ಚೆನ್ನೈ: ಹಳಿತಪ್ಪಿದ ಉಪನಗರ ರೈಲಿನ ಖಾಲಿ ಬೋಗಿಗಳು, ತಪ್ಪಿದ ಅನಾಹುತ, ವಿವಿಧ ರೈಲುಗಳ ಸಂಚಾರ ವ್ಯತ್ಯಯ
ಚೆನ್ನೈ, ಅಕ್ಟೋಬರ್ 24: ಚೆನ್ನೈ ಕಡೆಗೆ ಹೊರಟಿದ್ದ ಎಲೆಕ್ಟ್ರಿಕಲ್ ಮಲ್ಟಿಪಲ್ ಯೂನಿಟ್ (ಇಎಂಯು) ಉಪನಗರ ರೈಲಿನ ಖಾಲಿ ಬೋಗಿಗಳು ಹಳಿತಪ್ಪಿದ ಘಟನೆ ಇಲ್ಲಿನ ಅವಡಿ ರೈಲು ನಿಲ್ದಾಣ ಬಳಿ ನಡೆದಿದೆ. ಇದರಿಂದಾಗಿ ಇನ್ನಿತರ ರೈಲುಗಳಿಗೆ ತೊಂದರೆ ಉಂಟಾಗಿ ಕೆಲ ಕಾಲ ಸಂಚಾರ ಅಡಚಣೆ ಉಂಟಾಯಿತು.
ಘಟನೆಯಿಂದಾಗಿ ಚೆನ್ನೈ ಸೆಂಟ್ರಲ್ ಕಡೆಗೆ ಹೊರಟಿದ್ದ ಇಂಟರ್ ಅರ್ಬನ್ ಬಹು ಘಟಕಗಳು (EMU) ರೈಲುಗಳ ಕಾರ್ಯಾಚರಣೆ ವಿಳಂಬಗೊಂಡವು. ಇದಷ್ಟೇ ಅಲ್ಲದೇ ವಂದೇ ಭಾರತ್ ಎಕ್ಸ್ಪ್ರೆಸ್ (ಚೆನ್ನೈ-ಮೈಸೂರು), ಶತಾಬ್ಧಿ (ಚೆನ್ನೈ-ಮೈಸೂರು) ಮತ್ತು ಕೋವೈ ಎಕ್ಸ್ಪ್ರೆಸ್ (ಚೆನ್ನೈ-ಕೊಯಂಬತ್ತೂರು) ಸೇರಿದಂತೆ ಚೆನ್ನೈ ಸೆಂಟ್ರಲ್ನಿಂದ ಮೂರು ಎಕ್ಸ್ಪ್ರೆಸ್ ರೈಲುಗಳನ್ನು ಅಂಬತ್ತೂರು ರೈಲು ನಿಲ್ದಾಣದ ಬಳಿ ನಿಂತ ದೃಶ್ಯಗಳು ಕಂಡು ಬಂತು.

ಚೆನ್ನೈ ಸೆಂಟ್ರಲ್ನಿಂದ ಹೊರಡುವ ಮೂರು ಎಕ್ಸ್ಪ್ರೆಸ್ ರೈಲುಗಳಾದ ಸಪ್ತಗಿರಿ ಎಕ್ಸ್ಪ್ರೆಸ್, ಬೃಂದಾವನ ಎಕ್ಸ್ಪ್ರೆಸ್ ಮತ್ತು ಡಬಲ್ ಡೆಕ್ಕರ್ ಎಕ್ಸ್ಪ್ರೆಸ್ ರೈಲು ಸಂಚಾರ ಸಮಯದಲ್ಲಿ ಬದಲಾವಣೆ ಮಾಡಬೇಕಾಯಿತು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ತೊಂದರೆ ಆಗಿಲ್ಲ ಎಂದು ಚೆನ್ನೈ ದಕ್ಷಿಣ ರೈಲ್ವೆ ತಿಳಿಸಿದೆ.
ರೈಲ್ವೆ ಅಧಿಕಾರಿಗಳು ಹೇಳೋದೇನು?
ಉಪನಗರ ರೈಲಿನ ಖಾಲಿ ಬೋಗಿಗಳು ಹಳಿ ತಪ್ಪಿರುವುದನ್ನು ದೃಢಪಡಿಸಿರುವ ದಕ್ಷಿಣ ರೈಲ್ವೆಯ ಹಿರಿಯ ಅಧಿಕಾರಿಗಳು, ಇಎಂಯು ವೇದಿಕೆ ಬರುತ್ತಿತ್ತು. ಬೆಳಗ್ಗೆ 5.40 ರ ಸುಮಾರಿಗೆ ಆ ರೈಲನ್ನು ಲೊಕೊ ಪೈಲಟ್ ಪ್ಲಾಟ್ಫಾರ್ಮ್ನಲ್ಲಿ ನಿಲ್ಲಿಸದೆ ಹೊರಟಿತು. ಮುಂದೆ ಹೋಗುತ್ತಿದ್ದಂತೆ ರೈಲಿನ ಬೋಗಿಗಳು ಹಳಿ ತಪ್ಪಿದವು ಎಂದು ಮಾಹಿತಿ ನೀಡಿದ್ದಾರೆ.
ಚೆನ್ನೈ ದಕ್ಷಿಣ ರೈಲ್ವೆಯು ಘಟನೆ ಬಳಿಕ ಹೇಳಿಕೆ ಬಿಡುಗಡೆ ಮಾಡಿದ್ದು, ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಮತ್ತು ಅವರ ಹಿರಿಯ ಅಧಿಕಾರಿಗಳ ತಂಡವು ಘಟನಾ ಸ್ಥಳದಲ್ಲಿದ್ದರು. ಸದ್ಯ ಬೋಗಿಗಳನ್ನು ಪುನಃಸ್ಥಾಪಿಸಿ ಬೇರೆ ರೈಲುಗಳ ಕಾರ್ಯಾಚರಣೆಗೆ ಅನುಕೂಲ ಮಾಡಿಕೊಡುತ್ತಿದ್ದಾರೆ.
ಪ್ರಯಾಣಿಕರಿಗೆ ತೊಂದರೆ
ಬೆಳಗ್ಗೆ 9.30 ಗಂಟೆಗೆ ಅವಡಿ ಬಳಿಯ ಮುಖ್ಯ ರೈಲು ಮಾರ್ಗ (ಟ್ರ್ಯಾಕ್) ಸಂಚಾರಕ್ಕೆ ಪುನರ್ ಸ್ಥಾಪಿಸುವ ಕಾರ್ಯದಲ್ಲಿ ರೈಲ್ವೆ ಸಿಬ್ಬಂದಿ ತೊಡಗಿದರು. ಇನ್ನೂ ಅವಡಿ ಮಾರ್ಗವಾಗಿ ಉಪನಗರ ರೈಲು ಅನುಸರಿಸಿ ನಿತ್ಯ ಕೆಲಸ ಕಾರ್ಯಗಳಿಗೆ ತೆರಳುವ ಪ್ರಯಾಣಿರಿಗೆ ಈ ಘಟನೆಯಿಂದ ತೊಂದರೆ ಆಯಿತು ಎಂದು ಸಾರ್ವಜನಿಕರು ತಿಳಿಸಿದರು.












Click it and Unblock the Notifications