Santokh Singh : ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ಸಂಸದ ಸಂತೋಖ್ ಸಿಂಗ್ ನಿಧನ
ಪಂಜಾಬ್ನ ಫಿಲ್ಲೌರ್ನಲ್ಲಿ ಶನಿವಾರ ಬೆಳಗ್ಗೆ ಭಾರತ್ ಜೋಡೋ ಯಾತ್ರೆಯ ವೇಳೆ ಜಲಂಧರ್ನ ಕಾಂಗ್ರೆಸ್ ಸಂಸದ ಚೌಧರಿ ಸಂತೋಖ್ ಸಿಂಗ್ ನಿಧನರಾದರು. ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆಗೆ ನಡೆದುಕೊಂಡು ಹೋಗುತ್ತಿದ್ದ ಅವರು ಹೃದಯ ಬಡಿತ ಹೆಚ್ಚಾದಾಗ ಇದ್ದಕ್ಕಿದ್ದಂತೆ ಅಸ್ವಸ್ಥರಾದರು.
ಕಾಂಗ್ರೆಸ್ ನಾಯಕನನ್ನು ಫಗ್ವಾರದ ವಿರ್ಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಸುದ್ದಿ ತಿಳಿದ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಿಂದ ಹೊರಟು ಆಸ್ಪತ್ರೆ ತಲುಪಿದರು. ಭಾರತ್ ಜೋಡೋ ಯಾತ್ರೆ ಕಳೆದ ವರ್ಷ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು ಮತ್ತು ಜನವರಿ 30 ರಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಮುಕ್ತಾಯಗೊಳ್ಳಲಿದೆ.
ಪಂಜಾಬಿನಲ್ಲಿ ಕಾಂಗ್ರೆಸ್ ಸಂಸದರ ನಿಧನಕ್ಕೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಟ್ವಿಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ.
"ಜಲಂಧರ್ನ ಕಾಂಗ್ರೆಸ್ ಸಂಸದ ಸಂತೋಖ್ ಸಿಂಗ್ ಚೌಧರಿ ಅವರ ಅಕಾಲಿಕ ಮರಣದಿಂದ ನಾನು ತೀವ್ರ ದುಃಖಿತನಾಗಿದ್ದೇನೆ.. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ" ಎಂದು ಬರೆದಿದ್ದಾರೆ.
ಪಂಜಾಬ್ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕೂಡ ಸಂತೋಖ್ ಸಿಂಗ್ ಚೌಧರಿ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ. "ಸಂತೋಖ್ ಸಿಂಗ್ ಚೌಧರಿ ಅವರು ಹೃದಯಾಘಾತದಿಂದ ಇಂದು ಹಠಾತ್ ನಿಧನದ ಬಗ್ಗೆ ಕೇಳಿ ತುಂಬಾ ದುಃಖವಾಗಿದೆ. ಈ ದುಃಖದ ಸಮಯದಲ್ಲಿ ಅವರ ಇಡೀ ಕುಟುಂಬಕ್ಕೆ ದು:ಖವನ್ನು ಭರಿಸುವಂತ ಶಕ್ತಿ ಸಿಗಲಿ. ದೇವರು ಸಂತೋಖ್ ಸಿಂಗ್ ಚೌಧರಿ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ'' ಎಂದು ಬರೆದಿದ್ದಾರೆ.
ਕਾਂਗਰਸ ਦੇ ਜਲੰਧਰ ਤੋਂ ਮੈਂਬਰ ਪਾਰਲੀਮੈਂਟ ਸੰਤੋਖ ਸਿੰਘ ਚੌਧਰੀ ਜੀ ਦੀ ਬੇਵਕਤੀ ਮੌਤ ਦਾ ਬੇਹੱਦ ਦੁੱਖ ਹੋਇਆ..ਪ੍ਵਮਾਤਮਾ ਵਿੱਛੜੀ ਰੂਹ ਨੂੰ ਸਕੂਨ ਬਖ਼ਸ਼ੇ ..ਵਾਹਿਗੁਰੂ
— Bhagwant Mann (@BhagwantMann) January 14, 2023
#WATCH | Punjab: Congress MP Santokh Singh Chaudhary was taken to a hospital in an ambulance in Ludhiana, during Bharat Jodo Yatra. Details awaited.
— ANI (@ANI) January 14, 2023
(Earlier visuals) pic.twitter.com/upjFhgGxQk
ಸದ್ಯ ಭಾರತ್ ಜೋಡೋ ಯಾತ್ರೆ ಪಂಜಾಬ್ ನಲ್ಲಿದ್ದು ಈ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆಗಿದ್ದ ಕಾಂಗ್ರೆಸ್ ಸಂಸದ ಸಂತೋಖ್ ಸಿಂಗ್ ಚೌಧರಿ ಅವರ ಆರೋಗ್ಯ ಹಠಾತ್ ಹದಗೆಟ್ಟು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಂತೋಖ್ ಪ್ರಸ್ತುತ ಜಲಂಧರ್ ಸಂಸದರಾಗಿದ್ದು, ಅಲ್ಲಿನ ಜನರಲ್ಲಿ ಉತ್ತಮ ಹಿಡಿತ ಹೊಂದಿದ್ದರು.
ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ, ಅವರು 18 ಜೂನ್ 1946 ರಂದು ಜಲಂಧರ್ನ ಧಲಿವಾಲ್ನಲ್ಲಿ ಜನಿಸಿದರು. ಅಲ್ಲಿಂದ ಪ್ರಾಥಮಿಕ ಶಿಕ್ಷಣ ಪಡೆದ ನಂತರ ವಕೀಲಿ ವೃತ್ತಿ ಆರಂಭಿಸಿದರು. ಆ ನಂತರ ಅವರು ರಾಜಕೀಯಕ್ಕೆ ಪ್ರವೇಶಿಸಿದರು. 2014 ಮತ್ತು 2019ರಲ್ಲಿ ದೇಶಾದ್ಯಂತ ಪ್ರಧಾನಿ ಮೋದಿ ಅಲೆ ಇದ್ದಾಗಲೂ ಕಾಂಗ್ರೆಸ್ ಟಿಕೆಟ್ನಲ್ಲಿ ಗೆದ್ದು ಪಕ್ಷದಲ್ಲಿ ವಿಶೇಷ ಸ್ಥಾನ ಗಳಿಸಿದ್ದರು. ರಾಜ್ಯ ಸರ್ಕಾರದಲ್ಲಿ ಸಂಪುಟ ಸಚಿವರಾಗಿಯೂ ಕೆಲಸ ಮಾಡಿದ್ದರು.
ಬೆಳಿಗ್ಗೆ
7
ಗಂಟೆಗೆ
ಪ್ರಯಾಣ
ಪ್ರಾರಂಭ
ಭಾರತ್
ಜೋಡೋ
ಯಾತ್ರೆ
ಪಂಜಾಬ್ನಲ್ಲಿ
ಮೂರನೇ
ದಿನಕ್ಕೆ
ಕಾಲಿಟ್ಟಿದೆ.
ಶನಿವಾರ
ಬೆಳಿಗ್ಗೆ
7
ಗಂಟೆಗೆ
ಲಾಡೋವಾಲ್
ಟೋಲ್
ಪ್ಲಾಜಾದಿಂದ
ಈ
ಪ್ರಯಾಣ
ಪ್ರಾರಂಭವಾಯಿತು.
ಲುಧಿಯಾನದಿಂದ
ಫಗ್ವಾರಾ
ಕಡೆಗೆ
ಪ್ರಯಾಣಿಸುತ್ತಿದ್ದಾಗ,
ಸಂತೋಖ್
ಅವರು
ಕೂಡ
ಭಾಗವಹಿಸಿದ್ದರು.
ಆದರೆ
ಇದ್ದಕ್ಕಿದ್ದಂತೆ
ಅವರು
ಹೃದಯ
ಬಡಿತ
ಹೆಚ್ಚಾಯಿತು.
ಅವರ
ಭದ್ರತಾ
ಸಿಬ್ಬಂದಿ
ಮತ್ತು
ಕಾಂಗ್ರೆಸ್
ಕಾರ್ಯಕರ್ತರು
ಕೂಡಲೇ
ಅವರನ್ನು
ಆಸ್ಪತ್ರೆಗೆ
ಕರೆದೊಯ್ದರು.
ರಾಹುಲ್
ಗಾಂಧಿ
ಕೂಡ
ಯಾತ್ರೆಯ
ಬಗ್ಗೆ
ತಮ್ಮ
ಅಪ್ಡೇಟ್ಗಳನ್ನು
ತೆಗೆದುಕೊಳ್ಳುತ್ತಲೇ
ಇದ್ದರು.
ಆದರೆ
ಕೆಲವೇ
ಸಮಯದಲ್ಲಿ
ಅವರು
ಸಾವನ್ನಪ್ಪಿದ್ದಾರೆ
ಎಂದು
ವೈದ್ಯರು
ಘೋಷಿಸಿದರು.