Live

ಜನತಾ ಕರ್ಫ್ಯೂ ಯಶಸ್ವಿಗೊಳಿಸಿದ್ದಕ್ಕೆ ಧನ್ಯವಾದ ಎಂದ ಮೋದಿ

ಬೆಂಗಳೂರು, ಮಾರ್ಚ್ 21: ಪ್ರತಿಯೊಬ್ಬರು ಜಾಗೃತರಾಗಿರಿ, ವೈರಸ್ ಬಗ್ಗೆ ನಿರ್ಲಕ್ಷ್ಯಬೇಡ, ಸಂಕಲ್ಪ, ಸಂಯಯದಿಂದಿರಿ, ಜನತಾ ಕರ್ಫ್ಯೂ ಆಚರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕರೆಗೆ ಓಗೊಟ್ಟು ಜನರಿಂದ ಜನರಿಗಾಗಿ ಸ್ವಯಂಪ್ರೇರಿತ ಕರ್ಫ್ಯೂ ಆಚರಣೆಯಲ್ಲಿ ತೊಡಗಿವೆ.

ನಾವು ಸ್ವಸ್ಥರಾಗಿದ್ದರೆ, ವಿಶ್ವವು ಸ್ವಸ್ಥವಾಗಲಿದೆ. social distancing ಬಹುಮುಖ್ಯವಾಗಿದೆ. ವ್ಯಕ್ತಿಯಿಂದ ವ್ಯಕ್ತಿ ಅಂತರ ಕಾಯ್ದುಕೊಳ್ಳುವ ಸಂಕಲ್ಪ ಮಾಡಬೇಕಿದೆ. ಮಾರ್ಚ್ 22ರ ರವಿವಾರದಂದು ಬೆಳಗ್ಗೆ 7 ರಿಂದ ರಾತ್ರಿ 9 ರ ತನಕ ಜನತಾ ಕರ್ಫ್ಯೂ ಆಚರಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

Coronavirus : Janta Curfew in India Live Updates in kannada

ದೇಶದ ನಿವಾಸಿಗಳು ಮನೆಯಲ್ಲೇ ಉಳಿದು ಕರ್ಫ್ಯೂ ಆಚರಣೆಗೆ ಸಹಕರಿಸುವಂತೆ ಕೋರಿದ್ದಾರೆ. ಅಂದು ಮನೆಯಿಂದ ಹೊರಕ್ಕೆ ಬರಬೇಡಿ, ಮಾರ್ಚ್ 22ರ ಸಂಜೆ 5 ಗಂಟೆಗೆ ಸರಿಯಾಗಿ ನಿಮ್ಮ ಮನೆಯ ಬಾಗಿಲು, ಕಿಟಕಿ ಬಳಿ ನಿಂತು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವರ್ಗಕ್ಕೆ ಧನ್ಯವಾದ ಸಲ್ಲಿಸೋಣ ಎಂದು ಮೋದಿ ಕರೆ ನೀಡಿದ್ದರು..

Mar 22, 2020, 9:33 pm IST

ಧನ್ಯವಾದ ಎಂದ ಸಚಿನ್ ತೆಂಡೂಲ್ಕರ್

ನಿರಂತರವಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವೈದಕೀಯ ಲೋಕಕ್ಕೆ ಹಾಗೂ ಇನ್ನಿತರ ವರ್ಗಕ್ಕೆ ಧನ್ಯವಾದ ಅರ್ಪಿಸಲು ಇಂದು ಇಡೀ ಭಾರತ ಮನೆಯಲ್ಲಿದ್ದುಕೊಂಡೇ ಒಂದಾಗಿ, ಒಗ್ಗಟ್ಟಾಗಿ ಸೇರಿದ್ದೆವು ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಧನ್ಯವಾದ ಅರ್ಪಿಸಿದ್ದಾರೆ.
Mar 22, 2020, 9:20 pm IST

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೊಂದಿಗೆ ಆಧ್ಯವೀರ್ ನರಸಿಂಹರಾಜ ಒಡೆಯರ್ ಅವರು ಮೈಸೂರು ಅರಮನೆಯಲ್ಲಿ ಚಪ್ಪಾಳೆ ತಟ್ಟುವ ಮೂಲಕ ವೈದ್ಯರಿಗೆ ಧನ್ಯವಾದ ಅರ್ಪಿಸಿದರು
Mar 22, 2020, 8:56 pm IST

ಕೊರೊನಾವೈರಸ್ ವಿರುದ್ಧ ಸೆಣಸುತ್ತಿರುವ ಲಕ್ಷಾಂತರ ಕೊರೊನಾ ಯೋಧರಿಗೆ ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವಿಸಲಾಗಿದೆ
Mar 22, 2020, 8:37 pm IST

ಬಾಗಲಕೋಟೆ ಜಿಲ್ಲೆಯ ಜನತೆಯಿಂದ ಧನ್ಯವಾದ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ನಂದವಾಡಗಿ ಚೆಕ್ ಪೋಸ್ಟ್ ಬಳಿ ಕೊರೊನಾ ಸೋಂಕು ತಪಾಸಣಾಗಾರರು ಕೈ ಚಪ್ಪಾಳೆ ತಟ್ಟುವ ಮೂಲಕ ಆರೋಗ್ಯ ಇಲಾಖೆಯ ಸೈನಿಕರಿಗೆ ಹಾಗೂ ಕೊರೊನಾ ತಡೆಯಲು ಶ್ರಮಿಸುತ್ತಿರುವ ಎಲ್ಲಾ ಇಲಾಖೆಯವರಿಗೂ ಧನ್ಯವಾದ ಸೂಚಿಸಿದರು
Mar 22, 2020, 8:27 pm IST

ನಟ ಶಿವರಾಜ್ ಕುಮಾರ್ ರಿಂದ ಚಪ್ಪಾಳೆ
Mar 22, 2020, 8:13 pm IST

ಸುಮಲತಾ ಅಂಬರೀಷ್ ಅವರು ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಜನತಾ ಕರ್ಫ್ಯೂ ನಡುವೆ ಚಪ್ಪಾಳೆ ತಟ್ಟಿ ವೈದ್ಯರಿಗೆ ಧನ್ಯವಾದ ಅರ್ಪಿಸಿದರು.
Mar 22, 2020, 7:50 pm IST

ಅಸ್ಸಾಂನ ಗುವಾಹಟಿಯಲ್ಲಿ ಘಂಟನಾದ

ಅಸ್ಸಾಂನ ಗುವಾಹಟಿಯಲ್ಲಿ ಗಂಟೆ, ಜಾಗಟೆ ಸದ್ದು ಜೋರಾಗಿ ಕೇಳಿ ಬಂದಿತು. ಪ್ರಧಾನಿ ಕರೆಗೆ ಓಗೊಟ್ಟು, ಮನೆಯ ಪಾತ್ರೆಗಳನ್ನು ಬಡಿಯುತ್ತಾ ಜನತೆ ಧನ್ಯವಾದ ಅರ್ಪಿಸಿದರು.
Mar 22, 2020, 7:44 pm IST

ತೀರ್ಥಹಳ್ಳಿ ಬಿಜೆಪಿ ಶಾಸಕರಿಂದ ಜಾಗಟೆ ಸದ್ದು

ತೀರ್ಥಹಳ್ಳಿ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಅವರು ತಮ್ಮ ನಿವಾಸದಲ್ಲಿಂದು ಜಾಗಟೆ ಬಾರಿಸಿ, ಪ್ರಧಾನಿ ಮೋದಿ ಕರೆಯಂತೆ ಧನ್ಯವಾದ ಅರ್ಪಿಸಿದರು.
Mar 22, 2020, 7:24 pm IST

ಚಿಕ್ಕಮಗಳೂರಿನಲ್ಲಿ ಚಪ್ಪಾಳೆ ತಟ್ಟಿದ ಜನತೆ

ಚಿಕ್ಕಮಗಳೂರಿನ ಸಾರ್ವಜನಿಕರು, ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಜನತಾ ಕರ್ಫ್ಯೂ ನಡುವೆ ಚಪ್ಪಾಳೆ ತಟ್ಟಿ ವೈದ್ಯರಿಗೆ ಧನ್ಯವಾದ ಅರ್ಪಿಸಿದರು.
Mar 22, 2020, 7:24 pm IST

ಮಾಜಿ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಪತ್ನಿ ಅರುಣಾ ಜತೆಗೂಡಿ ಚಪ್ಪಾಳೆ ತಟ್ಟಿದರು. ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಇವತ್ತು ನಾವು ವೈದ್ಯರು, ನರ್ಸ್ ಗಳಿಗೆ ಧನ್ಯವಾದ ಅರ್ಪಿಸಿದ್ದೇವೆ.
Mar 22, 2020, 7:02 pm IST

ಶಾಸಕ ಹರತಾಳು ಹಾಲಪ್ಪರಿಂದ ಚಪ್ಪಾಳೆ

ಬೆಂಗಳೂರಿನ ಬಸವೇಶ್ವರ ನಗರದ ನಿವಾಸದಲ್ಲಿ ಚಪ್ಪಾಳೆ ತಟ್ಟಿದ ಸಾಗರದ ಶಾಸಕ ಹರತಾಳು ಹಾಲಪ್ಪ.
Mar 22, 2020, 6:48 pm IST

ಸಿಂಗಪುರದಲ್ಲೂ ಕಂಡು ಬಂದ ಚಪ್ಪಾಳೆ ಗೌರವ

ಸಿಂಗಪುರದಲ್ಲೂ ಕೇಳಿ ಬಂದ ಚಪ್ಪಾಳೆ ಸದ್ದು ಪ್ರಧಾನಿ ಮೋದಿ ಕರೆಗೆ ಓಗೊಟ್ಟು, ಸಿಂಗಪುರದಲ್ಲಿರುವ ಭಾರತ ಮೂಲದ ನಿವಾಸಿಗಳು, ವೈದ್ಯಕೀಯ ಸಿಬ್ಬಂದಿಗೆ ಚಪ್ಪಾಳಿ ತಟ್ಟಿ ಗೌರವ ಸಲ್ಲಿಸಿದರು.
Mar 22, 2020, 6:37 pm IST

ಉಡುಪಿ ಶ್ರೀಕೃಷ್ಣಮಠದಲ್ಲಿ ಗಂಟನಾದ

ಪ್ರಧಾನಿ ಮೋದಿ‌ಕರೆಗೆ ಕೃಷ್ಣ ಮಠದಲ್ಲಿ ಧಾರ್ಮಿಕ ಸ್ಪಂದನೆ ಪರ್ಯಾಯ ಅದಮಾರು‌ ಮಠಾಧೀಶರಿಂದ ಗಂಟೆನಾದ ಸತತ ಐದು ನಿಮಿಷಗಳ ಕಾಲ ಗಂಟೆ ನಾದ ಶಂಖನಾದ, ಜಾಗಂಟೆ ಮೊಳಗಿಸಿ ಕೃತಜ್ಞತೆ ಸಲ್ಲಿಸಿದರು.
Mar 22, 2020, 6:10 pm IST

ಉತ್ತರಾಖಂಡ್ ನಲ್ಲಿ ಚಪ್ಪಾಳೆ ತಟ್ಟಿದ ಜನತೆ

ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ಚಪ್ಪಾಳೆ, ಶಂಖ ಊದುವುದು, ಮನೆಯ ಪಾತ್ರೆ ಬಡಿಯುವುದು ಮುಂತಾದ ಕ್ರಿಯೆ ಮೂಲಕ ವೈದ್ಯರು, ನರ್ಸ್, ಪೊಲೀಸ್ ಮುಂತಾದ ಇಲಾಖೆ ಸಿಬ್ಬಂದಿಗೆ ಧನ್ಯವಾದ ಅರ್ಪಿಸಲಾಯಿತು.
Mar 22, 2020, 6:06 pm IST

ನೋಯ್ಡಾದ ಅಪಾರ್ಟ್ಮೆಂಟ್ ಬಳಿ ಕರತಾಡನ

ನೋಯ್ಡಾದ ವಸತಿ ಸಮುಚ್ಚಯದ ನಿವಾಸಿಗಳು ಮನೆಯ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟಿ ಮೋದಿ ಕರೆಗೆ ಓಗೊಟ್ಟು, ವೈದ್ಯರಿಗೆ ಧನ್ಯವಾದ ಅರ್ಪಿಸಿದರು.
Mar 22, 2020, 6:03 pm IST

ದೆಹಲಿಯ ಜಾಮಾ ಮಸೀದಿ ಬಳಿ ಚಪ್ಪಾಳೆ

ದೆಹಲಿಯ ಜಾಮಾ ಮಸೀದಿ ಬಳಿ ತ್ರಿವರ್ಣ ಧ್ವಜ ಹಿಡಿದು, ಅಗತ್ಯ ಸೇವೆ ಒದಗಿಸುತ್ತಿರುವ ವರ್ಗಕ್ಕೆ ಚಪ್ಪಾಳೆ ತಟ್ಟಿ ಧನ್ಯವಾದ ಅರ್ಪಿಸಲಾಯಿತು.
Mar 22, 2020, 6:02 pm IST

ಜನತಾ ಕರ್ಪ್ಯೂ ಬೆಂಬಲಿಸಿ ಚಪ್ಪಾಳೆ

ಜನತಾ ಕರ್ಪ್ಯೂ ಬೆಂಬಲಿಸಿ ಚಪ್ಪಾಳೆ
ಎರಡನೇ ಮಹಡಿಯ ಬಾಲ್ಕನಿ ಯಲ್ಲಿ ನಿಂತು ಸಿಎಂ ಬಿಎಸ್ವೈ ಚಪ್ಪಾಳೆ, ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ. ಸಂಜೆ 5 ಗಂಟೆ ಆಗ್ತಿದ್ದಂತೆ ಬಂದು ಚಪ್ಪಾಳೆ ಹೊಡೆದ ಸಿಎಂ. ಬಿತ್ತಿ ಪತ್ರ ಪ್ರದರ್ಶನ ಮಾಡಿ ಚಪ್ಪಾಳೆ ಹೊಡೆದ ಸಿಎಂ
Mar 22, 2020, 5:57 pm IST

ಪಂಜಾಬಿನಲ್ಲಿ ಚಪ್ಪಾಳೆ ತಟ್ಟಿದ ಜನತೆ

ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ವರ್ಗಕ್ಕೆ ಧನ್ಯವಾದ ಸಲ್ಲಿಸಿದ ಪಂಜಾಬ್ ಜನತೆ
Mar 22, 2020, 4:46 pm IST

ಜನತಾ ಕರ್ಫ್ಯೂ: ಉಧಮ್ ಪುರ್, ಜಮ್ಮು ಮತ್ತು ಕಾಶ್ಮೀರ
Mar 22, 2020, 4:45 pm IST

ಜನತಾ ಕರ್ಫ್ಯೂ: ಲಕ್ನೋ, ಉತ್ತರ ಪ್ರದೇಶ
Mar 22, 2020, 4:44 pm IST

ಜನತಾ ಕರ್ಫ್ಯೂ: ಲಕ್ನೋ, ಉತ್ತರ ಪ್ರದೇಶ
Mar 22, 2020, 4:43 pm IST

ಜನತಾ ಕರ್ಫ್ಯೂ: ಗುವಾಹಟಿ, ಅಸ್ಸಾಂ
Mar 22, 2020, 4:42 pm IST

ಜನತಾ ಕರ್ಫ್ಯೂ: ಗುವಾಹಟಿ, ಅಸ್ಸಾಂ
Mar 22, 2020, 4:37 pm IST

ಜನತಾ ಕರ್ಫ್ಯೂ ಆಚರಣೆ ದಿನವೂ ಕಾರಣವಿಲ್ಲದೆ ರಸ್ತೆಗಿಳಿದ ನಾಗರೀಕರನ್ನ ತಡೆದು ನಿಲ್ಲಿಸಿ ಹೈದರಾಬಾದ್ ಪೊಲೀಸರು ಕೈ ಮುಗಿದಿದ್ದಾರೆ. 'ಉತ್ತಮ ನಾಗರೀಕರು ಜನತಾ ಕರ್ಫ್ಯೂವನ್ನು ಬೆಂಬಲಿಸುತ್ತಾರೆ' ಎಂಬ ಭಿತ್ತಿಪತ್ರವನ್ನು ಪೊಲೀಸರು ಕೈಯಲ್ಲಿ ಹಿಡಿದಿರುವುದನ್ನು ನೀವು ಫೋಟೋದಲ್ಲಿ ಕಾಣಬಹುದು.
Mar 22, 2020, 4:36 pm IST

ಜನತಾ ಕರ್ಫ್ಯೂ - ಪಿ.ಬಿ.ಇ.ಎಲ್ ಸಿಟಿ ಅಪಾರ್ಟ್ಮೆಂಟ್ಸ್, ಹೈದರಾಬಾದ್
Mar 22, 2020, 4:35 pm IST

ಜನತಾ ಕರ್ಫ್ಯೂ - ಪಿ.ಬಿ.ಇ.ಎಲ್ ಸಿಟಿ ಅಪಾರ್ಟ್ಮೆಂಟ್ಸ್, ಹೈದರಾಬಾದ್
Mar 22, 2020, 4:35 pm IST

ಜನತಾ ಕರ್ಫ್ಯೂ - ಪಿ.ಬಿ.ಇ.ಎಲ್ ಸಿಟಿ ಅಪಾರ್ಟ್ಮೆಂಟ್ಸ್, ಹೈದರಾಬಾದ್
Mar 22, 2020, 4:35 pm IST

ಜನತಾ ಕರ್ಫ್ಯೂ - ಪಿ.ಬಿ.ಇ.ಎಲ್ ಸಿಟಿ ಅಪಾರ್ಟ್ಮೆಂಟ್ಸ್, ಹೈದರಾಬಾದ್
Mar 22, 2020, 4:34 pm IST

ಜನತಾ ಕರ್ಫ್ಯೂ - ಪಿ.ಬಿ.ಇ.ಎಲ್ ಸಿಟಿ ಅಪಾರ್ಟ್ಮೆಂಟ್ಸ್, ಹೈದರಾಬಾದ್
Mar 22, 2020, 4:31 pm IST

ಜನತಾ ಕರ್ಫ್ಯೂ - ವರ್ತೂರು, ಬೆಂಗಳೂರು, ಕರ್ನಾಟಕ
READ MORE

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+