ಬಜೆಟ್ 2017: 'ಡಿಜಿಟಲ್ ವ್ಯವಹಾರ'ವೇ ಮೋದಿ ಸರಕಾರದ ಮಂತ್ರ
ಅರುಣ್ ಜೇಟ್ಲಿ ಮಂಡಿಸಿದ 2017ರ ಕೇಂದ್ರ ಬಜೆಟಿನಲ್ಲಿ ಡಿಜಿಟಲ್ ವ್ಯವಹಾರ ಉತ್ತೇಜನಕ್ಕೆ ಸರಕಾರ ಹಲವು ಕೊಡುಗೆಗಳನ್ನು ನೀಡಿದೆ.
ನವದೆಹಲಿ, ಫೆಬ್ರವರಿ 1: ಅರುಣ್ ಜೇಟ್ಲಿ ಮಂಡಿಸಿದ 2017ರ ಕೇಂದ್ರ ಬಜೆಟಿನಲ್ಲಿ ಡಿಜಿಟಲ್ ವ್ಯವಹಾರ ಉತ್ತೇಜನಕ್ಕೆ ಸರಕಾರ ಹಲವು ಕೊಡುಗೆಗಳನ್ನು ನೀಡಿದೆ. ಅಪನಗದೀಕರಣದ ನಂತರ ಡಿಜಿಟಲ್ ವ್ಯವಹಾರಕ್ಕೆ ಕೇಂದ್ರ ಸರಕಾರ ಆಸಕ್ತಿ ವಹಿಸಿದ್ದು ಬಜೆಟಿನಲ್ಲಿಯೂ ಅವು ಬಿಂಬಿತವಾಗಿವೆ.[ಜೇಟ್ಲಿ ಬಜೆಟನ್ನು ಠುಸ್ ಪಟಾಕಿ ಎಂದ ರಾಹುಲ್ ಗಾಂಧಿ]

ಡಿಜಿಟಲ್ ವ್ಯವಹಾರದ ಬಗ್ಗೆ ಬಜೆಟಿನಲ್ಲಿ ಘೋಷಿಸಿದ ಪ್ರಮುಖ ಅಂಶಗಳು ಹೀಗಿವೆ,
*ಈ ಹಿಂದೆ ವಾರ್ಷಿಕ 2 ಕೋಟಿವರೆಗೆ ವ್ಯವಹಾರ ಮಾಡುವವರಿಗೆ ಶೇಕಡಾ 8ನ್ನು ಆದಾಯ ಎಂದು ಪರಿಗಣಿಸಲಾಗುತ್ತಿತ್ತು. ಇದೀಗ ನಗದು ರಹಿತ ವ್ಯವಹಾರ ಮಾಡಿದರೆ ಸರಕಾರ ಕೇವಲ ಶೇಕಡಾ 6ನ್ನು ಆದಾಯ ಎಂದು ಪರಿಗಣಿಸಲಿದೆ. ಇದರಿಂದ ಜನರಿಗೆ ತೆರಿಗೆ ಹಣ ಉಳಿತಾಯವಾಗಲಿದೆ.
*ಕೆಲವು ವಿಶೇಷ ಸಂದರ್ಭಗಳನ್ನು ಹೊರತು ಪಡಿಸಿ ಮೂರು ಲಕ್ಷಕ್ಕಿಂತ ಹೆಚ್ಚಿನ ನಗದು ಪಾವತಿಯನ್ನು ಸರಕಾರ ನಿಷೇಧಿಸಿದೆ.
*ಮಿನಿ POS ಕಾರ್ಡ್ ರೀಡರ್ ಗಳು, ಮೈಕ್ರೋ ಎಟಿಎಂ, ಫಿಂಗರ್ ಫ್ರಿಂಟ್ ರೀಡರ್, ಐರಿಸ್ (ಕಣ್ಣು) ಸ್ಯ್ಯಾನರ್ ಮತ್ತು ಅವುಗಳ ಇತರ ಉತ್ಪನ್ನಗಳ ಉತ್ಪಾದನೆ ಮೇಲಿನ ತೆರಿಗೆಯನ್ನು ಸರಕಾರ ರದ್ದು ಪಡಿಸಿದೆ.[ರೈಲ್ವೇ ಬಜೆಟ್ 2017: ಏನುಂಟು.. ಏನಿಲ್ಲ..]
*ದೇಶದಲ್ಲಿ ಈಗಾಗಲೇ 1.25 ಕೋಟಿ ಜನ ಭೀಮ್ (BHIM) ಆ್ಯಪ್ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಭೀಮ್ ಆ್ಯಪ್ ಮೂಲಕ ವ್ಯವಹಾರ ಮಾಡುವ ಜನರಿಗೆ ಬೋನಸ್ ಹಾಗೂ ವ್ಯಾಪಾರಿಗಳಿಗೆ ಕ್ಯಾಶ್ ಬ್ಯಾಕ್ ಕೊಡುಗೆಗಳನ್ನು ಸರಕಾರ ನೀಡಲಿದೆ.
*'ಆಧಾರ್ ಪೇ' ಎಂಬ ಆಧಾರ್ ಕಾರ್ಡ್ ಆಧಾರಿತ ವ್ಯಾಪಾರಿಗಳಿಗೆ ಅನುಕೂಲವಾಗುವ ಪಾವತಿ ವ್ಯವಸ್ಥೆಯನ್ನು ಸರಕಾರ ಸದ್ಯದಲ್ಲೇ ಬಿಡುಗಡೆ ಮಾಡಲಿದೆ.
*ಕಾರ್ಡು, ಭೀಮ್ ಆ್ಯಪ್, ಆಧಾರ್ ಪೇ ಮುಂತಾದ ವ್ಯವಹಾರಗಳ ಮೂಲಕ 2017-18ರಲ್ಲಿ ಒಟ್ಟು 2,500 ಕೋಟಿ ನಗದು ರಹಿತ ವ್ಯವಹಾರಗಳನ್ನು ಮಾಡುವ ಗುರಿಯನ್ನು ಸರಕಾರ ಹಾಕಿಕೊಳ್ಳಲಾಗಿದೆ.
*ಒಂದು ಹಂತಕ್ಕಿಂತ ನಂತರದ ಸರಕಾರದ ಬಿಲ್ ಪಾವತಿಗಳನ್ನು ಡಿಜಿಟಲ್ ಮೂಲಕವೇ ಮಾಡುವುದನ್ನು ಕಡ್ಡಾಯಗೊಳಿಸಲು ಸರಕಾರ ನಿರ್ಧರಿಸಿದೆ.
ಹೀಗೆ ಡಿಜಿಟಲ್ ವ್ಯವಹಾರಗಳನ್ನು ಉತ್ತೇಜಿಸಲು ಸರಕಾರ ಹಲವು ಕ್ರಮ ಕೈಗೊಂಡಿದೆ.
(ಚಿತ್ರ ಕೃಪೆ: ಶಟರ್ ಸ್ಟಾಕ್)
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ












Click it and Unblock the Notifications