ಬೈಕ್ ಬಿಡಿ; ಭಾರತದಲ್ಲಿ ಇನ್ಮುಂದೆ ನೀವು ಸಂಚರಿಸುವ ಬಸ್ಗಳೂ ವಿದ್ಯುತ್ ಚಾಲಿತ!
ನವದೆಹಲಿ, ಜುಲೈ 21: ಭಾರತದಲ್ಲಿ ರಾಜ್ಯ-ನಿಯಂತ್ರಿತ ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್(ಸಿಇಎಸ್ಎಲ್) 50,000 ಎಲೆಕ್ಟ್ರಿಕ್ ಬಸ್ಗಳಿಗೆ 79,000 ಕೋಟಿ ರೂಪಾಯಿಗಳ ಟೆಂಡರ್ ಅನ್ನು ಯೋಜಿಸುತ್ತಿದೆ ಎಂದು ತಿಳಿದು ಬಂದಿದೆ.
ಇದರಿಂದ ಸಾರ್ವಜನಿಕ ಸಾರಿಗೆಯನ್ನು ಇಂಗಾಲರಹಿತಗೊಳಿಸುವುದು ಮತ್ತು ಹೊಗೆ ಹೊರಸೂಸುವಿಕೆಯನ್ನು ಶೂನ್ಯ ಮಟ್ಟಕ್ಕೆ ಇಳಿಸುವ ಗುರಿ ಪೂರೈಸಲು ಸಹಾಯವಾಗಲಿದೆ.
ದೆಹಲಿ: ಮಂಗಳವಾರದಿಂದ 3 ದಿನ 150 ಎಲೆಕ್ಟ್ರಿಕ್ ಬಸ್ಗಳಲ್ಲಿ ಉಚಿತ ಪ್ರಯಾಣ
ದೇಶದಲ್ಲಿ ಇಂತಹ ಟೆಂಡರ್ಗಳು ಮೂಲಸೌಕರ್ಯ ಯೋಜನೆಗಳಂತೆ ಕಾಣಲಾರಂಭಿಸಿವೆ. ಎಲೆಕ್ಟ್ರಿಕ್ ಬಸ್ಗಳ ಸ್ಥಳೀಯ ಉತ್ಪಾದನೆಯು ಬೇಡಿಕೆಗೆ ಅನುಗುಣವಾಗಿ ಬೆಳೆಯುವ ನಿರೀಕ್ಷೆಯಿದೆ ಎಂದು ಸಿಇಎಸ್ಎಲ್ ವ್ಯವಸ್ಥಾಪಕ ನಿರ್ದೇಶಕ ಮಹುವಾ ಆಚಾರ್ಯ ಹೇಳಿದ್ದಾರೆ.
"ಈ ದೇಶವು ತನ್ನ ಎಲೆಕ್ಟ್ರಿಕ್ ವಾಹನಗಳ ಮಹತ್ವಾಕಾಂಕ್ಷೆಯ ಮೇಲೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಆದ್ದರಿಂದ ಹಣಕಾಸು ಒದಗಿಸುವಿಕೆಯು ಒಂದು ಅವಕಾಶವನ್ನು ಪ್ರಸ್ತುತಪಡಿಸುವಷ್ಟು ಸವಾಲಾಗಿ ಉಳಿದಿದೆ," ಎಂದು ಆಚಾರ್ಯ ಬ್ಲೂಮ್ಬರ್ಗ್ ಟೆಲಿವಿಷನ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ವಾಯು ಮಾಲಿನ್ಯ ನಿಯಂತ್ರಿಸುವ ಗುರಿ: ಕಳೆದ 2020ರಲ್ಲಿ ಮೊದಲ ಬಾರಿಗೆ ಸಿಇಎಸ್ಎಲ್ ಅನ್ನು ಅದರ ಪೋಷಕ ಸಂಸ್ಥೆಯಾಗಿರುವ ಎನರ್ಜಿ ಎಫಿಷಿಯನ್ಸಿ ಸರ್ವಿಸಸ್ ಲಿಮಿಟೆಡ್ನ ಸೌರ ಮತ್ತು ಎಲೆಕ್ಟ್ರಿಕ್ ವೆಹಿಕಲ್ ಲೀಸಿಂಗ್ ವ್ಯವಹಾರವನ್ನು ನಿರ್ವಹಿಸಲು ರಚಿಸಲಾಯಿತು. ಇದು ನಾಲ್ಕು ರಾಜ್ಯ-ಚಾಲಿತ ಇಂಧನ ಕಂಪನಿಗಳ ನಡುವಿನ ಉದ್ಯಮವಾಗಿದೆ.
