ರಾಹುಲ್ ಅವರ ಭಾಷಣ ಬರೆದವನು ನಿಜಕ್ಕೂ ಮಹಾನ್!
ಬೆಂಗಳೂರು, ಅಕ್ಟೋಬರ್ 12 : "2025ರೊಳಗೆ ನರೇಂದ್ರ ಮೋದಿಯವರು ಗುಜರಾತಿನ ಪ್ರತಿಯೊಬ್ಬನೂ ಚಂದ್ರನ ಮೇಲೆ ಹೋಗಲು ರಾಕೆಟ್ ನೀಡುತ್ತಾರೆ, 2028ರೊಳಗೆ ಗುಜರಾತಿನ ಎಲ್ಲ ನಾಗರಿಕರಿಗೆ ಚಂದ್ರನ ಮೇಲೆ ಒಂದು ಮನೆಯನ್ನು ನಿರ್ಮಿಸಿಕೊಡುತ್ತಾರೆ ಮತ್ತು 2030ರೊಳಗೆ ಚಂದ್ರನನ್ನೇ ಭೂಮಿಯ ಮೇಲೆ ತರುತ್ತಾರೆ!"
ಹಿಂದಿ ಸಿನೆಮಾ ಸಂಭಾಷಣೆಕಾರರು ನಾಚುವಂತೆ ಇಂಥ ಪವರ್ ಫುಲ್ ಡೈಲಾಗುಗಳನ್ನು ಒಂದರ ಹಿಂದೊಂದರಂತೆ ಬಾರಿಸಿ ಕಿವಿಗಡಚಿಕ್ಕುವ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದಾರೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು. ಆದರೆ, ಅವರು ಈ ಮಾತುಗಳೇ ವಿಭಿನ್ನ ರೀತಿಯಲ್ಲಿ ವಿಶ್ಲೇಷಣೆಗೆ ಗುರಿಯಾಗಿ ಅವರಿಗೇ ಮುಳುವಾಗುತ್ತಿವೆ.
ಇದರರ್ಥ ಕಾಂಗ್ರೆಸ್ಸಿಗೆ ಕೂಡ 2025ರೊಳಗೆ ಅಧಿಕಾರಕ್ಕೆ ಬರುವುದು ಸಾಧ್ಯವೇ ಇಲ್ಲ ಎಂಬುದನ್ನು ರಾಹುಲ್ ಅವರೇ ಒಪ್ಪಿಕೊಂಡಂತೆ ಆಯಿತಲ್ಲ ಎಂದು ಟ್ವಿಟ್ಟಿಗರೊಬ್ಬರು ರಾಹುಲ್ ಗಾಂಧಿ ಅವರ ಕಾಲೆಳೆದಿದ್ದಾರೆ. ರಾಹುಲ್ ಗಾಂಧಿ ಅವರು ಸಾರ್ವಜನಿಕವಾಗಿ ಆಡುತ್ತಿರುವ ಪ್ರತಿಯೊಂದು ಮಾತೂ ತಮಾಷೆಗೆ ಗ್ರಾಸವಾಗುತ್ತಿರುವುದು ಮಾತ್ರ ನಿಜಕ್ಕೂ ಶೋಚನೀಯ ಸಂಗತಿ.

ರಾಹುಲ್ ಸೋಲು ಒಪ್ಪಿಕೊಂಡಂತಾಯಿತಲ್ಲ!
ರಾಹುಲ್ ಗಾಂಧಿಯವರೆ, ನಿಮ್ಮ ಮಾತನ್ನೇ ನಂಬುವುದಾದರೆ, 2030 ಬರುವವರೆಗೆ ನಿಮಗೆ ಕೇಂದ್ರದಲ್ಲಿ ಮುಂದೆ ಸರಕಾರ ರಚಿಸಲು ಅವಕಾಶವೇ ಸಿಗುವುದಿಲ್ಲ ಎಂಬುದನ್ನು ಒಪ್ಪಿಕೊಂಡಂತಾಯಿತಲ್ಲ, ಇದಕ್ಕೆ ಏನಂತೀರಿ? ಎಂದು ಮೋದಿಯವರ ಅಭಿಮಾನಿಯೊಬ್ಬರು ಕಿಚಾಯಿಸಿದ್ದಾರೆ.

ವದ್ರಾ ಕೃಷಿ ಮಾಡ್ತಾರೆ, ರಾಹುಲ್ ಆಲೂ ಫ್ಯಾಕ್ಟರಿ ಹಾಕ್ತಾರೆ
ಮೋದಿಯವರು ಚಂದ್ರನನ್ನು ಭೂಮಿಗೆ ತರುತ್ತಿದ್ದಂತೆ ಅದನ್ನೂ ವದ್ರಾ ಸಾಹೇಬರು ಮಾರಾಟ ಮಾಡಿಬಿಡುತ್ತಾರೆ ಅಥವಾ ವದ್ರಾ ಅವರು ಅಲ್ಲಿ ಕೃಷಿ ಮಾಡಲು ಆರಂಭಿಸುತ್ತಾರೆ ಮತ್ತು ರಾಹುಲ್ ಅವರು ಆ ಜಮೀನಿನಲ್ಲಿ ಆಲೂಗಡ್ಡೆಯ ಫ್ಯಾಕ್ಟರಿ ಸ್ಥಾಪಿಸುತ್ತಾರೆ ಎಂದು ಮತ್ತೊಬ್ಬರು ರಿವರ್ಸ್ ಸ್ವಿಂಗ್ ಎಸೆದಿದ್ದಾರೆ.

ಗುಜರಾತಿಗೆ ಹಾಲನ್ನು ನೀಡಿದವರು ಮಹಿಳೆಯರು
ರಾಹುಲ್ ಸರ್ ಜೀ, ಮೋದಿಜಿಯವರ ಮಾತನ್ನು ಅತ್ಲಾಗಿಡಿ, ಈ ಮಾತಿನ ಅರ್ಥವೇನೆಂದು ಹೇಳಿರಿ ಎಂದು ಮಗದೊಬ್ಬರು ಪ್ರಶ್ನಿಸಿದ್ದಾರೆ. ರಾಹುಲ್ ಅವರ ಆ ಮಾತು ಯಾವುದು? ಇಲ್ಲಿದೆ ಓದಿ... "ಗುಜರಾತನ್ನು ಯಾರಾದರೂ ನಿಲ್ಲಿಸಿದ್ದರೆ, ಗುಜರಾತಿಗೆ ಯಾರಾದರೂ ಅಮೂಲ್ ನೀಡಿದ್ದರೆ, ಗುಜರಾತಿಗೆ ಯಾರಾದರೂ ಹಾಲು ನೀಡಿದ್ದರೆ ಅವರು ಇಲ್ಲಿದ್ದಾರೆ ನೋಡಿ ಗುಜರಾತಿನ ಮಹಿಳೆಯರು!"

ರಾಹುಲ್ ಭಾಷಣ ಬರೆಯುವವನು ನಿಜಕ್ಕೂ ಮಹಾನ್!
ರಾಹುಲ್ ಗಾಂಧಿಯವರು ಯಾಕೋ ಫುಲ್ ಫಾರ್ಮಿನಲ್ಲಿ ಇದ್ದಂಗೆ ಕಾಣುತ್ತದೆ. ಮೋದಿಯವರು ಏನು ಹೇಳುತ್ತಾರೆ, ಮುಂದೆ ಏನು ಮಾಡುತ್ತಾರೆ, ಚಂದ್ರನನ್ನು ತರುತ್ತಾರೋ ಬಿಡುತ್ತಾರೋ, ಆದರೆ, ಸೋನಿಯಾ ಮತ್ತು ರಾಹುಲ್ ಅವರು 2004ರಿಂದ 2014ರವರೆಗೆ ಕಾಂಗ್ರೆಸ್ಸನ್ನು ಪಾತಾಳಕ್ಕೆ ತೆಗೆದುಕೊಂಡು ಹೋಗಿದ್ದಾರೆ. ರಾಹುಲ್ ಅವರ ಭಾಷಣ ಬರೆಯುವವನು ನಿಜಕ್ಕೂ ಮಹಾನ್! ಎಂದಿದ್ದಾರೆ ಟ್ವಿಟ್ಟಿಗರೊಬ್ಬರು.

ಚಂದುಮಾಮಾನಾದರೂ ಖುಷಿಪಡಲಿ
ರಾಹುಲ್ ಬಾಬಾ ಅವರು ಮೋದಿಯವರು ಚಂದ್ರನನ್ನು ಭೂಮಿಗೆ ತರುತ್ತಾರಂತೇನೋ ಹೇಳಿಬಿಟ್ಟಿದ್ದಾರೆ. ಆದರೆ, ಅವರಿಗೆ ಈ ಮಾತಿನ ಅರ್ಥವಾದರೂ ಗೊತ್ತಿದೆಯಾ? ಏನೇ ಆಗಲಿ, ಚಂದ್ರನಲ್ಲಿಗೆ ಪ್ರತಿ ಗುಜರಾತಿಯನ್ನು ರಾಕೆಟ್ ಮೂಲಕ ಚಂದ್ರನಲ್ಲಿಗೆ ಕಳಿಸುವುದೇ ಆದರೆ, ನಾನು ರಾಹುಲ್ ಅವರನ್ನು ಚಂದ್ರನಲ್ಲಿಗೆ ಕರೆದುಕೊಂಡು ಹೋಗುತ್ತೇನೆ. ನಿಮ್ಮನ್ನು ನೋಡಿ, ಚಂದುಮಾಮಾನಾದರೂ ಖುಷಿಪಡಲಿ ಎಂದಿದ್ದಾರೆ ಹರಿ ಎಂಬುವವರು.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು












Click it and Unblock the Notifications