ನಾಗರಿಕರಿಗೆ (ವೃದ್ಧೆ) ತೆರಿಗೆ ರಹಿತವಾಗಿ ಒಬ್ಬರಿಗೆ 7,999ರೂ. ಆಗುತ್ತದೆ ಎಂದು ತಿಳಿಸಿದ್ದಾರೆ.
ಇದೊಂದು ಉತ್ತಮ ಪ್ಯಾಕೇಜ್ ಪ್ರಯಾಣ:
ಶಿರಡಿ ಪ್ರಯಾಣ ಬೆಳೆಸುವವರಿಗೆ ಈ ಸೌಥ್ ಸ್ಟಾರ್ ರೈಲ್' ಕಂಪನಿಯ ಟಿಕೆಟ್ ದರ ಸಮಂಜಸವಾಗಿದೆ. ಇದು ಪ್ರಯಾಣದ ಒಟ್ಟು ಪ್ಯಾಕೇಜ್ ಹೊಂದಿದೆ. ದೇವರ ದರ್ಶನಕ್ಕಾಗಿ ವಿಐಪಿ ದರ್ಶನ, ವಸತಿ ವ್ಯವಸ್ಥೆ, ಜೀವವಿಮೆ, ಸ್ಲಿಪಿಂಗ್ ಕಿಟ್, ಹವಾನಿಯಂತ್ರಿತ (ಎಸಿ) ಭೋಗಿ, ಊಟ ಒಳಗೊಂಡಿದೆ. ಇಷ್ಟು ಹಣದಲ್ಲಿ ಇಷ್ಟದ ಪ್ರವಾಸ ಮಾಡುವವರಿಗೆ ಇದೊಂದು ಉತ್ತಮ ಅವಕಾಶ ಎಂದು ಮತ್ತೊಬ್ಬ ಮಹಿಳಾ ಪ್ರಯಾಣಿಕರಾದ ಹೇಮಲತಾ ಅಭಿಪ್ರಾಯಪಟ್ಟರು.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಉತ್ತರ ರೈಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿಗಳು, ಕಂಪನಿಯು ಪ್ರಯಾಣದ ಉತ್ತೇಜನಕ್ಕೆಂದೆ ಕೊಯಿಮತ್ತೂರು, ಈರೋದ್ ಮತ್ತು ಮೆಟ್ಟುಪಾಲ್ಯಯಂ ಸೇರಿದಂತೆ ವಿವಿಧ ಶಿರಡಿ ಸಾಯಿಬಾಬಾ ಟ್ರಸ್ಟ ಗಳಿಗಾಗಿ ಒಟ್ಟು 250 ಟಿಕೇಟ್ ಗಳನ್ನು ಉಚಿತವಾಗಿ ಕಾಯ್ದರಿಸಿದೆ. ಇದರಿಂದ ಭಕ್ತರು, ಟ್ರಸ್ಟ ಮುಖ್ಯಸ್ತರು ಉಚಿತವಾಗಿ ಶಿರಡಿ ಶ್ರೀ ಸಾಯಿಬಾಬಾ ದರ್ಶನ ಪಡೆಯಬಹುದಾಗಿದೆ.
ರೈಲು ಶಿರಡಿ ತಲುಪುತ್ತಿದ್ದಂತೆ ದೇವಸ್ಥಾನ ಪ್ರವೇಶಿಸಿ, ದರ್ಶನ ಪ್ರಸಾದ ಪಡೆದು ಬರುವವರೆಗೂ ಪ್ರಯಾಣಿಕರಿಗಾಗಿ ನಿಲ್ದಾಣದಲ್ಲಿ ಐದು ಗಂಟೆಗೂ ಹೆಚ್ಚು ಕಾಲ ಕಾಯಲಿದೆ. ತಿಂಗಳಿಗೆ ಮೂರು ಬಾರಿ (ಟ್ರಿಪ್) ಅಂತೆ ಒಟ್ಟು ಎರಡು ವರ್ಷದವರಿಗೆ ಕಂಪನಿ ಸೇವಾ ಪೂರೈಕೆದಾರರಿಗೆ ಪ್ರಯಾಣಕ್ಕೆಂದು ನೀಡಿದೆ ಎಂದು ಅವರು ಹೇಳಿದ್ದಾರೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ?












Click it and Unblock the Notifications