ಜಯಲಲಿತಾ ಪಾಲಿನ 100 ಕೋಟಿ ದಂಡ ವಸೂಲಿಯಲ್ಲೇನಿದು ಗೊಂದಲ?
ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಆದೇಶದಲ್ಲಿ ಸುಪ್ರೀಂ ಕೋರ್ಟ್ ದಿವಂಗತ ಜಯಲಲಿತಾರನ್ನು ಪೂರ್ತಿಯಾಗಿ ಹೊರಗಿಟ್ಟಿದೆ. ಅದರರ್ಥ ಏನೆಂದರೆ ಈಗ ಜಯಲಲಿತಾರಿಂದ ವಸೂಲಿ ಮಾಡಬೇಕಾಗಿದ್ದ 100 ಕೋಟಿ ರೂಪಾಯಿಯನ್ನು ವಸೂಲಿ ಮಾಡುವಂತಿಲ್ಲ.
ಬೆಂಗಳೂರು, ಫೆಬ್ರವರಿ 3: ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಆದೇಶದಲ್ಲಿ ಸುಪ್ರೀಂ ಕೋರ್ಟ್ ದಿವಂಗತ ಜಯಲಲಿತಾರನ್ನು ಪೂರ್ತಿಯಾಗಿ ಹೊರಗಿಟ್ಟಿದೆ. ಜಯಲಲಿತಾ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾಗಲೇ ಈ ರೀತಿ ಅವರನ್ನು ಹೊರಗಿಡಲಾಗಿತ್ತು. ಅದರರ್ಥ ಏನೆಂದರೆ ಈಗ ಜಯಲಲಿತಾರಿಂದ ವಸೂಲಿ ಮಾಡಬೇಕಾಗಿದ್ದ 100 ಕೋಟಿ ರೂಪಾಯಿಯನ್ನು ವಸೂಲಿ ಮಾಡುವಂತಿಲ್ಲ.
ಈ ಸಂಬಂಧ ಕರ್ನಾಟಕ ಸುಪ್ರೀಂ ಕೋರ್ಟ್ ನಿಂದ ವಿವರಣೆ ಕೇಳುವ ಸಾಧ್ಯತೆ ಇದೆ. ಸದ್ಯ ಈ ಒಂದು ಅಂಶದಲ್ಲಿ ಸರಕಾರಕ್ಕೆ ಗೊಂದಲ ಇದೆ.[ಜಯಲಲಿತಾ ಸಾವಿನ ರಹಸ್ಯ, ಪಾಂಡಿಯನ್ ಬಿಚ್ಚಿಟ್ಟ ಸ್ಫೋಟಕ ಮಾಹಿತಿ]

ಸುಪ್ರಿಂ ಕೋರ್ಟ್ ನಿಯಮಗಳ ಪ್ರಕಾರ ವಿಚಾರಣೆ ವೇಳೆ ವ್ಯಕ್ತಿ ಸಾವನ್ನಪ್ಪಿದರೆ ಮಾತ್ರ ಅವರನ್ನು ಪ್ರಕರಣದಿಂದ ಹೊರಗಿಡಬೇಕು. ಆದರೆ ಇಲ್ಲಿ ಜಯಲಲಿತಾ ಸತ್ತಿದ್ದು ವಿಚಾರಣೆಗಳೆಲ್ಲಾ ಮುಗಿದ ಬಳಿಕ. ಜಯಾ ಸಾಯುವ ವೇಳೆಗೆ ವಿಚಾರಣೆ ಮುಗಿದು ಆದೇಶವನ್ನು ಕಾಯ್ದಿರಿಸಲಾಗಿತ್ತು ಅಷ್ಟೆ; ಹೀಗಾಗಿ ಸುಪ್ರೀಂ ಕೋರ್ಟಿನ ನಿಯಮಗಳಂತೆಯೇ ಜಯಲಲಿತಾರನ್ನು ಪ್ರಕರಣದಿಂದ ಹೊರಗಿಡಲು ಸಾಧ್ಯವಿಲ್ಲ.
ಮೂಲಗಳ ಪ್ರಕಾರ ಜಯಾಲಲಿತಾರ 100 ಕೋಟಿ ವಸೂಲಿ ಮಾಡಬೇಕಾ ಬೇಡ್ವಾ ಎನ್ನುವ ಅಂಶದಲ್ಲಿ ಸರಕಾರಕ್ಕೆ ಸ್ಪಷ್ಟೀಕರಣ ಬೇಕಾಗಿದೆ. ಇದಾದ ನಂತರ 100 ಕೋಟಿ ರೂಪಾಯಿ ವಸೂಲಿಯ ಹಣೆಬರಹ ನಿರ್ಧರವಾಗಲಿದೆ.[ಜಯಾ ಫೋಟೋ ತೆಗೆಸಿ, ಯಾವ ಯೋಜನೆಗೂ ಆಕೆ ಹೆಸರು ಬೇಡ]
ಸದ್ಯ ಕರ್ನಾಟಕ ದಂಡದ ಮೊತ್ತ ವಸೂಲಿ ಮಾಡಲು ತಂಡ ರಚಿಸುವ ಸಿದ್ಧತೆಯಲ್ಲಿದೆ. ಈಗಾಗಲೇ ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, ಅಧಿಕೃತ ಆದೇಶವಷ್ಟೆ ಹೊರಬೀಳಬೇಕಾಗಿದೆ. ಸುಪ್ರೀ ಕೋರ್ಟ್ ಸ್ಪಷ್ಟೀಕರಣ ನೀಡಿದ ನಂತರವಷ್ಟೆ ಈ ಸಮಿತಿಯನ್ನು ರಚಿಸಲಾಗುತ್ತದೆ.
ಈಗಾಗಲೇ ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಆರೋಪಿ ಸಂಖ್ಯೆ 2ರಿಂದ 4 ರವರೆಗೆ ಅಂದರೆ ಶಶಿಕಲಾ ನಟರಾಜನ್, ಇಳವರಸಿ ಮತ್ತು ಸುಧಾಕರನ್ ಅಪರಾಧಿಗಳು ಎಂದು ಹೇಳಿದೆ. ಜಯಲಲಿತಾ ಅಸುನೀಗಿದ್ದರಿಂದ ಅವರನ್ನು ಆದೇಶದಿಂದ ಹೊರಗಿಡಲಾಗಿತ್ತು.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು












Click it and Unblock the Notifications