ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾವೇರಿ ತೀರ್ಪು: ತಮಿಳುನಾಡು ರೈತರ ಪರ ನಿಂತ ರಜನೀಕಾಂತ್
Recommended Video
ಕಾವೇರಿ
ವಿವಾದದ
ತೀರ್ಪು
:
ರೈತರ
ಪರವಾಗಿ
ನಿಂತ
ಸೂಪರ್
ಸ್ಟಾರ್
ರಜಿನಿಕಾಂತ್
ಕಮಲ್
ಹಾಸನ್
|
Oneindia
Kannada
ಚೆನ್ನೈ, ಫೆಬ್ರವರಿ 16: ಕಾವೇರಿ ತೀರ್ಪಿನಿಂದ ತಮಿಳುನಾಡಿಗೆ ನಿರಾಶಾದಾಯವಾಗಿದೆ ಎಂದು ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಕಾವೇರಿ ತೀರ್ಪಿಗೆ ಯಾರು, ಏನೆಂದರು?
"ಕಾವೇರಿ ತೀರ್ಪು ನಿರಾಶಾದಾಯಕವಾಗಿದೆ. ಇದು ರೈತರ ದಿನನಿತ್ಯದ ಜೀವನವನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಲಿದೆ. ಸುಪ್ರೀಂ ಕೋರ್ಟ್ ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಲು ತಮಿಳುನಾಡು ಸರಕಾರ ಮುಂದಾಗಬೇಕು," ಎಂದು ಅವರು ಹೇಳಿದ್ದಾರೆ.
ಕಾವೇರಿ ನಿರ್ವಹಣಾ ಮಂಡಳಿ ರಚನೆ, ಕೇಂದ್ರದ ಅಂಗಳದಲ್ಲಿ ಚೆಂಡು, ಮುಂದೇನು?
ಇದೇ ಅಭಿಪ್ರಾಯವನ್ನು ಮತ್ತೋರ್ವ ಸೂಪರ್ ಸ್ಟಾರ್ ಕಮಲ್ ಹಾಸನ್ ಕೂಡ ವ್ಯಕ್ತಪಡಿಸಿದ್ದಾರೆ.
"ನೀರಿನ ಪೂರೈಕೆ ಇಳಿಸಿರುವುದು ನನಗೂ ಆಘಾತವನ್ನುಂಟು ಮಾಡಿದೆ. ನಾನು ಆದೇಶವನ್ನು ಸಂಪೂರ್ಣವಾಗಿ ಓದಬೇಕಿದೆ. ಆದರೆ ಸುಪ್ರೀಂ ಕೋರ್ಟ್ ನೀರನ್ನು ಯಾವುದೇ ರಾಜ್ಯ ತನ್ನ ಸ್ವಂತ ಆಸ್ತಿಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದಿದೆ," ಎಂಬುದಾಗಿ ಕಮಲ್ ಹಾಸನ್ ಹೇಳಿದ್ದಾರೆ.
Comments
cauvery supreme court rajinikanth kamal haasan tamil nadu ಕಾವೇರಿ ಸುಪ್ರೀಂ ಕೋರ್ಟ್ ರಜನಿಕಾಂತ್ ಕಮಲ್ ಹಾಸನ್ ತಮಿಳುನಾಡು
English summary
“Cauvery verdict is disappointing as it will further affect the livelihood of farmers. Tamil Nadu Govt should take steps to file a review petition,” said Tamil Nadu superstar Rajinikanth.