ಬೈಕ್ ಬಿಡಿ; ಭಾರತದಲ್ಲಿ ಇನ್ಮುಂದೆ ನೀವು ಸಂಚರಿಸುವ ಬಸ್ಗಳೂ ವಿದ್ಯುತ್ ಚಾಲಿತ!
ನವದೆಹಲಿ, ಜುಲೈ 21: ಭಾರತದಲ್ಲಿ ರಾಜ್ಯ-ನಿಯಂತ್ರಿತ ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್(ಸಿಇಎಸ್ಎಲ್) 50,000 ಎಲೆಕ್ಟ್ರಿಕ್ ಬಸ್ಗಳಿಗೆ 79,000 ಕೋಟಿ ರೂಪಾಯಿಗಳ ಟೆಂಡರ್ ಅನ್ನು ಯೋಜಿಸುತ್ತಿದೆ ಎಂದು ತಿಳಿದು ಬಂದಿದೆ.
ಇದರಿಂದ ಸಾರ್ವಜನಿಕ ಸಾರಿಗೆಯನ್ನು ಇಂಗಾಲರಹಿತಗೊಳಿಸುವುದು ಮತ್ತು ಹೊಗೆ ಹೊರಸೂಸುವಿಕೆಯನ್ನು ಶೂನ್ಯ ಮಟ್ಟಕ್ಕೆ ಇಳಿಸುವ ಗುರಿ ಪೂರೈಸಲು ಸಹಾಯವಾಗಲಿದೆ.
ದೇಶದಲ್ಲಿ ಇಂತಹ ಟೆಂಡರ್ಗಳು ಮೂಲಸೌಕರ್ಯ ಯೋಜನೆಗಳಂತೆ ಕಾಣಲಾರಂಭಿಸಿವೆ. ಎಲೆಕ್ಟ್ರಿಕ್ ಬಸ್ಗಳ ಸ್ಥಳೀಯ ಉತ್ಪಾದನೆಯು ಬೇಡಿಕೆಗೆ ಅನುಗುಣವಾಗಿ ಬೆಳೆಯುವ ನಿರೀಕ್ಷೆಯಿದೆ ಎಂದು ಸಿಇಎಸ್ಎಲ್ ವ್ಯವಸ್ಥಾಪಕ ನಿರ್ದೇಶಕ ಮಹುವಾ ಆಚಾರ್ಯ ಹೇಳಿದ್ದಾರೆ.

"ಈ ದೇಶವು ತನ್ನ ಎಲೆಕ್ಟ್ರಿಕ್ ವಾಹನಗಳ ಮಹತ್ವಾಕಾಂಕ್ಷೆಯ ಮೇಲೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಆದ್ದರಿಂದ ಹಣಕಾಸು ಒದಗಿಸುವಿಕೆಯು ಒಂದು ಅವಕಾಶವನ್ನು ಪ್ರಸ್ತುತಪಡಿಸುವಷ್ಟು ಸವಾಲಾಗಿ ಉಳಿದಿದೆ," ಎಂದು ಆಚಾರ್ಯ ಬ್ಲೂಮ್ಬರ್ಗ್ ಟೆಲಿವಿಷನ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ವಾಯು ಮಾಲಿನ್ಯ ನಿಯಂತ್ರಿಸುವ ಗುರಿ: ಕಳೆದ 2020ರಲ್ಲಿ ಮೊದಲ ಬಾರಿಗೆ ಸಿಇಎಸ್ಎಲ್ ಅನ್ನು ಅದರ ಪೋಷಕ ಸಂಸ್ಥೆಯಾಗಿರುವ ಎನರ್ಜಿ ಎಫಿಷಿಯನ್ಸಿ ಸರ್ವಿಸಸ್ ಲಿಮಿಟೆಡ್ನ ಸೌರ ಮತ್ತು ಎಲೆಕ್ಟ್ರಿಕ್ ವೆಹಿಕಲ್ ಲೀಸಿಂಗ್ ವ್ಯವಹಾರವನ್ನು ನಿರ್ವಹಿಸಲು ರಚಿಸಲಾಯಿತು. ಇದು ನಾಲ್ಕು ರಾಜ್ಯ-ಚಾಲಿತ ಇಂಧನ ಕಂಪನಿಗಳ ನಡುವಿನ ಉದ್ಯಮವಾಗಿದೆ.
