ನೀರು ಬಿಡಿ ಎಂದಿದ್ದಕ್ಕೆ 'ಯಸ್ ಮೈಲಾರ್ಡ್' ಎಂದ ಕರ್ನಾಟಕ!
ಪ್ರತಿದಿನ ತಮಿಳುನಾಡಿಗೆ 2,000 ಕ್ಯೂಸೆಕ್ಸ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ. ನೀರು ಹರಿಸಲು ಯಾವುದೇ ಸಮಸ್ಯೆಯಿಲ್ಲ ಎಂದು ನೀರಾವರಿ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ನವದೆಹಲಿ, ಅಕ್ಟೋಬರ್ 18: ಕಾವೇರಿ ಐ ತೀರ್ಪು ಸಲ್ಲಿಸಿದ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ. ಕಾವೇರಿ ನಿರ್ವಹಣಾ ಮಂಡಳಿ ರಚನೆ ಬಗ್ಗೆ ಸ್ಪಷ್ಟನೆ ಇನ್ನೂ ಸಿಕ್ಕಿಲ್ಲ. ಈ ನಡುವೆ ಮುಂದಿನ ಆದೇಶ ಹೊರ ಬರುವ ತನಕ ಪ್ರತಿದಿನ ತಮಿಳುನಾಡಿಗೆ 2,000 ಕ್ಯೂಸೆಕ್ಸ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.
ಸುಪ್ರೀಂಕೋರ್ಟ್
ತ್ರಿಸದಸ್ಯ
ಪೀಠದ
ಆದೇಶಕ್ಕೆ
ತಲೆಬಾಗಿರುವ
ಕರ್ನಾಟಕ
ಸರ್ಕಾರ
ನೀರು
ಬಿಡುವುದಾಗಿ
ಹೇಳಿದೆ.
ದ್ವಿಸದಸ್ಯ
ಪೀಠ
ನೀಡಿದ
ಆದೇಶದಂತೆ
ಅಕ್ಟೋಬರ್
18ರ
ತನಕ
ಪ್ರತಿನಿತ್ಯ
2,000
ಕ್ಯೂಸೆಕ್ಸ್
ನೀರು
ಹರಿಸಲು
ಯಾವುದೇ
ಸಮಸ್ಯೆಯಿಲ್ಲ
ಎಂದು
ನೀರಾವರಿ
ಸಚಿವ
ಎಂಬಿ
ಪಾಟೀಲ್
ಹೇಳಿದ್ದಾರೆ.[LIVE:
ಮುಂದಿನ
ವಿಚಾರಣೆ
ತನಕ
ನೀರು
ಬಿಡಬೇಕು
:ಸುಪ್ರೀಂ]
ಐತೀರ್ಪು ವಿಚಾರಣೆ ಮುಂದಕ್ಕೆ: ಇದಕ್ಕೂ ಮುನ್ನ ಕಾವೇರಿ ನ್ಯಾಯಾಧಿಕರಣ 2007ರಲ್ಲಿ ನೀಡಿದ ಐತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ ದೀಪಕ್ ಮಿಶ್ರಾ, ಅಮಿತಾವ್ ರಾಯ್ ಹಾಗೂ ಖನ್ವಿಲ್ಕರ್ ಅವರಿದ್ದ ತ್ರಿಸದಸ್ಯ ನ್ಯಾಯಪೀಠ, ವಿಚಾರಣೆಯನ್ನು ಅಕ್ಟೋಬರ್ 19ಕ್ಕೆ ಮುಂದೂಡಿದೆ.[ಉಮಾ ಸಲಹೆ ತಿರಸ್ಕರಿಸಿದ ತಮಿಳುನಾಡು, ಸಂಧಾನ ವಿಫಲ]