10 ಗಂಟೆ ಏಣಿ ಮೇಲೆ ನಿಂತು ಬೈಕ್ ಓಡಿಸಿ ವಿಶ್ವದಾಖಲೆ
ನವದೆಹಲಿ, ಏಪ್ರಿಲ್ 25: ಮೋಟಾರ್ಬೈಕ್ಗೆ ಅಳವಡಿಸಿದ ಏಣಿ ಮೇಲೆ ನಿಂತು ನಿರಂತರವಾಗಿ 10 ಗಂಟೆ 37 ನಿಮಿಷ 27 ಸೆಕೆಂಡ್ ಬೈಕ್ ಓಡಿಸಿದ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಯೋಧರು ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಬಿಎಸ್ಎಫ್ನ 'ಜನ್ಬಾಜ್' ತಂಡದ ಇನ್ಸ್ಪೆಕ್ಟರ್ ಅವದೇಶ್ ಕುಮಾರ್ ಸಿಂಗ್ ಮತ್ತು ಹೆಡ್ ಕಾನ್ಸ್ಟೆಬಲ್ ದುರ್ವೇಶ್ ಕುಮಾರ್ ಮಂಗಳವಾರ 350 ಸಿಸಿ ಸಾಮರ್ಥ್ಯದ ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕ್ಗೆ ಅಳವಡಿಸಿದ 16.5 ಅಡಿ ಎತ್ತರದ ಏಣಿಯಲ್ಲಿ ನಿಂತು ಸತತವಾಗಿ ಚಾಲನೆ ಮಾಡಿ ಲಿಮ್ಕಾ ದಾಖಲೆ ಪುಸ್ತಕದಲ್ಲಿ ಹೆಸರು ದಾಖಲಿಸಿದ್ದಾರೆ.
Inspector Awdhesh Kumar Singh and Head Constable Durvesh Kumar of BSF motorcycle trick riding team "Janbaz" set a new world record when they rode for 10 hours 34 minutes 27 seconds continuously on a 16 feet 5 inch tall ladder fitted to their motorcycles pic.twitter.com/uXp5qLwVQq
— ANI (@ANI) 25 April 2018
ದೆಹಲಿಯ ಚಾವ್ಲಾ ಬಿಎಸ್ಎಫ್ ಶಿಬಿರದಲ್ಲಿ ಈ ದಾಖಲೆ ನಿರ್ಮಿಸಲಾಗಿದೆ. ಭಾರತದ ಸೇನಾ ಪಡೆಯೇ ಈ ಹಿಂದೆ ನಿರ್ಮಿಸಿದ್ದ ದಾಖಲೆಯನ್ನು ಬಿಎಸ್ಎಫ್ ಮುರಿದಿದೆ. ಸೇನಾ ಪಡೆಯು 9 ಗಂಟೆ 4 ನಿಮಿಷ 5 ಸೆಕೆಂಡ್ ಬೈಕ್ ಓಡಿಸಿ ದಾಖಲೆ ಮಾಡಿತ್ತು.
ಏಪ್ರಿಲ್ 13ರಂದು 36 ಯೋಧರನ್ನು ಹೊತ್ತ ಮೂರು ಬೈಕ್ಗಳು ಒಂದು ಕಿ.ಮೀ. ದೂರವನ್ನು ಕೇವಲ 55.52 ಸೆಕೆಂಡ್ಗಳಲ್ಲಿ ಕ್ರಮಿಸಿದ್ದವು ಎಂದು ಬಿಎಸ್ಎಫ್ ಹೇಳಿಕೆ ತಿಳಿಸಿದೆ.
'ಜನ್ಬಾಜ್' ತಂಡವನ್ನು 1990ರಲ್ಲಿ ನಿರ್ಮಿಸಲಾಯಿತು. ಗುರುತ್ವಾಧಾರಿತ ಸ್ಟಂಟ್ಗಳನ್ನು ಮಾಡುವಲ್ಲಿ ಈ ತಂಡ ಪ್ರಸಿದ್ಧಿ ಪಡೆದಿದೆ.
-
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ -
Government Employees: ಪಶ್ಚಿಮ ಬಂಗಾಳ ಸರ್ಕಾರಿ ನೌಕರರಿಗೆ ಸಿಎಂ ಮಮತಾ ಬ್ಯಾನರ್ಜಿ ಬಂಪರ್ ಕೊಡುಗೆ -
ರಾಜ್ಯದಲ್ಲಿ ಕಮರ್ಷಿಯಲ್ ಉದ್ದೇಶಕ್ಕೆ ಗೃಹಬಳಕೆ LPG ಸಿಲಿಂಡರ್ ಬಳಸಿದವರ ಮೇಲೆ ಅಧಿಕಾರಿಗಳ ಖಡಕ್ ದಾಳಿ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ












Click it and Unblock the Notifications