ದೇಶದಲ್ಲಿ 2070ರ ವೇಳೆಗೆ ನಿವ್ವಳ ಹೊರಸೂಸುವಿಕೆಯನ್ನು ಶೂನ್ಯ ಪ್ರಮಾಣಕ್ಕೆ ಇಳಿಸುವ ಗುರಿಯ ಭಾಗವಾಗಿ 2030ರ ವೇಳೆಗೆ ಅದರ ಒಟ್ಟಾರೆ ಯೋಜಿತ ಇಂಗಾಲದ ಹೊರಸೂಸುವಿಕೆಯನ್ನು 1 ಶತಕೋಟಿ ಟನ್ ಗಳಷ್ಟು ಕಡಿತಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ರೂಪಿಸಿದ ಯೋಜನೆಯಲ್ಲಿ ಈ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಲಿವೆ.
ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಆದ್ಯತೆ: ವಿಶ್ವದ ಮೂರನೇ ಅತಿ ದೊಡ್ಡ ಹೊರಸೂಸುವ ದೇಶವಾಗಿರುವ ಭಾರತವು ಚಾರ್ಜಿಂಗ್ ಸ್ಟೇಷನ್ಗಳನ್ನು ನಿರ್ಮಿಸುವುದು, ಗ್ರಿಡ್ ಸಾಮರ್ಥ್ಯಗಳನ್ನು ಸುಧಾರಿಸುವುದು ಮತ್ತು ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯನ್ನು ಖಚಿತಪಡಿಸಿಕೊಳ್ಳಲು ಡಿಪೋಗಳನ್ನು ಮರುವಿನ್ಯಾಸಗೊಳಿಸುವ ಅಗತ್ಯವಿದೆ ಎಂದು ಆಚಾರ್ಯ ಹೇಳಿದರು. ಅವರು ಕಾಳಜಿಯಾಗಿ ಬ್ಯಾಟರಿ ಸರಬರಾಜುಗಳೊಂದಿಗೆ ನಡೆಯುತ್ತಿರುವ ಕೊರತೆಗಳನ್ನು ಪಟ್ಟಿ ಮಾಡಿದ್ದಾರೆ.
5450 ಎಲೆಕ್ಟ್ರಿಕ್ ಬಸ್ಗಳ ಗುತ್ತಿಗೆ: ಭಾರತವು ಪ್ರಸ್ತುತ ಎಲ್ಲಾ ದ್ವಿಚಕ್ರ ವಾಹನಗಳನ್ನು ವಿದ್ಯುದ್ದೀಕರಿಸಬಹುದು. ಇಲ್ಲಿಂದ ಮುಂದಿನ ಐದರಿಂದ ಏಳು ವರ್ಷಗಳಲ್ಲಿ ಸಾರ್ವಜನಿಕ ಬಸ್ಗಳ ವಿದ್ಯುದ್ದೀಕರಣವನ್ನು ಪೂರ್ಣಗೊಳಿಸಬಹುದು ಎಂದು ಆಚಾರ್ಯ ಹೇಳಿದರು. ಈ ವರ್ಷದ ಆರಂಭದಲ್ಲಿ ಸಿಇಎಸ್ಎಲ್ ಐದು ರಾಜ್ಯ ಸರ್ಕಾರದ ಪರವಾಗಿ 5,450 ಎಲೆಕ್ಟ್ರಿಕ್ ಬಸ್ಗಳ ಗುತ್ತಿಗೆಯನ್ನು ನೀಡಿದೆ. ಸಿಇಎಸ್ಎಲ್ ತನ್ನ ವಿತರಣಾ ಸೌರ ವ್ಯವಹಾರಗಳಿಗೆ ಹೂಡಿಕೆದಾರರನ್ನು ಹುಡುಕುತ್ತಿದೆ. ಈ ಸಮಯದಲ್ಲಿ ಆಂತರಿಕವಾಗಿ ಅದು ಆದಾಯವನ್ನು ನೀಡುತ್ತಿದೆ ಎಂದು ಆಚಾರ್ಯ ತಿಳಿಸಿದ್ದಾರೆ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications