Cheetah Cubs: 'ಚೀತಾ' ಗಳಿರುವ 'ಕುನೋ' ರಾಷ್ಟ್ರೀಯ ಉದ್ಯಾನ ಹೊಸ 3 ಸದಸ್ಯರನ್ನು ಸ್ವಾಗತಿಸಿದೆ
ಭೂಪಾಲ್, ಜನವರಿ 04: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ (Kuno National Park) ನಮೀಬಿಯಾದಿಂದ ಚಿರತೆಗಳನ್ನು ತಂದು ಬಿಡಲಾಗಿತ್ತು. ಇದೀಗ ಈ ಉದ್ಯಾನವನವು ಮೂರು ಮರಿಗಳನ್ನು ಸ್ವಾಗತಿಸಿದ್ದಾಗಿ ಸಿಹಿ ಸುದ್ದಿಯೊಂದು ನೀಡಿದೆ.
ಹೌದು, ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಪ್ರಧಾನಿ ಮೋದಿ ಹೆಸರಿಸಿರುವ 'ಆಶಾ ಚಿರತೆ' (Asha Cheeta) ಮೂರು ಮರಿಗಳಿಗೆ ಜನ್ಮ ನೀಡಿದೆ. ಈ ಮೂಲಕ ಕೇಂದ್ರ ಸರ್ಕಾರದ ಉದ್ದೇಶ ಸಾಕಾರವಾಗಲಿದೆ. ಭಾರತದಲ್ಲಿ ಚಿರತೆಯ ಸಂತತಿಯನ್ನು ಪುನರುಜ್ಜೀವನಗೊಳಿಸುವ ಭರವಸೆ ಸಿಕ್ಕಿದೆ.

ಆಶಾ ಚೀತಾಗೆ ಮೂರು ಮರಿಗಳಿಗೆ ಜನ್ಮ ನೀಡಿದ್ದು, ಆ ಮೂರು ಮರಿಗಳ ವಿಡಿಯೋವನ್ನು ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಭೂಪೇಂದ್ರ ಯಾದವ್ ಅವರು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಮೂರು ಪುಟ್ಟ ಚಿರತೆ ಮರಿಗಳನ್ನು ನೀವು ನೋಡಬಹುದು. ಇದು ಪ್ರಧಾನಿ ಮೋದಿಯವರು ಚೀತಾ ಯೋಜನೆಗೆ ಸಿಕ್ಕ ಅದ್ಭುತ ಯಶಸ್ಸು ಅಂತಲೂ ಬಣ್ಣಿಸಲಾಗುತ್ತಿದೆ. ಯೋಜನೆಯಲ್ಲಿ ತೊಡಗಿರುವ ಎಲ್ಲ ಅಧಿಕಾರಿಗಳು, ಸಿಬ್ಬಂದಿಗೂ ಈ ವೇಳೆ ಅಭಿನಂದನೆ ತಿಳಿಸಲಾಗಿದೆ.
Purrs in the wild!
— Bhupender Yadav (@byadavbjp) January 3, 2024
Thrilled to share that Kuno National Park has welcomed three new members. The cubs have been born to Namibian Cheetah Aasha.
This is a roaring success for Project Cheetah, envisioned by PM Shri @narendramodi ji to restore ecological balance.
My big congrats… pic.twitter.com/c1fXvVJN4C
ಚೀತಾ ಯೋಜನೆಗೆ ಬಲ
'ಆಶಾ ಚೀತಾ' ಮೂರು ಮರಿಗಳಿಗೆ ಜನ್ಮ ನೀಡಿದೆ. ಇದರಿಂದ ಯೋಜನೆಗೆ ಮತ್ತಷ್ಟು ಬಲ ಬಂದಂತಾಗಿದೆ. ವಾಂಡರರ್ ಚಿರತೆ ಪವನ್ ಅಕಾ ಓಬನ್ನಿಂದ ಮರಿಗಳಿಗೆ ತಂದೆಯಾಗಿದೆ. ಇದನ್ನು ರಾಜಸ್ಥಾನದಿಂದ ಇತ್ತೀಚೆಗೆ ಕುನೋಗೆ ತರಲಾಗಿತ್ತು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಭಾರತದಲ್ಲಿ ಈ ಚೀತಾ ಸಂತತಿಗಳ ಹೆಚ್ಚಿಸುವ ಉದ್ದೇಶದಿಂದ ನಮೀಬಿಯಾದಿಂದ ಒಟ್ಟು 5ಹೆಣ್ಣು ಮತ್ತು 3 ಗಂಡು ಚೀತಾ ಸೇರಿ ಒಟ್ಟು ಎಂಟು ಚೀತಾಗಳನ್ನು 2022ರಲ್ಲಿ ತಂದು ಬಿಡಲಾಗಿತ್ತು. ಕಳೆದ ವರ್ಷ 2023ರ ಮಾರ್ಚ್ 24ರಂದು ಹೆಣ್ಣು ಚೀತಾ 'ಜ್ವಾಲಾ' ಕುನೋ ಕಾಡಿನಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಈ ಪೈಕಿ ಮೂರು ಮರಿಗಳು ಮೃತಪಟ್ಟಿದ್ದವು. ಒಂದೇ ಒಂದು ಮರಿ ಜೀವಂತವಾಗಿದ್ದು, ಬೆಳೆಯುತ್ತಿದೆ.
ಚೀತಾ ಮರಿ ಜನನಕ್ಕೆ ಎಂಪಿ ಸಿಎಂ ಹರ್ಷ
''ಕುನೋದಲ್ಲಿ ಮೂರು ಪುಟ್ಟ ಚಿರತೆಗಳ ಆಗಮನದ ಸುದ್ದಿ ಅತ್ಯಂತ ಸಂತೋಷದಾಯಕವಾಗಿದೆ. ಹೊಸ ವರ್ಷದಲ್ಲಿ ಸಿಹಿ ಸುದ್ದಿ ಸಿಕ್ಕಂತಾಗಿದೆ. ಪ್ರಧಾನಿ ಮೋದಿಯವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಮಧ್ಯಪ್ರದೇಶ 'ಚೀತಾ ರಾಜ್ಯ' ಎಂದು ಗುರುತಿಸಿಕೊಂಡಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಎಕ್ಸ್ನಲ್ಲಿ ವೀಡಿಯೊ, ಚಿತ್ರವನ್ನು ಹಂಚಿಕೊಂಡು ಶ್ಲಾಘಿಸಿದ್ದಾರೆ.
ಇದು ಸಕಾರಾತ್ಮಕ ಬೆಳವಣಿಗೆಯಾಗಿದೆ, ಆದರೆ ಈ ಚೀತಾ ಮರಿಗಳ ಬೆಳವಣಿಗೆ ದೀರ್ಘ ಮತ್ತು ಸವಾಲಿನ ಹಾದಿಯಿದೆ ಎಂದು ದಿ ಮೆಟಾಪೋಪ್ಯುಲೇಶನ್ ಇನಿಶಿಯೇಟಿವ್-ಚೀತಾ ಮೆಟಾಪೋಪ್ಯುಲೇಶನ್ ಪ್ರಾಜೆಕ್ಟ್ನ ನಿರ್ದೇಶಕ ವಿನ್ಸೆಂಟ್ ವ್ಯಾನ್ ಡೆರ್ ಮೆರ್ವೆ ಹೇಳಿದರು. ಇದೇ ವೇಳೆ ಅರಣ್ಯಾಧಿಕಾರಿಗಳಿಗೆ ಅವರು ಅಭಿನಂದನೆ ತಿಳಿಸಿದರು.
-
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ












Click it and Unblock the Notifications