Get Updates
Get notified of breaking news, exclusive insights, and must-see stories!

Agniveer: 'ಅಗ್ನಿವೀರ್' ಯೋಜನೆಗೆ ಬದಲಾವಣೆ ತರಲು ಕೇಂದ್ರ ಮುಕ್ತ: ರಕ್ಷಣಾ ಸಚಿವ

ನವದೆಹಲಿ, ಮಾರ್ಚ್ 28: ಕೇಂದ್ರ ರಕ್ಷಣಾ ಸಚಿವಾಲಯದ ಮಹತ್ವದ ನೇಮಕಾತಿಗಳಲ್ಲಿ ಒಂದಾಗಿರುವ 'ಅಗ್ನಿವೀರ್ ನೇಮಕಾತಿ' ಯೋಜನೆಯಲ್ಲಿ ಅಗತ್ಯ ಬಿದ್ದರೆ ಸರ್ಕಾರ "ಬದಲಾವಣೆಗೆ ಮುಕ್ತವಾಗಿ'' ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

ಗುರುವಾರ ಟೈಮ್ಸ್ ನೌ ಶೃಂಗಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು, ದೇಶದಲ್ಲಿ ಅಗ್ನಿವೀರರ ಭವಿಷ್ಯವು ಸುರಕ್ಷಿತವಾಗಿದೆ ಎಂದು ಸರ್ಕಾರ ಖಚಿತಪಡಿಸಿದೆ. ರಕ್ಷಣಾ ಪಡೆಗೆ ತರುಣರ ಅಗತ್ಯವಿದೆ. ನಾಲ್ಕು ವರ್ಷ ಸೇವೆ ಬಳಿಕ ಅವರ ಭವಿಷ್ಯ ಉತ್ತಮವಾಗಿರುವಂತೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

Center Will Ready to Change in Agniveer Recruitment if Needed says Rajnath Singh

ಯುವಕರ ಉತ್ಸಾಹ ದೇಶಸೇವೆಗೆ

ದೇಶದ ಯುವಕರು ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸುವ ಅಗತ್ಯತೆ ಪ್ರತಿಪಾದಿಸಿದ ಅವರು, ಸರ್ಕಾರ ಅಗ್ನಿವೀರ್ ಯೋಜನೆಯನ್ನು ಸಮರ್ಥಿಸಿಕೊಂಡರು. "ಸೇನಾ ಮೇ ಯೌವನದ ಹೋನಿ ಚಾಹಿಯೇ'' ಎಂದು ಅವರು, ತಂತ್ರಜ್ಞಾನ ಯುಗದಲ್ಲಿ ಬುದ್ಧಿವಂತ ಯುವಕರು ಹೆಚ್ಚು ಉತ್ಸಾಹಿಗಳಾಗಿದ್ದಾರೆ. ಅವರ ಈ ಉತ್ಸಾಹವನ್ನು ನಾಲ್ಕು ವರ್ಷಗಳ ಕಾಲ ಸೇನೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು.

ಅಗ್ನಿವೀರರಿಗೆ ಮೊದಲ 6 ತಿಂಗಳು ತರಬೇತಿ

ಅಗ್ನಿವೀರ್ ನೇಮಕಾತಿಯಡಿ ಅರ್ಹ ಯುವಕ ನಾಲ್ಕು ವರ್ಷಗಳ ಅವಧಿಗೆ ರಕ್ಷಣಾ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾರೆ. ಅದರಲ್ಲಿ ಅವರಿಗೆ ಆರು ತಿಂಗಳ ತರಬೇತಿ ಒಳಗೊಂಡಿರುತ್ತದೆ. ನಂತರ 3.5 ವರ್ಷಗಳ ಸೇವೆ ನಿಯೋಜನೆಗೊಳ್ಳುತ್ತಾರೆ. ಸೇವೆಯಿಂದ ನಿವೃತ್ತರಾದ ನಂತರ ಸಶಸ್ತ್ರ ಪಡೆಗಳಲ್ಲಿ ಅವರು ಸೇವೆ ಮುಂದುವರೆಸಬಹುದು. ಅದಕ್ಕಾಗಿ ನಿಯಮಗಳ ಪ್ರಕಾರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

Center Will Ready to Change in Agniveer Recruitment if Needed says Rajnath Singh

'ಅಗ್ನಿಪಥ್' ಅಥವಾ 'ಅಗ್ನಿವೀರ್' ಯೋಜನೆಯು ಸೇನೆ, ನೌಕಾಪಡೆ ಮತ್ತು ವಾಯುಸೇನೆಯಲ್ಲಿ ಸೈನಿಕರನ್ನು ನೇಮಕ ಮಾಡುವ ಪ್ರಕ್ರಿಯೆಯಾಗಿದೆ. ಇದರಡಿ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗುವ ಅರ್ಹ ಯುವಕರು ಒಪ್ಪಂದದ ಮೇಲೆ ನಾಲ್ಕು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಾರೆ.

ಭಾರತವನ್ನು ರಫ್ತು ದೇಶವಾಗಿ ಕಾಣುವ ಕನಸು

ಆತ್ಮನಿರ್ಭರ್ ಭಾರತ್ ಪರಿಕಲ್ಪಿನೆಯಡಿ ಭಾರತ ರಫ್ತು ದೇಶವಾಗಿ ಬೆಳೆಯುತ್ತಿದೆ. ತಂತ್ರಜ್ಞಾನದಲ್ಲಿ ಮುಂದಿರುವ ಭಾರತದಲ್ಲಿ ವಿವಿಧ ಇಂಜಿನ್‌ಗಳನ್ನು ತಯಾರಿ ಅವುಗಳನ್ನು ರಫ್ತು ಮಾಡಲು ಸಿದ್ಧವಾಗಿದೆ. ಯಾವ ರೀತಿಯ ಇಂಜಿನ್‌ಗಳನ್ನು ಉತ್ಪಾದಿಸಬೇಕು ಎಂಬೆಲ್ಲ ಮಾಹಿತಿಯ ಬಗ್ಗೆ ಡಿಆರ್‌ಡಿಒ ಜೊತೆಗೆ ಮಾತನಾಡಿದ್ದೇವೆ. ಎಲ್ಲವು ಅಂದುಕೊಂಡಂತಾದರೆ ಬೇರೆ ದೇಶಗಳಿಗೆ ಸ್ವದೇಶಿ ಯಂತ್ರಗಳು ರಫ್ತಾಗಲಿವೆ. ಇವುಗಳನ್ನು ಭಾರತಿಯರು ನಿರ್ಮಿಸಲಿದ್ದಾರೆ ಎಂಬುದೇ ಹೆಮ್ಮೆಯ ವಿಷಯ ಎಂದು ತಿಳಿಸಿದರು.

ಭಾರತದ ಭೂಮಿಯನ್ನು ಚೀನಾ ಆಕ್ರಮಿಸಿಕೊಂಡಿದೆ ಎಂದ ರಾಜನಾಥ್ ಸಿಂಗ್, ಭಾರತ ಎಲ್ಲ ಭಾಗದ ಗಡಿಗಳು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ನಮ್ಮ ಸೈನ್ಯದ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇರಬೇಕು. ನಮ್ಮ ದೇಶ ಮತ್ತು ಅದರ ಗಡಿಗಳು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಇದು ನಮ್ಮ ಸರ್ಕಾರ ದೇಶವಾಸಿಗಳಿಗೆ ನೀಡುವ ಭರವಸೆ ಎಂದು ವಿಪಕ್ಷಗಳಿಗೆ ತಿರುಗೇಟು ಕೊಟ್ಟರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+