Viral News: ದೋಸೆ ಬೇಯಿಸಲು ಮೊಟ್ಟೆಯ ನೀರು ಬಳಕೆ!
ಕೊಚ್ಚಿ, ಮೇ 7: ಸೋಷಿಯಲ್ ಮೀಡಿಯಾದಲ್ಲಿ ಯಾವ ವಿಷಯ ಯಾವಾಗ ಸದ್ದು ಮಾಡುತ್ತೆ ಎಂಬುದನ್ನು ಅಂದಾಜು ಮಾಡುವುದಕ್ಕೆ ಆಗುವುದಿಲ್ಲ. ಅಂಥದ್ದೇ ಒಂದು ಘಟನೆ ಈಗ ಸಖತ್ ಸದ್ದು ಮಾಡುತ್ತಿದೆ.
ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಜೈನ ವ್ಯಕ್ತಿಯೊಬ್ಬರಿಗೆ 'ಅಂಡ ಪಾನಿ'ಯ ದೋಸೆಯನ್ನು ಬಡಿಸಿದ ಕುತೂಹಲಕಾರಿ ಘಟನೆ ನಡೆಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಶಶಿ ತರೂರ್ ಮಾಡಿರುವ ಟ್ವೀಟ್ ವೈರಲ್ ಆಗುತ್ತಿದೆ.
ಚೋಚಿ(ಕೊಚ್ಚಿ)ಯ ವಿಮಾನ ನಿಲ್ದಾಣದ ಲಾಂಜ್ನಲ್ಲಿರುವ ರೆಸ್ಟೋರೆಂಟ್ನಲ್ಲಿ ಅವರ ದೋಸೆಯನ್ನು "ಎಗ್ ವಾಟರ್" ಬಳಸಿ ಬೇಯಿಸುತ್ತಾರೆ ಎಂದು ಮುಂಬೈ ಮೂಲದ ಮನೀಶ್ ಜೈನ್ ಎಂಬುವವರು ಮಂಗಳವಾರ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿತು. ಸಸ್ಯಹಾರಿ ಆಗಿರುವ ಆ ವ್ಯಕ್ತಿಯು ರೆಸ್ಟೋರೆಂಟ್ ನಲ್ಲಿ ಈ ಕುರಿತು ಪ್ರಶ್ನೆ ಮಾಡಿದಾಗ ಅದು ತಮ್ಮ ವೈಖರಿ ಎಂದು ಹೇಳಿದ್ದರು. ಅಲ್ಲದೇ ರೆಸ್ಟೋರೆಂಟಿನಲ್ಲಿ ಮೆನು(ಕೈಪಿಡಿ) ನೀಡುವುದಕ್ಕೆ ನಿರಾಕರಿಸಲಾಗಿತ್ತು ಎಂದು ಮನೀಷ್ ಜೈನ್ ಟ್ವೀಟ್ ಮಾಡಿದ್ದರು. ಈ ಘಟನೆಯ ಕುರಿತು ಶಶಿ ತರೂರ್ ನೀಡಿರುವ ಉತ್ತರದ ಟ್ವೀಟ್ ಬೆನ್ನಲ್ಲೇ ವಿಷಯ ಸಾಕಷ್ಟು ಟ್ರೆಂಡ್ ಆಗುತ್ತಿದೆ.

ಮೊಟ್ಟೆ ನೀರಿನಲ್ಲಿ ಆಯಿತಾ ಮಸಾಲಾ ದೋಸೆ?
ಮನೀಶ್ ಅವರ 'ಮೊಟ್ಟೆ ನೀರು' ದೋಸೆ ಟ್ವೀಟ್ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಕಣ್ಣಿಗೆ ಬಿದ್ದಿದೆ. ಈ ಕುರಿತು ಟ್ವೀಟ್ನಲ್ಲಿ, ಜೈನ್ ಅವರು ಬರವಣಿಗೆಯ ದೋಷ ಸರಿಪಡಿಸಿ, ತರೂರ್ ವ್ಯಂಗ್ಯಾತ್ಮಕ ಪ್ರಾಸ ಬರೆದರ. ಅಕ್ಕಿ ಮತ್ತು ಬದನೆಕಾಯಿಯನ್ನು ಬೇಯಿಸಿರುವುದೇ ದೊಡ್ಡ ಪ್ರಮಾದವಾಗಿದೆಯೇ ಎಂದು ಪ್ರಶ್ನೆ ಮಾಡಿದ್ದರು.
|
ಥಂಡಾ ಬದಲಿಗೆ ಅಂಡಾ ನೀರು ಎಂದು ವ್ಯಂಗ್ಯ
"ಚೋಚಿ" ನಲ್ಲಿ, ಆಕ್ರೋಶಗೊಂಡ ಯುವ ಸಸ್ಯಾಹಾರಿಗೆ ರೇ-ಗನ್ನಿಂದ ಹೊಡೆದಂತೆ ಶಶಿ ತರೂರ್ ಪ್ರತಿಕ್ರಿಯಿಸಿದರು; "ಥಂಡಾ" ಅನ್ನು "ಅಂಡ" ಎಂದು ಕೇಳುವುದು, ಅವರು ದೊಡ್ಡ ಪ್ರಮಾದವಾಗಿ ಬೇಯಿಸಿದ್ದಾರೆ. ಅಕ್ಕಿ ಮತ್ತು ಬದನೆಕಾಯಿಗೆ ಅದು ಅಂಟಿಕೊಂಡಿರಬೇಕು!," ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.

ಟ್ವಿಟ್ಟರ್ ಖಾತೆಗಳಲ್ಲಿ ಅಂಡಾ ದೋಸೆ ಟ್ರೆಂಟಿಂಗ್
ಮನೀಷ್ ಜೈನ್ ಎಂಬ ವ್ಯಕ್ತಿಯು ಅಂಡಾ ದೋಸೆಯ ಬಗ್ಗೆ ಮಾಡಿರುವ ಟ್ವೀಟ್ ಕುರಿತು ಇತರೆ ಟ್ವಿಟ್ಟಿಗರು ಕಿಂಡಲ್ ಮಾಡುತ್ತಿದ್ದಾರೆ. ಇನ್ನೂ ಕೆಲವು ಟ್ವಿಟ್ಟಿಗರು ದಕ್ಷಿಣ ಭಾರತದ ಆಹಾರ ಮತ್ತು ಪ್ರದೇಶದ ಹೆಸರನ್ನೇ ತಪ್ಪಾಗಿ ಬರೆದಿರುವ ವ್ಯಕ್ತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
"ಮನೀಷ್, ಥಂಡ ಪಾನಿ ಎಂದರೆ ಅಂಡಾ ಪಾನಿಯ ಹಾಗಲ್ಲ. ಮೇಲ್ಮೈಯನ್ನು ತಣ್ಣಗಾಗಲು ದೋಸೆ ಪ್ಯಾನ್ ಮೇಲೆ ನೀರನ್ನು ಚಿಮುಕಿಸಲಾಗುತ್ತದೆ, ಇದರಿಂದ ಹಿಟ್ಟು ನೆಲೆಗೊಳ್ಳಲು ಸಮಯವಿರುತ್ತದೆ ಮತ್ತು ದೋಸೆ ಸರಿಯಾಗಿ ಬೇಯಿಸುತ್ತದೆ. ಸಸ್ಯಾಹಾರಿ ದೋಸೆಯ ಬೆಲೆಗೆ ಯಾರಾದರೂ ನಿಮಗೆ ಉಚಿತ ಮೊಟ್ಟೆಯನ್ನು ಏಕೆ ನೀಡುತ್ತಾರೆ? ಅರ್ಥವಿಲ್ಲ!," ಎಂದು ಪ್ರಶ್ನೆ ಮಾಡಿದ್ದಾರೆ.
| "https://twitter.com/CGH_Earth?ref_src=twsrc%5Etfw">@CGH_Earth — Manish Jain (@InsureMeForever) May 3, 2022 |
ತಮ್ಮ ಟ್ವೀಟ್ ಬಗ್ಗೆ ಮನೀಶ್ ಜೈನ್ ಸ್ಪಷ್ಟನೆ
ಮುಂಬೈನ ವ್ಯಕ್ತಿ ಮನೀಷ್ ಜೈನ್ ತಮ್ಮ ಟ್ವೀಟ್ ಸಂದೇಶದಲ್ಲಿನ ತಪ್ಪಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಕೊಚ್ಚಿ ತಪ್ಪಾಗಿ ಕಾಗುಣಿತವನ್ನು ಸ್ಪಷ್ಟಪಡಿಸಿದರು. "ನಾನು ಆ ಸಮಯದಲ್ಲಿ ನನ್ನ ವಿಮಾನವನ್ನು ಹತ್ತಲು ಹೋಗುತ್ತಿದ್ದೆ. ನಾನು ಅವಸರದಲ್ಲಿದ್ದು ವಿಮಾನ ಹತ್ತುತ್ತಿದ್ದೆ ಮತ್ತು ನನ್ನ ಫೋನ್ ಅನ್ನು ಫ್ಲೈಟ್ ಮೋಡ್ಗೆ ಹಾಕುವ ಮೊದಲು ಟ್ವೀಟ್ ಕಳುಹಿಸಿದ್ದೆನು. ನನ್ನ ಮೊಬೈಲಿನಲ್ಲಿ ನೆಟ್ವರ್ಕ್ ಬರುವ ಹೊತ್ತಿದೆ ಈ ವಿಷಯ ಸಾಕಷ್ಟು ಸುದ್ದಿಯಾಗಿತ್ತು. ನಾನು ಕೋಪದಲ್ಲಿ ಮತ್ತು ಆತುರದಲ್ಲಿ ಇದ್ದರಿಂದ ಕೊಚ್ಚಿಯ ಕಾಗುಣಿತದಲ್ಲಿ ದೋಷವಾಗಿದೆ," ಎಂದು ಸ್ಪಷ್ಟನೆ ನೀಡಿದ್ದಾರೆ.
"ಜನರು ನನ್ನ ಬಗ್ಗೆ ಗೇಲಿ ಮಾಡಿದರು. ನನ್ನ ಟ್ವೀಟ್ನಲ್ಲಿ ದೋಸೆ ಬೇಯಿಸಲಾಗಿದೆ ಎಂದು ಬರೆದಿದ್ದರಿಂದ ನಾನು ಕೂಡ ಟ್ರೋಲ್ಗೆ ಒಳಗಾಗಿದ್ದೇನೆ. ಆದರೆ, ಅದು ಪರವಾಗಿಲ್ಲ. ನಾನು ಘಟನೆಯನ್ನು ಫ್ಲ್ಯಾಗ್ ಮಾಡಿದ್ದು ಒಳ್ಳೆಯದು ಎಂದು ಹಲವರು ಹೇಳುತ್ತಿದ್ದಾರೆ. ನಾನು ಈ ಕುರಿತು ಒಂದು ನಿಲುವು ತೆಗೆದುಕೊಂಡಿದ್ದೇನೆ," ಎಂದು ಮನೀಷ್ ಜೈನ್ ಹೇಳಿದ್ದಾರೆ.












Click it and Unblock the Notifications