ದೇಶದಲ್ಲಿ 2070ರ ವೇಳೆಗೆ ನಿವ್ವಳ ಹೊರಸೂಸುವಿಕೆಯನ್ನು ಶೂನ್ಯ ಪ್ರಮಾಣಕ್ಕೆ ಇಳಿಸುವ ಗುರಿಯ ಭಾಗವಾಗಿ 2030ರ ವೇಳೆಗೆ ಅದರ ಒಟ್ಟಾರೆ ಯೋಜಿತ ಇಂಗಾಲದ ಹೊರಸೂಸುವಿಕೆಯನ್ನು 1 ಶತಕೋಟಿ ಟನ್ ಗಳಷ್ಟು ಕಡಿತಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ರೂಪಿಸಿದ ಯೋಜನೆಯಲ್ಲಿ ಈ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಲಿವೆ.
ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಆದ್ಯತೆ: ವಿಶ್ವದ ಮೂರನೇ ಅತಿ ದೊಡ್ಡ ಹೊರಸೂಸುವ ದೇಶವಾಗಿರುವ ಭಾರತವು ಚಾರ್ಜಿಂಗ್ ಸ್ಟೇಷನ್ಗಳನ್ನು ನಿರ್ಮಿಸುವುದು, ಗ್ರಿಡ್ ಸಾಮರ್ಥ್ಯಗಳನ್ನು ಸುಧಾರಿಸುವುದು ಮತ್ತು ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯನ್ನು ಖಚಿತಪಡಿಸಿಕೊಳ್ಳಲು ಡಿಪೋಗಳನ್ನು ಮರುವಿನ್ಯಾಸಗೊಳಿಸುವ ಅಗತ್ಯವಿದೆ ಎಂದು ಆಚಾರ್ಯ ಹೇಳಿದರು. ಅವರು ಕಾಳಜಿಯಾಗಿ ಬ್ಯಾಟರಿ ಸರಬರಾಜುಗಳೊಂದಿಗೆ ನಡೆಯುತ್ತಿರುವ ಕೊರತೆಗಳನ್ನು ಪಟ್ಟಿ ಮಾಡಿದ್ದಾರೆ.
5450 ಎಲೆಕ್ಟ್ರಿಕ್ ಬಸ್ಗಳ ಗುತ್ತಿಗೆ: ಭಾರತವು ಪ್ರಸ್ತುತ ಎಲ್ಲಾ ದ್ವಿಚಕ್ರ ವಾಹನಗಳನ್ನು ವಿದ್ಯುದ್ದೀಕರಿಸಬಹುದು. ಇಲ್ಲಿಂದ ಮುಂದಿನ ಐದರಿಂದ ಏಳು ವರ್ಷಗಳಲ್ಲಿ ಸಾರ್ವಜನಿಕ ಬಸ್ಗಳ ವಿದ್ಯುದ್ದೀಕರಣವನ್ನು ಪೂರ್ಣಗೊಳಿಸಬಹುದು ಎಂದು ಆಚಾರ್ಯ ಹೇಳಿದರು. ಈ ವರ್ಷದ ಆರಂಭದಲ್ಲಿ ಸಿಇಎಸ್ಎಲ್ ಐದು ರಾಜ್ಯ ಸರ್ಕಾರದ ಪರವಾಗಿ 5,450 ಎಲೆಕ್ಟ್ರಿಕ್ ಬಸ್ಗಳ ಗುತ್ತಿಗೆಯನ್ನು ನೀಡಿದೆ. ಸಿಇಎಸ್ಎಲ್ ತನ್ನ ವಿತರಣಾ ಸೌರ ವ್ಯವಹಾರಗಳಿಗೆ ಹೂಡಿಕೆದಾರರನ್ನು ಹುಡುಕುತ್ತಿದೆ. ಈ ಸಮಯದಲ್ಲಿ ಆಂತರಿಕವಾಗಿ ಅದು ಆದಾಯವನ್ನು ನೀಡುತ್ತಿದೆ ಎಂದು ಆಚಾರ್ಯ ತಿಳಿಸಿದ್ದಾರೆ.
Recommended Video