ದೇಶದ ಮೊದಲ ಬುಲೆಟ್ ರೈಲಿಗಾಗಿ ಮೊದಲ ಪರ್ವತ ಸುರಂಗ ಪೂರ್ಣ, ವಿವರ
ಮುಂಬೈ, ಅಕ್ಟೋಬರ್ 06: ಮುಂಬೈ ಮತ್ತು ಅಹಮದಾಬಾದ್ ನಡುವೆ ಭಾರತದ ಮೊದಲ ಬುಲೆಟ್ ರೈಲು ಕಾರಿಡಾರ್ ಅನ್ನು ನಿರ್ಮಿಸುತ್ತಿರುವ ನಿಗಮವು ಗುಜರಾತ್ನ ವಲ್ಸಾದ್ ಜಿಲ್ಲೆಯ ಜರೋಲಿ ಗ್ರಾಮದ ಬಳಿ ತನ್ನ ಮೊದಲ 350-ಮೀಟರ್ ಉದ್ದದ ಪರ್ವತ ಸುರಂಗವನ್ನು ಪೂರ್ಣಗೊಳಿಸಿರುವುದಾಗಿ ತಿಳಿಸಿದೆ.
ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಎನ್ಎಚ್ಎಸ್ಆರ್ಸಿಎಲ್) ಸುರಂಗದ ಪ್ರವೇಶದ್ವಾರದ ಹತ್ತಿರವಿರುವ ಬಂಡೆಯನ್ನು ಸ್ಫೋಟಿಸಿ ರೈಲು ಮಾರ್ಗ ಕಾರ್ಯವನ್ನು ಮುಗಿಸಿತು. ಬುಲೆಟ್ ರೈಲು ಗಂಟೆಗೆ 350 ಕಿಮೀ ವೇಗದಲ್ಲಿ ಚಲಿಸುತ್ತದೆ.

ಸಣ್ಣ ಜೋಡಣೆ ದೋಷವು ಬರದಂತೆ ಸುರಂಗದ ಜೋಡಣೆಯನ್ನು ಸಂಪೂರ್ಣವಾಗಿ ನೇರವಾಗಿ ಇಡುವುದು ನಮಗೆ ದೊಡ್ಡ ಸವಾಲಾಗಿತ್ತು. ಆದ್ದರಿಂದ, ಪ್ರತಿಯೊಂದು ಕಾರ್ಯವನ್ನು ನಿಖರವಾಗಿ ಮಾಡಬೇಕಿದೆ. ನೀವು ಒಂದೇ ಒಂದು ಮಿಲಿಮೀಟರ್ನಷ್ಟು ದೋಷವನ್ನು ಕಂಡು ಬರುವುದಿಲ್ಲ ಎಂದು ವಲ್ಸಾದ್ ವಿಭಾಗದ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ ಎಸ್ಪಿ ಮಿತ್ತಲ್ ತಿಳಿಸಿದ್ದಾರೆ.
ನಾವು ಸಂಪೂರ್ಣ ಸುರಂಗದ ಒಳಭಾಗದ ರಚನೆಯನ್ನು ಅಗೆದಿದ್ದೇವೆ. ಅದನ್ನು ಪೂರ್ಣಗೊಳಿಸುವ ಕೆಲಸ ಈಗ ಪ್ರಾರಂಭವಾಗಲಿದೆ. ಸುರಂಗ ಕಾಮಗಾರಿಯನ್ನು ಪೂರ್ಣಗೊಳಿಸಲು ಒಂದು ವರ್ಷಕ್ಕೂ ಹೆಚ್ಚು ಅವಧಿಯಲ್ಲಿ ಸಾವಿರಾರು ಕಾರ್ಮಿಕರು ಶ್ರಮವಹಿಸಿ ಕೆಲಸ ಮಾಡಿದ್ದರಿಂದ ಈಗ ಕೆಲಸ ಪೂರ್ಣಗೊಂಡಿದೆ ಎಂದು ಅವರು ಹೇಳಿದರು.
ನಮ್ಮ ನೇರ ಮೇಲ್ವಿಚಾರಣೆಯಲ್ಲಿ ಕೊರೆದ ಮೊದಲ ಪರ್ವತ ಸುರಂಗವಾಗಿದೆ. ಮುಂಬೈ ಮತ್ತು ಅಹಮದಾಬಾದ್ ನಡುವಿನ ಸಂಪೂರ್ಣ 508 ಕಿಮೀ ಮಾರ್ಗದಲ್ಲಿ ಒಟ್ಟು ಏಳು ಸುರಂಗಗಳನ್ನು ಮಾಡಲು ಉದ್ದೇಶಿಸಲಾಗಿದೆ. ನಂತರ ಈಗ ಎರಡನೇ ಸುರಂಗದ ಕೆಲಸ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಅವರು ಹೇಳಿದರು.
ಎನ್ಎಚ್ಎಸ್ಆರ್ಸಿಎಲ್ ಗುತ್ತಿಗೆಯನ್ನು ಎಲ್&ಟಿಗೆ ನೀಡಲಾಗಿದೆ. ಸುರಂಗವನ್ನು ಮಾಡಲು ಬಳಸಲಾದ ತಂತ್ರವು ಸುಸ್ಥಾಪಿತವಾದ ಹೊಸ ಆಸ್ಟ್ರಿಯನ್ ಸುರಂಗ ವಿಧಾನವಾಗಿದೆ (ಎನ್ಎಟಿಎಂ). ಇದನ್ನು ಈಗಾಗಲೇ ಭಾರತದಲ್ಲಿ ಹಲವಾರು ಪರ್ವತ ಪ್ರದೇಶಗಳಲ್ಲಿ ರೈಲು ಮತ್ತು ರಸ್ತೆ ಯೋಜನೆಗಳಿಗಾಗಿ ಬಳಸಲಾಗಿದೆ.
350 ಕಿ.ಮೀ ವೇಗದಲ್ಲಿ ರೈಲು ಹಾದುಹೋಗುವ ಭಾರತದ ಮೊದಲ ಸುರಂಗ ಇದಾಗಿದೆ. ಇಡೀ ಸುರಂಗ ನಿರ್ಮಾಣ ಅವಧಿಯಲ್ಲಿ ತಮ್ಮ ತಂಡವು ಒಂದೇ ಒಂದು ಅಹಿತಕರ ಘಟನೆಯನ್ನು ಎದುರಿಸಲಿಲ್ಲ. ಸುರಂಗಗಳಿಗೆ ಸ್ಫೋಟಕಗಳನ್ನು ಸ್ಪೋಟಿಸಿದಾಗ ಕಾರ್ಮಿಕರು ಮತ್ತು ಸುತ್ತಮುತ್ತಲಿನ ಜನರ ಸುರಕ್ಷತೆಯು ಅತಿಮುಖ್ಯವಾಗಿದೆ ಎಂದರು.
ಸುರಂಗ ಮಾರ್ಗದ ಸಮೀಪದ ಪ್ರದೇಶದಲ್ಲಿ ಕಲ್ಲುಗಳು, ಬಂಡೆಗಳು ಅಥವಾ ಅಂತಹ ಯಾವುದೇ ವಸ್ತುಗಳು ಬೀಳದಂತೆ ನಾವು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇವೆ. ಇದಕ್ಕಾಗಿ ನಮ್ಮ ಕಾರ್ಮಿಕರಿಂದ ಸಾಕಷ್ಟು ಕೆಲಸ ಮಾಡಿಸಿದ್ದೇವೆ ಎಂದು ತಿಳಿಸಿದರು.
2016 ರಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಎನ್ಎಚ್ಎಸ್ಆರ್ಸಿಎಲ್ ಬುಲೆಟ್ ರೈಲು ಯೋಜನೆಗೆ 2017 ರಲ್ಲಿ ಅಡಿಪಾಯ ಹಾಕಿತು. ಡಿಸೆಂಬರ್ 2023 ರ ವೇಳೆಗೆ ಅದನ್ನು ಸಿದ್ಧಪಡಿಸಲು ಪ್ರಸ್ತಾವನೆ ಸಲ್ಲಿಸಲಾಯಿತು. ಆದಾಗ್ಯೂ, ಭೂಸ್ವಾಧೀನ ಸಮಸ್ಯೆಗಳು ಮಹತ್ವಾಕಾಂಕ್ಷೆಯ ಯೋಜನೆಯನ್ನು ವಿಳಂಬಗೊಳಿಸಿತು.
ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದರೂ ಯೋಜನೆ ಕಾರ್ಯಗತಗೊಳಿಸುವ ಗಡುವನ್ನು ಇನ್ನೂ ತಿಳಿಸಲಾಗಿಲ್ಲ. ಈ ಬುಲೆಟ್ ರೈಲು ಬಳಸುವ ಪ್ರಯಾಣಿಕರು 508 ಕಿಮೀ ಪ್ರಯಾಣವನ್ನು 2 ಗಂಟೆ 7 ನಿಮಿಷಗಳಲ್ಲಿ ಮುಗಿಸಬಹುದು. ಪ್ರಸ್ತುತ, ರೈಲು ಪ್ರಯಾಣವು ಸುಮಾರು 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ' ಎಂದು ಎನ್ಎಚ್ಎಸ್ಆರ್ಸಿಎಲ್ನ ವಕ್ತಾರರು ತಿಳಿಸಿದ್ದಾರೆ.
-
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ












Click it and Unblock the Notifications