MP Assembly Elections 2023: ಫಕೀರನಿಂದ ಚಪ್ಪಲಿ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ!
ಭೋಪಾಲ್ ನವೆಂಬರ್ 18: ಚುನಾವಣೆಯಲ್ಲಿ ಗೆಲ್ಲಲು ಏನು ಮಾಡಬೇಕಾಗಿಲ್ಲ. ಒಂದಿಷ್ಟು ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಬಿಟ್ಟರೆ ಸಾಕು. ಅದೆಂದರೆ ಕೆಲವೊಮ್ಮೆ ಜನರ ಪಾದ ಮುಟ್ಟೋದು, ಇನ್ನು ಕೆಲವೊಮ್ಮೆ ವಿಚಿತ್ರ ರೀತಿಯಲ್ಲಿ ಪ್ರಚಾರ ಮಾಡೋದು. ಇಷ್ಟು ಮಾಡಿದರೆ ಸಾಕು ಆಮೇಲೆ ಜನವೋ ಜನ.
ಚುನಾವಣಾ ಸಮಯದಲ್ಲಿ ರಾಜಕಾರಣಿಗಳ ಇಂತಹ ಅನೇಕ ವೀಡಿಯೊಗಳು ವೈರಲ್ ಆಗುತ್ತವೆ. ಅದರಲ್ಲಿ ಅವರು ತಮ್ಮ ವಿಶಿಷ್ಟ ಪ್ರಚಾರಗಳು ಅಥವಾ ಅವರ ವಿಚಿತ್ರ ಚಟುವಟಿಕೆಗಳಿಂದ ಸುದ್ದಿ ಮಾಡುತ್ತಾರೆ. ಮಧ್ಯಪ್ರದೇಶದಲ್ಲಿ ಮತದಾನಕ್ಕೂ ಮುನ್ನ ಚುನಾವಣಾ ಪ್ರಚಾರದ ವೇಳೆ ನಾಯಕರೊಬ್ಬರ ಇದೇ ರೀತಿಯ ವಿಡಿಯೋ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ ಅವರು ವಯಸ್ಸಾದ ವ್ಯಕ್ತಿಯಿಂದ ಚಪ್ಪಲಿಯಿಂದ ಹೊಡೆಸಿಕೊಂಡಿದ್ದಾರೆ.

ಬಾಬಾನ ಚಪ್ಪಲಿ ಆಶೀರ್ವಾದ
ಶೂ ಅಥವಾ ಚಪ್ಪಲಿಯಲ್ಲಿ ಹೊಡೆಸಿಕೊಳ್ಳುವುದು ಅವಮಾನವೆಂದು ಪರಿಗಣಿಸಲಾಗಿದ್ದರೂ, ಮಧ್ಯಪ್ರದೇಶದ ರತ್ಲಾಮ್ನ ಕಾಂಗ್ರೆಸ್ ಅಭ್ಯರ್ಥಿ ಪರಸ್ ಸಕ್ಲೇಚಾ ಅವರು ತಮ್ಮ ಕೆನ್ನೆ ಮತ್ತು ತಲೆಯ ಮೇಲೆ ಚಪ್ಪಲಿಯಿಂದ ಹೊಡೆಸಿಕೊಂಡು ಸಂತೋಷಗೊಂಡಿದ್ದಾರೆ. ಜೊತೆಗೆ ಇದು ಫಕೀರನಿಂದ ತಾವು ಪಡೆದ ಆಶೀರ್ವಾದ ಎಂದು ಹೇಳಿಕೊಂಡಿದ್ದಾರೆ.
ವಾಸ್ತವವಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಕಪಾಳಮೋಕ್ಷ ಮಾಡುತ್ತಿರುವ ವೃದ್ಧ ಫಕೀರ. ಚಪ್ಪಲಿಯಿಂದ ಆಶೀರ್ವಾದ ನೀಡುವ ಫಕೀರ ಎಂದೇ ಹೆಸರುವಾಸಿ. ವೀಡಿಯೋದಲ್ಲಿ ಫಕೀರ್ ಪರಾಸ್ ಸಕ್ಲೇಚಾಗೆ 'ಬಸ್ ಬಸ್, ಹೋ ಗಯಾ' (ಸಾಕು, ಮುಗಿತು) ಎಂದು ಬಲವಾಗಿ ಹೊಡೆಯುವ ಮೂಲಕ ಆಶೀರ್ವದಿಸಿದ್ದಾರೆ.
