Get Updates
Get notified of breaking news, exclusive insights, and must-see stories!

ಆಂಧ್ರದ ಪಲ್ನಾಡಿನಲ್ಲಿ ಟಿಡಿಪಿ, ವೈಎಸ್‌ಆರ್‌ಸಿಪಿ ಕಾರ್ಯಕರ್ತರ ನಡುವೆ ಘರ್ಷಣೆ

ಪಲ್ನಾಡು ಡಿಸೆಂಬರ್ 17: ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ಶುಕ್ರವಾರ ಆಡಳಿತಾರೂಢ ವೈಎಸ್‌ಆರ್‌ಸಿಪಿ ಮತ್ತು ವಿರೋಧ ಪಕ್ಷದ ಟಿಡಿಪಿ ಕಾರ್ಯಕರ್ತರ ನಡುವೆ ಹಿಂಸಾತ್ಮಕ ಘರ್ಷಣೆಗಳು ನಡೆದಿವೆ. ಘರ್ಷಣೆಯ ನಂತರ ನೆರೆದಿದ್ದ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿರುವುದು ವರದಿಯಾಗಿದೆ.

ಮಾಚರ್ಲಾ ಪಕ್ಷದ ಉಸ್ತುವಾರಿ ಜೂಲಕಾಂತಿ ಬ್ರಹ್ಮಾ ರೆಡ್ಡಿ ನೇತೃತ್ವದಲ್ಲಿ ಟಿಡಿಪಿ ಬೆಂಬಲಿಗರು 'ಇದೇಮಿ ಖರ್ಮ' ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾಗ ಘರ್ಷಣೆ ನಡೆದಿದೆ. ಉಭಯ ಪಕ್ಷಗಳ ಬೆಂಬಲಿಗರು ಪರಸ್ಪರ ಘರ್ಷಣೆ ಮತ್ತು ಕಲ್ಲು ತೂರಾಟ ನಡೆಸಿದ್ದರಿಂದ ಅವರಲ್ಲಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘರ್ಷಣೆಯಲ್ಲಿ ಟಿಡಿಪಿ ಪಕ್ಷದ ಕಚೇರಿ ಮತ್ತು ಅದರ ಮುಖಂಡರ ವಾಹನಗಳಿಗೆ ಹಾನಿಯಾಗಿರುವ ಆರೋಪ ಮಾಡಿದ್ದು, ಘಟನೆಯನ್ನು ತೀವ್ರವಾಗಿ ಖಂಡಿಸಿದೆ.

ಟಿಡಿಪಿ ಕಚೇರಿಯ ಪಿಠೋಪಕರಣಗಳು ಧ್ವಂಸ

ಟಿಡಿಪಿ ಕಚೇರಿಯ ಪಿಠೋಪಕರಣಗಳು ಧ್ವಂಸ

ಸ್ಥಳೀಯ ಶಾಸಕ ಪಿನ್ನೆಲ್ಲಿ ರಾಮಕೃಷ್ಣ ರೆಡ್ಡಿ ಅವರ ಸಹೋದರ, ವೈಎಸ್‌ಆರ್‌ಸಿಪಿ ಕಾರ್ಯಕರ್ತರು ವಿರೋಧ ಪಕ್ಷದ ಟಿಡಿಪಿ ಕಚೇರಿಯ ಪಿಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ವರದಿಯಾಗಿದೆ.

ಪಕ್ಷದ ನಾಯಕರ ಕಾರುಗಳನ್ನು ಧ್ವಂಸಗೊಳಿಸಿದಾಗ ಟಿಡಿಪಿ ಬೆಂಬಲಿಗರ ಒಡೆತನದ ಅಂಗಡಿಗಳಿಗೂ ಬೆಂಕಿ ಹಚ್ಚಲಾಗಿದೆ. ಸ್ಥಳೀಯ ಪೊಲೀಸರು ಮೌನ ವಹಿಸಿದ್ದಾರೆ ಮತ್ತು ವೈಎಸ್‌ಆರ್‌ಸಿಪಿ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಟಿಡಿಪಿ ಕಚೇರಿಗಳ ಮೇಲೆ ದಾಳಿ

ಟಿಡಿಪಿ ಕಚೇರಿಗಳ ಮೇಲೆ ದಾಳಿ

ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಘಟನೆಯನ್ನು ಖಂಡಿಸಿದ್ದಾರೆ ಮತ್ತು ವೈಎಸ್‌ಆರ್‌ಸಿಪಿ ಗುಂಪು ಪೊಲೀಸರ ಬೆಂಬಲದೊಂದಿಗೆ ಟಿಡಿಪಿ ಕಚೇರಿಗಳ ಮೇಲೆ ದಾಳಿ ಮಾಡಿದೆ ಎಂದು ದೂರಿದ್ದಾರೆ.

ಮಾಚರ್ಲ ಕ್ಷೇತ್ರದಲ್ಲಿ ವೈಸಿಪಿ ರೌಡಿಗಳು ಪೊಲೀಸರ ನೆರವಿನಿಂದ ಟಿಡಿಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವುದು ಘೋರ ಘಟನೆ, ಖರ್ಮ ರಾಜ್ಯಕ್ಕಾಗಿ ಕಾರ್ಯಕ್ರಮ ಆಯೋಜಿಸುತ್ತಿದ್ದ ಟಿಡಿಪಿ ಮೇಲೆ ವೈಸಿಪಿ ರೌಡಿಗಳು ದಾಳಿ ನಡೆಸಿರುವುದು ರಾಜ್ಯದಲ್ಲಿ ನಡೆಯುತ್ತಿರುವ ಅರಾಜಕತೆಯ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ. ಲೋಕೇಶ್ ಹೇಳಿದರು. ಇನ್ನು ಟಿಡಿಪಿ ಕಾರ್ಯಕರ್ತರ ಕಾರುಗಳಿಗೆ ಬೆಂಕಿ ಹಚ್ಚಿ ಹಲ್ಲೆ ನಡೆಸಿದ ವೈಸಿಪಿ ಗೂಂಡಾಗಳನ್ನು ಕೂಡಲೇ ಬಂಧಿಸಬೇಕು. ನಾವು ವೈಸಿಪಿ ರೌಡಿ ಗುಂಪುಗಳ ದಾಳಿಯಲ್ಲಿ ಗಾಯಗೊಂಡಿರುವ ಟಿಡಿಪಿ ಮುಖಂಡರು ಹಾಗೂ ಕಾರ್ಯಕರ್ತರ ಬೆಂಬಲಕ್ಕೆ ನಿಂತಿದ್ದೇವೆ ಎಂದರು.

ಟಿಡಿಪಿ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಗುಂಟೂರು ಡಿಐಜಿ ಅವರನ್ನು ಸಂಪರ್ಕಿಸಿದ್ದಾರೆ ಮತ್ತು ಮಾಚೆರ್ಲಾದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಾಗ ಪೊಲೀಸರು ಏಕೆ ಕ್ರಮಕೈಗೊಳ್ಳಲಿಲ್ಲ ಎಂದು ಕೇಳಿದ್ದಾರೆ ಎಂದು ಪಕ್ಷವು ಪ್ರಕಟಣೆಯಲ್ಲಿ ತಿಳಿಸಿದೆ.

144 ಸೆಕ್ಷನ್ ಜಾರಿ

144 ಸೆಕ್ಷನ್ ಜಾರಿ

ಎಸ್ಪಿ ರವಿಶಂಕರ್ ರೆಡ್ಡಿ ಇಂಡಿಯಾ ಟುಡೇಗೆ ಮಾತನಾಡಿ, "ಈ ಪ್ರದೇಶದಲ್ಲಿ 144 ಸೆಕ್ಷನ್ ಅನ್ನು ಜಾರಿಗೊಳಿಸಲಾಗಿದೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ" ಎಂದು ಹೇಳಿದರು.

"ಮಾಚರ್ಲಾಕ್ಕೆ ಆಗಮಿಸಿದ ರಾಜಕೀಯ ಪಕ್ಷಗಳೊಂದಿಗೆ ಸಂಪರ್ಕ ಹೊಂದಿರುವ ಕೆಲವು ಬಣದ ಮುಖಂಡರು ಇದರಲ್ಲಿ ಇದ್ದರು. ನಾವು ಪ್ರದೇಶಗಳನ್ನು ಹುಡುಕಿದೆವು ಮತ್ತು ಸಿಸಿ ಕ್ಯಾಮರಾಗಳ ದೃಶ್ಯಗಳನ್ನು ತೆಗೆದುಕೊಂಡಿದ್ದೇವೆ. ಅವರಲ್ಲಿ ಕೆಲವರನ್ನು ಗಮನಿಸಿದ್ದೇವೆ. ಅವರ ಬಳಿ ಯಾವುದೇ ಆಯುಧಗಳೂ ಇರಲಿಲ್ಲ'' ಎಂದು ಪಲನಾಡು ಎಸ್ಪಿ ತಿಳಿಸಿದ್ದಾರೆ.

10 ಜನರ ಬಂಧನ

10 ಜನರ ಬಂಧನ

"ಇದು ಇಲ್ಲಿನ ರಾಜಕೀಯ ಪಕ್ಷಗಳಿಂದ ಪ್ರಚೋದನೆಯಾಗಿದೆ ಎಂದು ನಾವು ಹೇಳಬಹುದಾದರೂ, ಇದು ಈಗ 30 ರಿಂದ 40 ವರ್ಷಗಳಿಂದ ಬಣಗಳ ನಡುವಿನ ಕದನವಾಗಿದೆ. ಇದು ರಾಜಕೀಯ ಯುದ್ಧವಲ್ಲ. ನಾವು ಪರಿಸ್ಥಿತಿಯನ್ನು ನಿಯಂತ್ರಿಸಿದ್ದೇವೆ. ಹೆಚ್ಚುವರಿಯಾಗಿ ಪಡೆಗಳನ್ನು ನಿಯೋಜಿಸಲಾಗಿದೆ ಮತ್ತು ಇಲ್ಲಿಯವರೆಗೆ 10 ಜನರನ್ನು ಬಂಧಿಸಲಾಗಿದೆ" ಎಂದು ಎಸ್ಪಿ ಇಂಡಿಯಾ ಟುಡೇಗೆ ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+