ಹಿಂದೂ ಮಹಾಸಾಗರದಲ್ಲಿ ಸಂಶೋಧನೆ ನೆಪದಲ್ಲಿ ಚೀನಾ ಹಡಗುಗಳು: ತಜ್ಞರ ಎಚ್ಚರಿಕೆ
ನವದೆಹಲಿ, ಜನವರಿ 23: ಹಿಂದೂ ಮಹಾಸಾಗರದಲ್ಲಿ ಚೀನಾದ ಹಡಗುಗಳು ಸಂಶೋಧನೆ ಹೆಸರಿನಲ್ಲಿ ಭಾರತದ ಜಲ ಗಡಿ ಸಮೀಪ ಸಂಚರಿಸುತ್ತಿವೆ. ಕಳೆದ ಎರಡು ವರ್ಷಗಳಿಂದ ಈ ಹಡಗುಗಳ ಚಲನವಲನಗಳನ್ನು ಪರಿಶೀಲಿಸುತ್ತಿರುವ ಓಪನ್ ಸೋರ್ಸ್ ಇಂಟೆಲಿಜೆನ್ಸ್ (ಒಎಸ್ಐಎನ್ಟಿ) ಪರಿಣತರು, ಇದು ನೌಕಾಪಡೆಯ ಚಟುವಟಿಕೆಗಳಾಗಿರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಹಿಂದೂ ಮಹಾಸಾಗರದಲ್ಲಿ ನಾಗರಿಕ ಉದ್ದೇಶದ ಸಂಶೋಧನೆ ಹೆಸರಿನಲ್ಲಿ ಚೀನಾ ನೌಕಾ ತಂಡ ನಡೆಸುತ್ತಿರುವ ಚಟುವಟಿಕೆಗಳು ಸೇನಾ ಬಳಕೆಗೂ ಮಹತ್ವದ್ದಾಗಿದೆ. ಚೀನಾದ ಅನೇಕ ಹಡಗುಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಸಮೀಪವೂ ಕಂಡುಬಂದಿದ್ದವು ಎಂದು ನೌಕಾಪಡೆಯ ನೇವಲ್ ನ್ಯೂಸ್ ಮತ್ತು ಸುಟ್ಟಾನ್ ಮಾಹಿತಿ ನೀಡಿವೆ ಎಂದು 'ಇಂಡಿಯಾ ಟುಡೆ' ವರದಿ ಮಾಡಿದೆ.
ಈ ಮೊದಲು ಹಿಂದೂ ಮಹಾಸಾಗರದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಚೀನಾದ ಸಮೀಕ್ಷಾ ಹಡಗು ಕ್ಸಿಯಾಂಗ್ ಯಾಂಗ್ ಹೊಂಗ್ 3, ಈಗ ದಕ್ಷಿಣ ಚೀನಾ ಸಮುದ್ರದಲ್ಲಿದೆ. ಸೀಬೆಡ್ನ ನಕಾಶೆಗಳ ಸಂಗ್ರಹದ ಜತೆಗೆ ಅನೇಕ ಚಟುವಟಿಕೆಗಳನ್ನು ಈ ಹಡಗು ನಡೆಸಿದೆ.

ಇಂಡೋನೇಷ್ಯಾದ ಜಲ ಪ್ರದೇಶದಲ್ಲಿ ತನ್ನ ಸ್ಥಿತಿಯನ್ನು ಬಹಿರಂಗಪಡಿಸದೆ ಅನುಮಾನಾಸ್ಪದ ಚಟುವಟಿಕೆಗಳನ್ನು ಈ ಹಡಗು ನಡೆಸುತ್ತಿತ್ತು ಎನ್ನುವುದು ವಿವಾದ ಸೃಷ್ಟಿಸಿತ್ತು. ಚೀನಾದ ಈ ಸಂಶೋಧನೆ ಮತ್ತು ಸಮೀಕ್ಷೆ ಹಡಗು ಸ್ವಯಂಚಾಲಿತ ಗುರುತಿನ ವ್ಯವಸ್ಥೆ (ಐಎಎಸ್) ಇಲ್ಲದೆ ತನ್ನ ನೆಲೆಯಲ್ಲಿ ಚಲಿಸುತ್ತಿರುವುದಕ್ಕೆ ಇಂಡೋನೇಷ್ಯಾದ ಸಾಗರ ಭದ್ರತಾ ಸಂಸ್ಥೆ ಬಕ್ಲಾಮಾ ಅಡ್ಡಿಪಡಿಸಿತ್ತು. ಬಳಿಕ ಕಡಲು ಕಾವಲು ಪಡೆಗಳು ಕ್ಷಿಯಾಂಗ್ ಯಾಂಗ್ ಹೊಂಗ್ ಹಡಗನ್ನು ತನ್ನ ಆರ್ಥಿಕ ವಲಯದಿಂದ ಹೊರಗೆ ಕಳುಹಿಸಿತ್ತು.
ಈ ಚಟುವಟಿಕೆಗಳನ್ನು ಗಮನಿಸಿದಾಗ ಹಿಂದೂ ಮಹಾಸಾಗರದಲ್ಲಿ ಚೀನಾ ಅತ್ಯಂತ ವ್ಯವಸ್ಥಿತವಾಗಿ ಜಲಪ್ರದೇಶಗಳನ್ನು ಪರಿಶೀಲಿಸುತ್ತಿದೆ ಎನ್ನುವುದು ಸ್ಪಷ್ಟವಾಗಿದೆ. ಇದು ನಾಗರಿಕ ಸಂಶೋಧನೆಯಲ್ಲ. ಆದರೆ ಸೇನಾ ಕಾರ್ಯಯೋಜನೆಯಾಗಿದೆ. ಇದರ ಹಿಂದೆ ಬೇರೆ ಯಾವುದೋ ಮಹತ್ವದ ಮತ್ತು ಭಾರತಕ್ಕೆ ಅಪಾಯಕಾರಿಯಾಗಬಲ್ಲ ಯೋಜನೆ ಇರುವಂತಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications