ಸರ್ಕಾರಿ ನೌಕರರ ಪಿಂಚಣಿ ಸೇವೆಗಳ ನಿಯಮಗಳಲ್ಲಿ ಬದಲಾವಣೆ
ನವದೆಹಲಿ, ಸೆಪ್ಟೆಂಬರ್ 24: ಕೇಂದ್ರ ನಾಗರೀಕ ಸೇವೆ (ಪಿಂಚಣಿ) 1972 ಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದ್ದು, ಪಿಂಚಣಿ ಸೇವೆಗಳ ನಿಯಮಗಳನ್ನು ಸಡಿಲ ಮಾಡಿಲಾಗಿದ್ದು, ಸರ್ಕಾರಿ ನೌಕರರ ಕುಟುಂಬಕ್ಕೆ ಇದರಿಂದ ಸಹಾಯವಾಗಲಿದೆ.
ಸರ್ಕಾರಿ ನೌಕರ ಏಳು ವರ್ಷದ ಸೇವಾ ಅವಧಿ ಮುಗಿಯುವ ಮೊದಲೇ ನಿಧನಹೊಂದಿದರೆ, ಆತನ ಹತ್ತು ವರ್ಷದ ಸಂಬಳದ ಐವತ್ತರಷ್ಟು ಭಾಗ ಪಿಂಚಣಿ ರೂಪದಲ್ಲಿ ಆತನ ಕುಟುಂಬಕ್ಕೆ ತಲುಪುವಂತೆ ಬದಲಾವಣೆ ಮಾಡಲಾಗಿದೆ. ಹತ್ತು ವರ್ಷಗಳ ನಂತರ ಪಿಂಚಣಿ ಹಣ 30% ಆಗುತ್ತದೆ.
3 ಕೋಟಿ ಚಿಲ್ಲರೆ ವ್ಯಾಪಾರಿಗಳಿಗೆ ಬಂಪರ್, ಪಿಂಚಣಿ ಯೋಜನೆ ಘೋಷಣೆ
ಈ ಮೊದಲು, ಸರ್ಕಾರಿ ನೌಕರ ಏಳು ವರ್ಷದ ಸೇವಾ ಅವಧಿ ಮುಗಿವ ಮೊದಲೇ ಅಸುನೀಗಿದರೆ ಕೇವಲ 30% ಹಣ ಮಾತ್ರ ಪಿಂಚಣಿ ರೂಪದಲ್ಲಿ ಕುಟುಂಬಕ್ಕೆ ಸಿಗುತ್ತಿತ್ತು.
ಕೇಂದ್ರ ಸಿಬ್ಬಂದಿ ಮತ್ತು ಸಾರ್ವಜನಿಕ ಅಹವಾಲು, ಪಿಂಚಣಿ ಸಚಿವಾಲಯವು ಸೇವೆಯ ಆರಂಭದ ವರ್ಷಗಳಲ್ಲಿ ವೇತನ ಕಡಿಮೆ ಇರಲಿದೆ. ಅಕಾಲಿಕ ಮೃತ್ಯು ಸಂದರ್ಭದಲ್ಲಿ ಕುಟುಂಬಕ್ಕೆ ನೆರವಾಗಲು ಈ ಪರಿಷ್ಕರಣೆ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಬಿ.ಎಸ್ ಯಡಿಯೂರಪ್ಪ ಸರ್ಕಾರಕ್ಕೆ ಎದುರಾಗಲಿದೆ ಪ್ರತಿಭಟನೆಯ ಸಂಕಟ
ಈ ಬದಲಾವಣೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಬ್ಬರಿಗೂ ಅನ್ವಯ ಆಗಲಿದೆ. ಈ ತಿದ್ದುಪಡಿಯು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ.