ಚಂದ್ರಲೋಕ ನೋಡಬೇಕೇ: ಇಲ್ಲಿವೆ ನೋಡಿ ಅದರ ಚಿತ್ರ!
ಶ್ರೀಹರಿಕೋಟಾ, ನವೆಂಬರ್.13: ಹುಣ್ಣಿಮೆಯ ದಿನ ಕತ್ತಲ ರಾತ್ರಿಯಲ್ಲೂ ಭೂಮಿಗೆ ಬೆಳಕು ನೀಡುವ ಚಂದಿರ ಎಂದರೆ ಎಂಥವರಿಗೂ ಪಂಚಪ್ರಾಣ. ಭೂಮಿ ಹೊರತಾಗಿ ಮತ್ತೊಂದು ಗ್ರಹದ ಮೇಲೆ ಜನರು ಅತಿಯಾದ ಬಾಂಧವ್ಯವನ್ನು ಬೆಳೆಸಿಕೊಂಡಿದ್ದಾರೆ ಎಂದರು ಅದು ಚಂದಿರ.
ಪುಟ್ಟ ಮಗುವಿಗೆ ಕೈತುತ್ತು ನೀಡುವ ತಾಯಿ ಚಂದಿರನನ್ನೇ ತೋರಿಸುತ್ತಾಳೆ. ಯಾಕೆಂದರೆ ಚಂದಿರನ ಆ ಲೋಕ ಅಷ್ಟೊಂದು ಸುಂದರ. ಚಂದಾಮಾಮಾ ಕಥೆಗಳು ಈಗಲ್ಲ, ಪ್ರಾಚೀನ ಕಾಲದಿಂದಲೂ ಜನಪ್ರಿಯವಾಗಿ ಬೆಳೆದು ಬಂದಿವೆ.
ಭಾರತದ ಆದಿಯಾಗಿ ಹಲವು ದೇಶಗಳು ಚಂದ್ರಯಾನ ಕೈಗೊಂಡಿವೆ. ಇದಕ್ಕೆಲ್ಲ ಕಾರಣವೇ ಅದೊಂದು ಕುತೂಹಲ. ಚಂದಿರನ ಆ ಅಂಗಳ ಹೇಗಿದೆ ಎಂಬುವನ್ನು ತಿಳಿದುಕೊಳ್ಳಲು ವಿಜ್ಞಾನಿಗಳು ಕೂಡಾ ಕಾತರರಾಗಿದ್ದಾರೆ. ಅದಕ್ಕಾಗಿ ಮೇಲಿಂದ ಮೇಲೆ ಸಂಶೋಧನೆಗಳು ನಡೆಯುತ್ತಲೇ ಇವೆ. ಭಾರತ ಕೂಡಾ ಒಂದು ಬಾರಿ ಯಶಸ್ವಿಯಾಗಿ ಚಂದ್ರಯಾನ ಮಾಡಿದೆ.
ಚಿತ್ರ ಕೃಪೆ: ಇಸ್ರೋ

ಇದೇ ನೋಡಿ ಚಂದಿರನ ಆ ಅಂಗಳ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಆಗಾಗ ಚಂದಿರನ ಕುರಿತು ಕುತೂಹಲಕಾರಿ ಮಾಹಿತಿಯನ್ನು ನೀಡುತ್ತದೆ. ಹಲವು ಬಾರಿ ಚಂದಿರನ ಮೇಲ್ಮೈ ಪದರ ಹೇಗಿದೆ ಎಂಬ ಚಿತ್ರಗಳು ಕೂಡಾ ಬಿಡುಗಡೆಯಾಗಿವೆ. ಇದೀಗ ಅಂಥದ್ದೇ ಮತ್ತೊಂದು ಕುತೂಹಲಕಾರಿ ವಿಚಾರವನ್ನು ಇಸ್ರೋ ಹೊರ ಹಾಕಿದೆ.

ಇಸ್ರೋ ಬಿಡುಗಡೆ ಮಾಡಿದ ಚಿತ್ರಪಟ!
ಚಂದ್ರನ ಮೇಲ್ಮೈ ಭಾಗದಲ್ಲಿ ಜ್ವಾಲಾಮುಖಿಯ ಸುಳಿಯಂತೆ ಇರುವ ಚಿತ್ರವೊಂದು ಲಭ್ಯವಾಗಿದೆ. ಟೆರೈನ್ ಮ್ಯಾಪಿಂಗ್ ಕ್ಯಾಮರಾ-2ನಲ್ಲಿ ಸೆರೆಯಾದ ಚಿತ್ರ ಇದೀಗ ಸಾಕಷ್ಟು ಕುತೂಹಲ ಕೆರಳಿಸಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ ಅದರ 3ಡಿ ಚಿತ್ರವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಅಪ್ ಲೋಡ್ ಮಾಡಿದೆ.

ಜುಲೈ.22ರಂದು ನಭಕ್ಕೆ ಜಿಗಿದಿದ್ದ ರಾಕೆಟ್
ಕಳೆದ ಜುಲೈ.22ರಂದು ಚಂದ್ರಯಾನ-2 ನೌಕೆಯ ಯಾನ ಆರಂಭವಾಗಿತ್ತು. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಧ್ಯಾಹ್ನ 2.43ಕ್ಕೆ ಆರ್ಬಿಟರ್, ವಿಕ್ರಂ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್ ಒಳಗೊಂಡ ಜಿಎಸ್ಎಲ್ ವಿ ಮಾರ್ಕ್-3 ರಾಕೆಟ್ ನಭಕ್ಕೆ ಜಿಗಿದಿತ್ತು.

ಮೊದಲ ಪೋಟೋ ಕಳಿಸಿದ್ದ ವಿಕ್ರಮ್ ಲ್ಯಾಂಡರ್
ಆ.22ರಂದು ಚಂದ್ರನ ಕಕ್ಷೆ ತಲುಪಿದ ಚಂದ್ರಯಾನ-2, ಮೊದಲ ಬಾರಿ ಚಂದ್ರನ ಚಿತ್ರಣವನ್ನು ಸೆರೆಹಿಡಿದು ಕಳುಹಿಸಿತ್ತು. ಚಂದ್ರನಿಂದ 2,650 ಕಿ.ಮೀ ದೂರದಿಂದ ಚಂದ್ರನ ಮೇಲ್ಮೆಯನ್ನು ವಿಕ್ರಮ್ ಲ್ಯಾಂಡರ್ ಆ ಚಿತ್ರವನ್ನು ಸೆರೆ ಹಿಡಿದಿತ್ತು.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications