Chardham Yatra 2024: ಪ್ರತಿದಿನ ಸೀಮಿತ ಜನರಿಗೆ ಮಾತ್ರ ಚಾರ್ಧಾಮ್ ಯಾತ್ರೆಗೆ ಅವಕಾಶ- ನಿರ್ಧಾರ ವಿರೋಧಿಸಿ ಪ್ರತಿಭಟನೆ
ಚಾರ್ಧಾಮ್ ಯಾತ್ರೆ ಆರಂಭವಾಗಲು ಇನ್ನೂ ಹತ್ತು ದಿನಗಳು ಬಾಕಿ ಇವೆ. ಅದಾಗಲೇ ಲಕ್ಷಾಂತರ ಭಕ್ತರು ಯಾತ್ರೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಮೊದಲ ಬಾರಿಗೆ ಪ್ರತಿದಿನ ಸೀಮಿತ ಜನರಿಗೆ ಮಾತ್ರ ಚಾರ್ಧಾಮ್ ಯಾತ್ರೆಗೆ ಅವಕಾಶ ನೀಡಲಾಗುತ್ತಿದೆ.
ಹೌದು.... ಮೇ 10ರಿಂದ ಉತ್ತರಾಖಂಡದಲ್ಲಿ ಚಾರ್ಧಾಮ್ ಯಾತ್ರೆ ಆರಂಭವಾಗುತ್ತಿದೆ. ಇಲ್ಲಿಯವರೆಗೆ 19 ಲಕ್ಷಕ್ಕೂ ಹೆಚ್ಚು ಭಕ್ತರು ಇದಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ವರ್ಷ ದಾಖಲೆಯ 55 ಲಕ್ಷ ಜನರು ಆಗಮಿಸಿದ್ದರಿಂದ ವ್ಯವಸ್ಥೆಗಳು ಹಲವು ಬಾರಿ ಕೈಕೊಟ್ಟಿದ್ದವು. ಇದರಿಂದ ಪಾಠ ಕಲಿತ ಉತ್ತರಾಖಂಡ ಪೊಲೀಸ್ ಮತ್ತು ಪ್ರವಾಸೋದ್ಯಮ ಇಲಾಖೆ ಮೊದಲ ಬಾರಿಗೆ ಚಾರ್ ಧಾಮ್ ಯಾತ್ರೆಯಲ್ಲಿ ಪ್ರತಿದಿನದ ಭಕ್ತರ ಸಂಖ್ಯೆಯನ್ನು ಸೀಮಿತಗೊಳಿಸಿದೆ.

ಅದರ ಪ್ರಕಾರವಾಗಿ ಒಂದು ದಿನದಲ್ಲಿ 15 ಸಾವಿರ ಭಕ್ತರು ಕೇದಾರನಾಥ ಧಾಮಕ್ಕೆ, 16 ಸಾವಿರ ಮಂದಿ ಬದರಿನಾಥ ಧಾಮಕ್ಕೆ, 9 ಸಾವಿರ ಭಕ್ತರು ಯಮುನೋತ್ರಿಗೆ ಮತ್ತು 11 ಸಾವಿರ ಮಂದಿಗೆ ಗಂಗೋತ್ರಿಗೆ ಭೇಟಿ ನೀಡಲು ಅವಕಾಶ ನೀಡಲಾಗುತ್ತದೆ. ಅಂದರೆ ಪ್ರತಿದಿನ 51 ಸಾವಿರ ಮಂದಿ ಚಾರ್ ಧಾಮ್ ಗೆ ಭೇಟಿ ನೀಡಲಿದ್ದಾರೆ. ಕಳೆದ ವರ್ಷ ನಿತ್ಯ 60 ಸಾವಿರಕ್ಕೂ ಹೆಚ್ಚು ಯಾತ್ರಾರ್ಥಿಗಳು ದರ್ಶನಕ್ಕೆ ಆಗಮಿಸಿದ್ದರು.
ಚಾರ್ಧಾಮ್ ಭಕ್ತರ ಸಂಖ್ಯೆ ಸೀಮಿತ
ಹಾಗಾದರೆ ಭಕ್ತರನ್ನು ಇಂತಿಷ್ಟೇ ಸಂಖ್ಯೆಯಲ್ಲಿ ಚಾರ್ಧಾಮ್ ಯಾತ್ರೆಗೆ ಹೇಗೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಯೋಣ. ಯಾರಾದರೂ ಬದರಿನಾಥಕ್ಕೆ ಹೋಗಲು ಬಯಸಿದರೆ, ಅವರನ್ನು ಮೊದಲು ಶ್ರೀನಗರದಲ್ಲಿ ನಿಲ್ಲಿಸಲಾಗುತ್ತದೆ. ದಿನದ ಮಿತಿ 15 ಸಾವಿರಕ್ಕಿಂತ ಹೆಚ್ಚು ಭಕ್ತರಾದರೆ ಹೆಚ್ಚುವರಿ ಭಕ್ತರು ಶ್ರೀನಗರದಲ್ಲಿಯೇ ರಾತ್ರಿ ಕಳೆಯಬೇಕಾಗುತ್ತದೆ.

