ಕಾವೇರಿ ತೀರ್ಪು: ತಮಿಳುನಾಡು ರೈತರ ಪರ ನಿಂತ ರಜನೀಕಾಂತ್
Recommended Video

ಕಾವೇರಿ ವಿವಾದದ ತೀರ್ಪು : ರೈತರ ಪರವಾಗಿ ನಿಂತ ಸೂಪರ್ ಸ್ಟಾರ್ ರಜಿನಿಕಾಂತ್ ಕಮಲ್ ಹಾಸನ್ | Oneindia Kannada
ಚೆನ್ನೈ, ಫೆಬ್ರವರಿ 16: ಕಾವೇರಿ ತೀರ್ಪಿನಿಂದ ತಮಿಳುನಾಡಿಗೆ ನಿರಾಶಾದಾಯವಾಗಿದೆ ಎಂದು ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಹೇಳಿದ್ದಾರೆ.
"ಕಾವೇರಿ ತೀರ್ಪು ನಿರಾಶಾದಾಯಕವಾಗಿದೆ. ಇದು ರೈತರ ದಿನನಿತ್ಯದ ಜೀವನವನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಲಿದೆ. ಸುಪ್ರೀಂ ಕೋರ್ಟ್ ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಲು ತಮಿಳುನಾಡು ಸರಕಾರ ಮುಂದಾಗಬೇಕು," ಎಂದು ಅವರು ಹೇಳಿದ್ದಾರೆ.
ಇದೇ ಅಭಿಪ್ರಾಯವನ್ನು ಮತ್ತೋರ್ವ ಸೂಪರ್ ಸ್ಟಾರ್ ಕಮಲ್ ಹಾಸನ್ ಕೂಡ ವ್ಯಕ್ತಪಡಿಸಿದ್ದಾರೆ.

"ನೀರಿನ ಪೂರೈಕೆ ಇಳಿಸಿರುವುದು ನನಗೂ ಆಘಾತವನ್ನುಂಟು ಮಾಡಿದೆ. ನಾನು ಆದೇಶವನ್ನು ಸಂಪೂರ್ಣವಾಗಿ ಓದಬೇಕಿದೆ. ಆದರೆ ಸುಪ್ರೀಂ ಕೋರ್ಟ್ ನೀರನ್ನು ಯಾವುದೇ ರಾಜ್ಯ ತನ್ನ ಸ್ವಂತ ಆಸ್ತಿಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದಿದೆ," ಎಂಬುದಾಗಿ ಕಮಲ್ ಹಾಸನ್ ಹೇಳಿದ್ದಾರೆ.












Click it and Unblock the Notifications