'ದೇಶ ವೋಟ್ ಬ್ಯಾಂಕ್ ರಾಜಕಾರಣದಿಂದ ರಿಪೋರ್ಟ್ ಕಾರ್ಡ್ ರಾಜಕಾರಣದತ್ತ ಸಾಗಿದೆ': ಜೆಪಿ ನಡ್ಡಾ
ನವದೆಹಲಿ, ಜೂನ್. 06: 2014 ರಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆಡಳಿತ ಮಾದರಿಯಲ್ಲಿ ಭಾರಿ ಬದಲಾವಣೆಯಾಗಿದೆ. ದೇಶವು "ವೋಟ್ ಬ್ಯಾಂಕ್ ರಾಜಕೀಯದಿಂದ ರಿಪೋರ್ಟ್ ಕಾರ್ಡ್ ರಾಜಕೀಯದತ್ತ ಸಾಗಿದೆ" ಎಂದು ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.
ದೇಶದ ಸಾಧನೆ ಮತ್ತು ಅಭಿವೃದ್ಧಿಗಳನ್ನು ಪ್ರಶ್ನಿಸಿದ್ದಕ್ಕಾಗಿ ವಿರೋಧ ಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪಕ್ಷ ಮತ್ತು ಅದರ ನಾಯಕ ರಾಹುಲ್ ಗಾಂಧಿ ಅವರು "ನಫ್ರತ್ ಕಾ ಮೆಗಾ ಶಾಪಿಂಗ್ ಮಾಲ್" (ದ್ವೇಷದ ದೊಡ್ಡ ಶಾಪಿಂಗ್ ಮಾಲ್) ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

"ಪ್ರಧಾನಿ (ನರೇಂದ್ರ ಮೋದಿ) ಅವರು ಹೊಸ ದಿಕ್ಕು ನೀಡಿದ್ದಾರೆ ಮತ್ತು ದೇಶದ ವ್ಯವಹಾರಗಳ ಸ್ಥಿತಿ ಸಹ ಬದಲಾಗಿದೆ. ಆಡಳಿತ ಮಾಡುವುದು ಒಂದು ವಿಷಯ, ಆದರೆ ಸಮರ್ಪಣಾ ಮನೋಭಾವದಿಂದ ಮತ್ತು ಆಡಳಿತದ ಮೂಲಭೂತ ಅಂಶಗಳ ಬಗ್ಗೆ ಸ್ಪಷ್ಟತೆಯೊಂದಿಗೆ ಮಾಡುವುದು ಇನ್ನೊಂದು. ಪಿಎಂ ಸೆ ಪ್ರಧಾನ್ ಸೇವಕ್ ಎಂಬುದು ಕೇವಲ ಹೇಳಿಕೆಯಲ್ಲ, ಇದು ಸಿದ್ಧಾಂತ ಮತ್ತು ಆಳವಾದ ತತ್ತ್ವಶಾಸ್ತ್ರವನ್ನು ಉದಾಹರಣೆಯನ್ನಾಗಿಸಿದೆ" ಎಂದು ಹೇಳಿದ್ದಾರೆ.
ಬಿಜೆಪಿಯ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಜೆಪಿ ನಡ್ಡಾ, 2004 ರಿಂದ 2014 ರವರೆಗೆ ದೇಶವನ್ನು ಹೇಗೆ ಆಡಳಿತ ನಡೆಸಲಾಯಿತು ಮತ್ತು ಅದು ಹೇಗೆ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂಬುದರಲ್ಲಿ ಅಗಾಧವಾದ, ಗೋಚರ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ.

"2014 ರ ಮೊದಲು ಏನೂ ಬದಲಾಗುವುದಿಲ್ಲ ಮತ್ತು ಭ್ರಷ್ಟಾಚಾರ ಇದ್ದೇ ಇರುತ್ತದೆ ಎಂದು ಲಘುವಾಗಿ ತೆಗೆದುಕೊಳ್ಳಲಾಗುತ್ತಿತ್ತು. ಭ್ರಷ್ಟ ರಾಷ್ಟ್ರಗಳ ನಡುವೆ ನಮ್ಮನ್ನು ಸೇರಿಸಿಕೊಳ್ಳಲಾಗಿತ್ತು. ಪ್ರತಿದಿನ, ಒಂದಲ್ಲ ಒಂದು ಹಗರಣ ನಡೆಯುತ್ತಿತ್ತು. ದೇಶದ ನಾಯಕ ಯಾರು ಎಂಬ ಕಲ್ಪನೆ ಇರಲಿಲ್ಲ. ನಾಯಕನ ಬಗ್ಗೆ ಯಾವುದೇ ಸ್ಪಷ್ಟತೆ ಇರಲಿಲ್ಲ, ನಾಯಕತ್ವ ಮತ್ತು ನೀತಿ ಮತ್ತು ಉದ್ದೇಶ ಇರಲಿಲ್ಲ" ಎಂದಿದ್ದಾರೆ.
ವಂಶಾಡಳಿತ ರಾಜಕಾರಣದಿಂದ ಮೆರಿಟೋಕ್ರಸಿಯತ್ತ ಜನರು ಸಾಗುತ್ತಿರುವುದರಿಂದ ದೇಶದ ರಾಜಕೀಯ ಸಂಸ್ಕೃತಿ ಬದಲಾಗಿದೆ. "ನಾವು ವಿಕಾಸ್ ಔರ್ ವಿರಾಸತ್ (ಅಭಿವೃದ್ಧಿ ಮತ್ತು ಪರಂಪರೆ) ಬಗ್ಗೆ ಗಮನ ಹರಿಸಿದ್ದೇವೆ. ಉತ್ತರ ದಕ್ಷಿಣ ವಿಭಜನೆ, ಭಾಷಾ ವಿಭಜನೆ ಇತ್ತು, ಆದರೆ ಪ್ರಧಾನಿ ಮೋದಿ ಅವರು ತಿರುವಳ್ಳುವರ್ನಿಂದ ಬಸವಣ್ಣನವರೆಗೆ ಎಲ್ಲಾ ಸಾಮಾಜಿಕ ಸುಧಾರಕರನ್ನು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಸಂಸತ್ತಿನಲ್ಲಿ ಸ್ಥಾಪಿಸಲಾದ ಸೆಂಗೋಲ್ ಏಕತೆಗೆ ಉದಾಹರಣೆಯಾಗಿದೆ" ಎಂದು ಜೆಪಿ ನಡ್ಡಾ ಹೇಳಿದ್ದಾರೆ.
ಇತ್ತೀಚೆಗೆ ಅಮೆರಿಕ ಪ್ರವಾಸದ ವೇಳೆ ಕೋಮುವಾದ ಸೇರಿದಂತೆ ಹಲವು ಕಾರಣಗಳಿಗಾಗಿ ಕೇಂದ್ರ ಸರ್ಕಾರವನ್ನು ಟೀಕಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ಅಧ್ಯಕ್ಷ, ಭಾರತ ಸಾಧಿಸಿದ ಮೈಲಿಗಲ್ಲುಗಳನ್ನು ಒಪ್ಪಿಕೊಳ್ಳುವಲ್ಲಿ ಗಾಂಧಿ ವಂಶಸ್ಥರಿಗೆ ಸಮಸ್ಯೆಗಳಿವೆ. ಕಾಂಗ್ರೆಸ್ನ ಅಶಿಕ್ಷಿತ ಸಹೋದರರು ಸುತ್ತಲೂ ನೋಡಬೇಕು, ನೀವು ಯಾರ ನೆಲದಲ್ಲಿ ಉಪನ್ಯಾಸ ನೀಡುತ್ತೀರೋ ಆ ದೇಶದ ಬೆಳವಣಿಗೆಯ ದರವು 1.4% ಮತ್ತು ಭಾರತದಲ್ಲಿ ಅದು 6.1% ಆಗಿದೆ" ಎಂದು ಟೀಕಿಸಿದ್ದಾರೆ.
ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಸಮಯ ದೂರವಿಲ್ಲ ಎಂದು ಹೇಳಿದ ಯುಕೆ ಪ್ರಧಾನಿ ರಿಷಿ ಸುನಕ್ ಅವರನ್ನು ಉಲ್ಲೇಖಿಸಿದ ಜೆಪಿ ನಡ್ಡಾ, ಜಗತ್ತು ಭಾರತವನ್ನು ಪ್ರಕಾಶಮಾನವಾದ ತಾಣವೆಂದು ಪರಿಗಣಿಸುತ್ತಿರುವಾಗ, ರಾಹುಲ್ ಗಾಂಧಿಗೆ ಸಮಸ್ಯೆ ಇದೆ ಎಂದು ತೋರುತ್ತದೆ. "ನೀವು ಮೊಹಬ್ಬತ್ ಕಿ ದುಕ್ಕನ್ ನಡೆಸುತ್ತಿದ್ದೀರಿ ಎಂದು ಹೇಳುತ್ತೀರಿ ಆದರೆ ನೀವು ನಫ್ರತ್ ಕಾ ಮೆಗಾ ಶಾಪಿಂಗ್ ಮಾಲ್ ಅನ್ನು ನಡೆಸುತ್ತಿದ್ದೀರಿ" ಎಂದು ಜೆಪಿ ನಡ್ಡಾ ಕಿಡಿಕಾರಿದ್ದಾರೆ.
-
By Election: ಸಿದ್ದರಾಮಯ್ಯರಿಂದ ಅಹಿಂದ ಜೊತೆಗೆ ಗುತ್ತಿಗೆ ರಾಜಕಾರಣ: ಮಾಜಿ ಸಿಎಂ ಗಡುಗು -
Price Hike: ಕೇಂದ್ರದಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಹೇಳಿಕೆ, ದರ ಹೆಚ್ಚಿಸಿದ್ದೇ ಕಾಂಗ್ರೆಸ್; ಡಿಕೆಶಿಗೆ ತಿರುಗೇಟು -
ಸೋಷಿಯಲ್ ಮೀಡಿಯಾಗೆ ವಯೋಮಿತಿ ಫಿಕ್ಸ್?: ಕಠಿಣ 'ಎಐ' ಕಾನೂನು ಜಾರಿಗೆ ಸಂಸದೀಯ ಸಮಿತಿ ಶಿಫಾರಸು -
Gen Z ಪ್ರತಿಭಟನೆಯಲ್ಲಿ 'ಪಾತ್ರ': ಬಲೆನ್ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ನೇಪಾಳ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿ ಬಂಧನ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ












Click it and Unblock the Notifications