ರುದ್ರಪ್ರಯಾಗ, ನಂತರ ಚಮೋಲಿ, ಪಿಪ್ಪಲಕೋಟಿ, ಜೋಶಿಮಠದಲ್ಲೂ ಇದೇ ಪ್ರಕ್ರಿಯೆ ನಡೆಯಲಿದ್ದು, ಕಡಿಮೆ ಸಂಖ್ಯೆ ಇದ್ದರೆ ಮಾತ್ರ ಮುಂದೆ ಯಾತ್ರೆ ಸಾಗಲಿದೆ. ಹೆಚ್ಚುವರಿ ಭಕ್ತರನ್ನು ಶ್ರೀನಗರ, ರುದ್ರಪ್ರಯಾಗ, ಉಖಿಮಠ, ಗೌರಿಕುಂಡ್ದಲ್ಲಿ ನಿಲ್ಲಿಸಿದ ನಂತರ ಕೇದಾರನಾಥ ಧಾಮದ ಭಕ್ತರನ್ನೂ ಮುಂದೆ ಕರೆದೊಯ್ಯಲಾಗುತ್ತದೆ.
ನಿರ್ಧಾರ ವಿರೋಧಿಸಿ ಪ್ರತಿಭಟನೆ:
ಆದರೆ ಈ ನಿರ್ಧಾರಕ್ಕೆ ಚಾರ್ ಧಾಮ್ ಹೋಟೆಲ್ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸಿದೆ. ಗಂಗೋತ್ರಿ-ಯಮುನೋತ್ರಿಗೆ ಹೋಗುವ ಭಕ್ತರನ್ನು ತೆಹ್ರಿ, ಚಂಬಾ, ಉತ್ತರಕಾಶಿಯಲ್ಲಿ ನಿಲ್ಲಿಸಲಾಗುವುದು. ಈ ಪಟ್ಟಣಗಳಲ್ಲಿ ಏಕಕಾಲಕ್ಕೆ 20 ರಿಂದ 30 ಸಾವಿರ ಜನರು ತಂಗಲು ಸಾಧ್ಯವಾಗುತ್ತದೆ. ಆದರೆ ಇನ್ನಿತರ ಹೋಟೆಲ್ ಮತ್ತು ಹೋಮ್ ಸ್ಟೇಗಳು ಖಾಲಿ ಉಳಿಯುತ್ತವೆ. ಒಂದೇ ಕಡೆ ಭಕ್ತರನ್ನು ನಿಲ್ಲಿಸುವುದರಿಂದ ಉಳಿದೆಡೆ ಇರುವ ಹೋಟೆಲ್ ಹಾಗೂ ಹೋಮ್ ಸ್ಟೇಗಳಿಗೆ ಜನ ಆಗಮಿಸಲು ಸಾಧ್ಯವಾಗುವುದಿಲ್ಲ. ಈ ನಿರ್ಧಾರ ನಷ್ಟಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಚಾರ್ ಧಾಮ್ ಹೋಟೆಲ್ ಅಸೋಸಿಯೇಷನ್ ಈ ನಿರ್ಧಾರವನ್ನು ವಿರೋಧಿಸಿದೆ.
ಇದರಿಂದ ವ್ಯಾಪಾರ ಕುಂಠಿತವಾಗುತ್ತದೆ ಎನ್ನುತ್ತಾರೆ ಸಂಘದ ಅಧ್ಯಕ್ಷ ಅಜಯ್ ಪುರಿ. ಉತ್ತರಕಾಶಿ ಹೋಟೆಲ್ ಸಂಘದ ಅಧ್ಯಕ್ಷ ಶೈಲೇಂದ್ರ ಮಾತುಡ ಮಾತನಾಡಿ, ರಾಜ್ಯದ ಆರ್ಥಿಕತೆಯು ಪ್ರವಾಸೋದ್ಯಮ ಮತ್ತು ತೀರ್ಥಯಾತ್ರೆಯ ಮೇಲೆ ಅವಲಂಬಿತವಾಗಿದೆ. ಆರು ತಿಂಗಳ ಅವಧಿಯಲ್ಲಿಯೂ ಭಕ್ತರ ಸಂಖ್ಯೆಗಳು ಸೀಮಿತವಾಗಿದ್ದರೆ, ವ್ಯಾಪಾರದ ಮೇಲೆ ಅದು ಪರಿಣಾಮ ಬೀರುತ್ತದೆ. ಸರಕಾರ ಈ ನಿರ್ಧಾರವನ್ನು ಹಿಂಪಡೆಯದಿದ್ದರೆ ಹೊಟೇಲ್, ಹೋಂ ಸ್ಟೇಗಳನ್ನು ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಚಾರ್ಧಾಮ್ಗೆ ಸಂಬಂಧಿಸಿದ ವಿಶೇಷ ಸಂಗತಿಗಳು
ಬದರಿನಾಥ ಧಾಮ - ಬದರಿನಾಥ ಧಾಮ ಭಗವಾನ್ ವಿಷ್ಣುವಿಗೆ ಸಮರ್ಪಿತವಾದ ದೇವಾಲಯವಾಗಿದೆ. ಈ ನರ-ನಾರಾಯಣನನ್ನು ಎರಡು ಪರ್ವತಗಳ ನಡುವೆ ನಿರ್ಮಿಸಲಾಗಿದೆ. ಈ ಪ್ರದೇಶವನ್ನು ಬದರಿವನ್ ಎಂದು ಕರೆಯಲಾಗುತ್ತದೆ. ಈ ದೇವಾಲಯದ ಅರ್ಚಕನನ್ನು ರಾವಲ್ ಎಂದು ಕರೆಯಲಾಗುತ್ತದೆ. ರಾವಲ್ ಆದಿ ಗುರು ಶಂಕರಾಚಾರ್ಯರ ಕುಟುಂಬದಿಂದ ಬಂದವರು. ಕೇರಳದ ನಂಬೂದರಿ ಪುರೋಹಿತರು ಮಾತ್ರ ಇಲ್ಲಿ ಪೂಜೆ ಮಾಡುತ್ತಾರೆ.
ಕೇದಾರನಾಥ ಧಾಮ - ಪ್ರಾಚೀನ ಕಾಲದಲ್ಲಿ, ವಿಷ್ಣುವಿನ ಅವತಾರವಾದ ನರ-ನಾರಾಯಣನು ಬದರಿವನದಲ್ಲಿ ಶಿವಲಿಂಗವನ್ನು ನಿರ್ಮಿಸಿ ಇಲ್ಲಿ ಪೂಜಿಸುತ್ತಿದ್ದನು. ನರ-ನಾರಾಯಣರ ಭಕ್ತಿಯಿಂದ ಸಂತೋಷಗೊಂಡ ಶಿವನು ಕಾಣಿಸಿಕೊಂಡನು. ಶಿವನು ನರ-ನಾರಾಯಣನಿಗೆ ವರವನ್ನು ಕೇಳಲು ಕೇಳಿದಾಗ, ನರ-ನಾರಾಯಣ ಅವರು ಯಾವಾಗಲೂ ಈ ಪ್ರದೇಶದಲ್ಲಿ ನೆಲೆಸಬೇಕೆಂದು ವರವನ್ನು ಕೇಳಿದರು. ವರವನ್ನು ನೀಡುವಾಗ ಶಿವನು ಇನ್ನು ಮುಂದೆ ಇಲ್ಲಿಯೇ ಇರುತ್ತೇನೆ ಮತ್ತು ಈ ಪ್ರದೇಶವನ್ನು ಕೇದಾರ ಪ್ರದೇಶವೆಂದು ಕರೆಯಲಾಗುವುದು ಎಂದು ಹೇಳಿದರು. ಇದರ ನಂತರ, ಶಿವನು ಬೆಳಕಿನ ರೂಪದಲ್ಲಿ ಇಲ್ಲಿರುವ ಶಿವಲಿಂಗದಲ್ಲಿ ವಿಲೀನಗೊಂಡನು.
ಗಂಗೋತ್ರಿ - ಇದು ಗಂಗಾ ನದಿಯ ದೇವಾಲಯ. ಗಂಗಾ ನದಿಯ ಮೂಲ ಸ್ಥಾನ. ಗಂಗೋತ್ರಿಯಲ್ಲಿ ಗಂಗಾ ಮಾತೆಯನ್ನು ಪೂಜಿಸಲಾಗುತ್ತದೆ. ಭಗೀರಥ ರಾಜ ಗಂಗಾದೇವಿಯನ್ನು ಭೂಮಿಗೆ ತರಲು ತಪಸ್ಸು ಮಾಡಿದ ಸ್ಥಳವೇ ಈ ಗಂಗೋತ್ರಿಯಾಗಿದೆ.
ಯಮನೋತ್ರಿ - ಇದು ಯಮುನಾ ನದಿಯ ಮೂಲ ಸ್ಥಳವೆಂದು ಪರಿಗಣಿಸಲಾಗಿದೆ. ಯಮುನಾ ದೇವಿಯನ್ನು ಇಲ್ಲಿ ಪೂಜಿಸಲಾಗುತ್ತದೆ. ಯಮುನೋತ್ರಿ ದೇವಾಲಯದ ಬಗ್ಗೆ ಹೇಳುವುದಾದರೆ, ತೆಹ್ರಿ ಗರ್ವಾಲ್ನ ಮಹಾರಾಜ ಪ್ರತಾಪ್ಶಾಹ್ ಯಮುನಾ ದೇವಿಯ ದೇವಾಲಯವನ್ನು ನಿರ್ಮಿಸಿದ್ದನು.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications