ಬಜೆಟ್ 2020: ವಿತ್ತಿಯ ಕೊರತೆ ಸರಿತೂಗಿಸಲು ಸರ್ಕಾರದ ಪಾಲುದಾರಿಕೆ ಮಾರಾಟ
ನವದೆಹಲಿ, ಫೆಬ್ರವರಿ 01: ಅತಿಯಾಗಿ ಕಾಡುತ್ತಿರುವ ವಿತ್ತಿಯ ಕೊರತೆ ನೀಗಿಸುವ ಸಲುವಾಗಿ ಸರ್ಕಾರವು ಎಲ್ಐಸಿ ಅಲ್ಲಿನ ತನ್ನ ಪಾಲುದಾರಿಕೆ ಭಾಗವನ್ನು ಮಾರುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಬಜೆಟ್ 2020 ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿತ್ತಿಯ ಕೊರತೆ ನೀಗಿಸಲು ಬೃಹತ್ ಜೀವ ವಿಮಾ ಸಂಸ್ಥೆ ಎಲ್ಐಸಿ ಯಲ್ಲಿನ ಪಾಲುದಾರಿಕೆಯಲ್ಲಿನ ಭಾಗವನ್ನು ಮಾರುವುದಾಗಿ ಹೇಳಿದರು. ಇದರ ಜೊತೆಗೆ ಐಡಿಬಿಐ ಬ್ಯಾಂಕ್ನಲ್ಲಿ ಪಾಲುದಾರಿಕೆಯನ್ನೂ ಮಾರುವುದಾಗಿ ಹೇಳಿದರು.
ಎಲ್ಐಸಿ ಮತ್ತು ಐಡಿಬಿಐ ಪಾಲುದಾರಿಕೆಯನ್ನು ಐಪಿಓ (ಇನಿಷಿಯಲ್ ಪಬ್ಲಿಕ್ ಆಫರ್) ಮುಖಾಂತರ ಮಾರಾಟ ಮಾಡಲಾಗುವುದು. ಸರ್ಕಾರವು ವಿತ್ತಯ ಕೊರತೆಯನ್ನು ಸರಿದೂಗಿಸುವ ಕಾರಣದಿಂದಾಗಿ ತನ್ನ ಪಾಲುದಾರಿಕೆಯನ್ನು ಮಾರಾಟ ಮಾಡುತ್ತಿದೆ.

ಎಲ್ಐಸಿ ಮತ್ತು ಐಡಿಬಿಐ ಪಾಲುದಾರಿಕೆ ಮಾರಾಟದಿಂದ ಈ ಎರಡೂ ಸಂಸ್ಥೆಗಳಲ್ಲಿ ಹೂಡಿಕೆ ಮಾಡಲು ಜನರಿಗೆ ಅವಕಾಶ ದೊರಕಲಿದೆ.












Click it and Unblock the Notifications