India Vs Pakistan: ಪಾಕಿಸ್ತಾನದ ವಿರುದ್ಧ ಯುದ್ಧ ಶುರುವಾದರೆ ಭಾರತವನ್ನ ಬೆಂಬಲಿಸುವ ದೇಶಗಳು...
ಭಾರತ & ಪಾಪಿ ಪಾಕಿಸ್ತಾನದ ನಡುವೆ ಯುದ್ಧ ನಡೆಯುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಪಾಪಿ ಉಗ್ರರು ಪಾಪಿ ಪಾಕಿಸ್ತಾನದ ಮೂಲಕ ಬಂದು, ಭಾರತದ ಕಿರೀಟದಂತೆ ಇರುವ ನಮ್ಮ ಕಾಶ್ಮೀರದ ಮೇಲೆ ದಾಳಿಯನ್ನ ಮಾಡಿದ್ದರು. ಈ ಘಟನೆ ಭಾರತವನ್ನ ಕೆರಳಿಸಿದ್ದು, ಇದೀಗ ಯುದ್ಧ ಗ್ಯಾರಂಟಿ ಆಗಿದೆ. ಹಾಗಿದ್ರೆ ಪಾಕಿಸ್ತಾನದ ವಿರುದ್ಧ ಯುದ್ಧ ಶುರುವಾದರೆ ಭಾರತವನ್ನ ಬೆಂಬಲಿಸುವ ದೇಶಗಳು ಯಾವುವು?
ಜಮ್ಮು & ಕಾಶ್ಮೀರ ಬಿಟ್ಟು ಭಾರತವನ್ನ ಕಲ್ಪಿಸಿಕೊಳ್ಳುವುದಕ್ಕೂ ಅಸಾಧ್ಯ, ಹೀಗಿದ್ದಾಗಲೇ ಪಾಪಿ ಪಾಕಿಸ್ತಾನ ಸೇರಿ ಭಾರತದ ಶತ್ರು ದೇಶಗಳು ಜಮ್ಮು & ಕಾಶ್ಮೀರದ ಮೇಲೆ ಕಣ್ಣು ಹಾಕಿ ಕೂತಿವೆ. ಇಷ್ಟೆಲ್ಲಾ ಇದ್ದರೂ ಭಾರತ ಮಾತ್ರ ಕಣಿವೆ ರಾಜ್ಯವನ್ನು ರಕ್ಷಣೆ ಮಾಡಿಕೊಂಡು ಬಂದಿದ್ದು, ಎಲ್ಲವೂ ಸರಿ ಇದ್ದಾಗಲೇ ಪಾಪಿ ಉಗ್ರರು ಕಾಶ್ಮೀರಕ್ಕೆ ಬಂದು ದಾಳಿ ಮಾಡಿದ್ದಾರೆ. ಇದು ಇಡೀ ಭಾರತೀಯರನ್ನ ಆಕ್ರೋಶ ಹೊರ ಹಾಕುವಂತೆ ಮಾಡುತ್ತಿದೆ.

ಈ ಕಾರಣಕ್ಕೆ ಜಮ್ಮು & ಕಾಶ್ಮೀರ ಭಾಗದಲ್ಲಿ ಉಗ್ರರಿಗೆ ಕೂಡ ಪ್ರಚೋದನೆ ನೀಡ್ತಿರುವ ಆರೋಪ ಪಾಪಿ ಪಾಕಿಸ್ತಾನ ಮೇಲೆ ಇದೆ. ಹಲವು ವರ್ಷಗಳಿಂದಲೂ ಇಲ್ಲಿ ನೆಮ್ಮದಿಯೇ ಇಲ್ಲ ಹೀಗಿದ್ದರೂ ಕಳೆದ ಕೆಲ ವರ್ಷಗಳಿಂದ ಉಗ್ರರ ಹಾವಳಿಯು ಒಂದಷ್ಟು ಕಡಿಮೆ ಆಗಿತ್ತು. ಆದರೆ ಇದೀಗ ಮತ್ತೆ ಬಾಲ ಬಿಚ್ಚಿರುವ ಉಗ್ರರು ಜಮ್ಮು & ಕಾಶ್ಮೀರದಲ್ಲಿ ರಕ್ತಪಾತ ನಡೆಸಿದ್ದಾರೆ. ಈ ದುರ್ಘಟನೆಯು 2019ರ ಪುಲ್ವಾಮಾ ದಾಳಿ ನಂತರದ ಅತ್ಯಂತ ಘೋರ & ಭೀಕರ ದಾಳಿ ಆಗಿದೆ. ಹೀಗಾಗಿ ಯುದ್ಧ ನಡೆಯುವ ಸಾಧ್ಯತೆ ದಟ್ಟವಾಗಿದ್ದು, ಭಾರತದ ಬೆಂಬಲಕ್ಕೆ ಯಾವೆಲ್ಲಾ ದೇಶಗಳು ನಿಲ್ಲುತ್ತವೆ ಗೊತ್ತಾ?
ರಷ್ಯಾ, ಅಮೆರಿಕ, ಯುರೋಪ್ ಬೆಂಬಲ ಯಾರಿಗೆ?
ಭಾರತೀಯರ ರಕ್ತ ಕೊತ ಕೊತ ಕುದಿಯುತ್ತಿದೆ.. ಭಾರತ ಮಾತೆಯ ಕಿರೀಟದಂತೆ ಇರುವ ನಮ್ಮ ಜಮ್ಮು & ಕಾಶ್ಮೀರದಲ್ಲಿ 26 ಭಾರತೀಯರ ಹತ್ಯೆ ದೊಡ್ಡ ಕಿಚ್ಚು ಹೊತ್ತಿಸಿದೆ. ಜಗತ್ತಿನಾದ್ಯಂತ ಜಮ್ಮು & ಕಾಶ್ಮೀರದ ಉಗ್ರರ ಅಟ್ಯಾಕ್ ಬಗ್ಗೆ ಆಕ್ರೋಶದ ಕಹಳೆಯೇ ಮೊಳಗಿದೆ. ಹೀಗಿದ್ದಾಗಲೇ ಪಾಕಿಸ್ತಾನದ ಮೇಲೆ ದಾಳಿ ಮಾಡಿ ಭಾರತ ಯುದ್ಧಕ್ಕೆ ನಿಂತರೆ ನಮಗೆ ಬೆಂಬಲ ನೀಡೋದಕ್ಕೆ ಮುಂದೆ ಬರುವ ಮೊದಲ ದೇಶ ರಷ್ಯಾ ಎನ್ನಬಹುದು.
ಹಾಗೇ ಯುರೋಪ್ ದೇಶಗಳ ಬೆಂಬಲ ಕೂಡ ಭಾರತಕ್ಕೆ ಸಿಗುವ ನಿರೀಕ್ಷೆ ಇದೆ, ಆದರೆ ಅಮೆರಿಕ ಮಾತ್ರ ಈ ವಿಚಾರದಲ್ಲಿ ಮತ್ತೊಮ್ಮೆ ನಾಟಕ ಆಡುತ್ತಿದೆ. ಪಾಕಿಸ್ತಾನದ ಪರವಾಗಿ ಈಗಲೂ ಅಮೆರಿಕ ಮೃದು ದೋರಣೆ ಹೊಂದಿದ ಹಿನ್ನೆಲೆ, ಯುದ್ಧದಲ್ಲಿ ಭಾರತಕ್ಕೆ ಬೆಂಬಲ ನೀಡುವುದು ಕಷ್ಟ ಎನ್ನಲಾಗುತ್ತಿದೆ. ಹಾಗಾದ್ರೆ ಆಸ್ಟ್ರೇಲಿಯಾ & ಇಸ್ರೇಲ್ ನಿರ್ಧಾರ ಏನು ಆಗಬಹುದು?
ಇಸ್ರೇಲ್ ಕೂಡ ಬೆಂಬಲ ನೀಡಲಿದೆ!
ಮತ್ತೊಂದು ಕಡೆ ಇಸ್ರೇಲ್ ಕೂಡ ಭಾರತವನ್ನ ಬೆಂಬಲಿಸಲಿದೆ. ಹಾಗೇ ಆಸ್ಟ್ರೇಲಿಯಾ ಕೂಡ ಈ ವಿಚಾರದಲ್ಲಿ ಭಾರತದ ಬೆನ್ನಿಗೆ ನಿಲ್ಲುವ ನಿರೀಕ್ಷೆ ಇದ್ದು, ಆಫ್ರಿಕಾದ ದೇಶಗಳು ಭಾರತ ಗೆಲ್ಲಲಿ ಎಂದು ಬೆಂಬಲ ನೀಡಲಿವೆ. ಆದರೆ ಪಾಕಿಸ್ತಾನಕ್ಕೆ ಮಧ್ಯಪ್ರಾಚ್ಯ ದೇಶಗಳಿಂದ ಭಾರಿ ಬೆಂಬಲ ಸಿಗುವ ಸಾಧ್ಯತೆ ಇದೆ, ಯಾಕಂದ್ರೆ ಈ ದೇಶಗಳು ಪದೇ ಪದೇ ಪಾಕಿಸ್ತಾನ ಪರವಾಗಿ ಮಾತನಾಡುತ್ತಿವೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications