ಮಕ್ಕಳೊಂದಿಗೆ ನೃತ್ಯ ಮಾಡಿ ದೀಪಾವಳಿ ಆಚರಿಸಿದ ಸಿಎಂ ಚೌಹಾಣ್; ವಿಡಿಯೋ ನೋಡಿ
ಭೋಪಾಲ್, ಅ.23: ಕೊರೊನಾ ವೈರಸ್ನಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳೊಂದಿಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಭಾನುವಾರ ದೀಪಾವಳಿ ಆಚರಿಸಿದರು.
ಕಳೆದ ಶುಕ್ರವಾರ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ತಮ್ಮ ನಿವಾಸದಲ್ಲಿ ಇದೇ ರೀತಿಯ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ನಾವು ಗಡಿ ಕಾಯುತ್ತಿದ್ದೇವೆ ನೀವು ಸಂತೋಷದಿಂದ ದೀಪಾವಳಿ ಆಚರಿಸಿ: ಹೆಮ್ಮೆಯ ಯೋಧರು!
ರಾಜ್ಯದ ರಾಜಧಾನಿ ಭೋಪಾಲ್ನಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಮಕ್ಕಳೊಂದಿಗೆ ಹಾಡುವುದು ಮತ್ತು ನೃತ್ಯ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದರಲ್ಲಿ ಸಿಎಂ ಪತ್ನಿ ಕೂಡ ಸಾಥ್ ನೀಡಿದ್ದಾರೆ.
"ಕೋವಿಡ್ ಯುಗದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳೊಂದಿಗೆ ದೀಪಾವಳಿ" ಎಂದು 63 ವರ್ಷದ ಬಿಜೆಪಿ ನಾಯಕ ಟ್ವಿಟರ್ನಲ್ಲಿ ಹಿಂದಿಯಲ್ಲಿ ಬರೆದುಕೊಂಡಿದ್ದಾರೆ. ಸಿಎಂ ಕಚೇರಿಯಿಂದ ಪೋಸ್ಟ್ ಮಾಡಿದ ದೃಶ್ಯಗಳಲ್ಲಿ ಮುಖ್ಯಮಂತ್ರಿಗಳು ಮಕ್ಕಳೊಂದಿಗೆ ದೀಪಗಳನ್ನು ಬೆಳಗಿಸುವುದನ್ನು ನೋಡಬಹುದು.
मेरे बच्चों, तुम्हारे मुख पर जो यह हंसी, खुशी और आनंद है, यह सदैव अक्षुण्ण रहे, इसके लिए मुझे जो कुछ भी करना पड़ेगा, मैं करूंगा। हमारी भाजपा सरकार करेगी।
— Shivraj Singh Chouhan (@ChouhanShivraj) October 23, 2022
तुम सुखपूर्वक, आनंद के साथ अपना जीवन सुगमता से व्यतीत करो, यही तुम्हारे मामा शिवराज का संकल्प है। #दिवाली pic.twitter.com/ApsU9ddUnE
"ನನ್ನ ಮಕ್ಕಳೇ, ನಿಮ್ಮ ಮುಖದಲ್ಲಿ ಈ ನಗು, ಸಂತೋಷ ಮತ್ತು ಸಂತೋಷವು ಶಾಶ್ವತವಾಗಿ ಉಳಿಯಲು ನಾನು ಏನು ಬೇಕಾದರೂ ಮಾಡುತ್ತೇನೆ, ನಮ್ಮ ಬಿಜೆಪಿ ಸರ್ಕಾರ ಅದನ್ನು ಮಾಡುತ್ತದೆ. ನೀವು ನಿಮ್ಮ ಜೀವನವನ್ನು ಆರಾಮವಾಗಿ, ಸಂತೋಷದಿಂದ, ಖುಷಿಯಿಂದ ಕಳೆಯುತ್ತಿರಿ. ಇದು ನಿಮ್ಮ ಚಿಕ್ಕಪ್ಪ ಶಿವರಾಜ್ ಅವರ ಪ್ರತಿಜ್ಞೆ" ಎಂದು ಶಿವರಾಜ್ ಸಿಂಗ್ ಚೌಹಾಣ್ ಬರೆದುಕೊಂಡಿದ್ದಾರೆ.
ಸೋಮವಾರದಂದು ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಲು ದೇಶವೇ ಸಜ್ಜಾಗಿದೆ.
ಕಳೆದ ಶುಕ್ರವಾರ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ತಮ್ಮ ನಿವಾಸದಲ್ಲಿ ಕೊರೊನಾದಿಂದಾಗಿ ಪೋಷಕರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳೊಂದಿಗೆ ಸಂವಾದ ನಡೆಸಿದ್ದರು. ಮಕ್ಕಳಿಗೆ ಸರಕಾರದ ಯೋಜನೆಯ ಲಾಭ ಸಿಗುವಂತೆ ನೋಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರು.
ಅವರ ಈ ಕ್ರಮಕ್ಕೆ ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಪ್ರಶಂಸೆ ವ್ಯಕ್ತಪಡಿಸಿದ್ದರು.