ಮತದಾನದ ದಿನದಂದು ವಿಡಿಯೋ ವೈರಲ್
ಶುಕ್ರವಾರ ಮತದಾನದ ದಿನದಂದು ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಸಕ್ಲೇಚಾ ಅವರು ಈ ವೀಡಿಯೊದಲ್ಲಿ ವ್ಯಕ್ತಿ ಪ್ರಸಿದ್ಧ ಫಕೀರ್ ಬಾಬಾ ಎಂದು ಹೇಳಿದ್ದಾರೆ. ಅವರನ್ನು ಆ ಪ್ರದೇಶದಲ್ಲಿ ಪ್ರೀತಿಯಿಂದ 'ಅಬ್ಬಾ' ಎಂದು ಕರೆಯಲಾಗುತ್ತದೆ. ಇವರು ಮೋಹೋ ರಸ್ತೆಯಲ್ಲಿರುವ ದರ್ಗಾದಲ್ಲಿ ವಾಸಿಸುತ್ತಾರೆ ಮತ್ತು ಹೆಚ್ಚಿನ ಗೌರವವನ್ನು ಹೊಂದಿದ್ದಾರೆ. ಜನರು ಅವನಿಗೆ ಲುಂಗಿ, ಬಟ್ಟೆ ಮತ್ತು ಚಪ್ಪಲಿಗಳನ್ನು ಉಡುಗೊರೆಯಾಗಿ ನೀಡಲು ಬಯಸುತ್ತಾರೆ, ಆದರೆ ಅವರು ಕೆಲವನ್ನು ಮಾತ್ರ ಸ್ವೀಕರಿಸುತ್ತಾರೆ ಮತ್ತು ಉಳಿದವುಗಳನ್ನು ಎಸೆಯುತ್ತಾರೆ.
ಬಾಬಾನಿಗೆ ಚಪ್ಪಲಿ ಕೊಟ್ಟ ಕಾಂಗ್ರೆಸ್ ಅಭ್ಯರ್ಥಿ
ಮತದಾನ ಮಾಡುವ ಒಂದು ದಿನ ಮೊದಲು ಸಕ್ಲೇಚಾ ಬಾಬಾರವರ ಆಶೀರ್ವಾದ ಪಡೆಯಲು ಹೋದಾಗ ಒಂದು ಜೊತೆ ಚಪ್ಪಲಿಯನ್ನು ತೆಗೆದುಕೊಂಡು ಹೋಗಿದ್ದರು. ಫಕೀರ ಬಾಬಾ ಅವರ ಚಪ್ಪಲಿಯನ್ನು ಸ್ವೀಕರಿಸಿ ಚಪ್ಪಲಿಯಿಂದ ಹೊಡೆದು ಆಶೀರ್ವದಿಸಿದರು. ಬಾಬಾ ನನ್ನಿಂದ ಎಲ್ಲಾ ದುಷ್ಟ ಛಾಯೆಗಳನ್ನು ತೆಗೆದುಹಾಕಿದ್ದಾರೆ ಎಂದು ಸಕ್ಲೇಚಾ ಹೇಳಿಕೊಂಡಿದ್ದಾರೆ.
ಸಕ್ಲೇಚಾ ಕಾಂಗ್ರೆಸ್ ಅಭ್ಯರ್ಥಿ
ಬಿಜೆಪಿಯ ಕೋಟ್ಯಾಧಿಪತಿ ಶಾಸಕ ಚೇತನ್ ಕಶ್ಯಪ್ ವಿರುದ್ಧ ಸಕ್ಲೇಚಾ ಸ್ಪರ್ಧಿಸುತ್ತಿದ್ದಾರೆ. 2008 ರಲ್ಲಿ ಸಕ್ಲೇಚಾ ಅವರು ಸ್ವತಂತ್ರವಾಗಿ ಸ್ಪರ್ಧಿಸಿ ರತ್ಲಾಮ್ ವಿಧಾನಸಭಾ ಸ್ಥಾನವನ್ನು ಗೆದ್ದರು. ಆದರೆ 2013 ರಲ್ಲಿ ಅವರು ಕಶ್ಯಪ್ ವಿರುದ್ಧ ಸೋತು ಮೂರನೇ ಸ್ಥಾನ ಪಡೆದರು.
-
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ












Click it and Unblock the Notifications