ಜೇಟ್ಲಿ ಕೇಂದ್ರ ಬಜೆಟ್ ಗೆ ಬೃಂದಾ ಕಾರಟ್ ಟೀಕೆ

ಅಗರ್ತಲ, ಫೆಬ್ರವರಿ 2: ವಿತ್ತ ಸಚಿವ ಅರುಣ್ ಜೇಟ್ಲಿ ನಿನ್ನೆ(ಫೆ.1) ಮಂಡಿಸಿದ ಕೇಂದ್ರ ಬಜೆಟ್ ಗೆ ಸಂಬಂಧಿಸಿದಂತೆ ಭಾರತೀಯ ಕಮ್ಯುನಿಸ್ಟ್ ಪಕ್ಷ(ಸಿಪಿಎಂ)ದ ನಾಯಕಿ ಬೃಂದಾ ಕಾರಟ್ ಟೀಕೆಯ ಸುರಿಮಳೆ ಸುರಿಸಿದ್ದಾರೆ.

"ಈ ಬಜೆಟ್ ರೈತರ ಪಾಲಿಗೆ ಒಂದು ವ್ಯಂಗ್ಯವಷ್ಟೆ. ಕೆಲವು ತಿಂಗಳುಗಳ ಹಿಂದಷ್ಟೇ, ಸ್ವಾಮಿನಾಥನ್ ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೆ ತರುವುದು ಸದ್ಯಕ್ಕೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ ಪತ್ರ ಬರೆದಿದ್ದ ಜೇಟ್ಲಿ, ಇದೀಗ ಬಜೆಟ್ ಭಾಷಣದ ಸಮಯದಲ್ಲಿ, ಸ್ವಾಮಿನಾಥ್ ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೊಳಿಸಿದ್ದೇವೆ ಅಂದಿದ್ದಾರೆ. ಇದು ವ್ಯಂಗ್ಯವಲ್ಲದೆ ಮತ್ತೇನು?" ಎಂದು ಅವರು ಪ್ರಶ್ನಿಸಿದ್ದಾರೆ.

ತ್ರಿಪುರದ ಅಗರ್ತಲದಲ್ಲಿ ಮಾತನಾಡಿದ ಕಾರಟ್, ವಿತ್ತ ಸಚಿವರು ಸಂಸತ್ತು ಮತ್ತು ದೇಶದ ಜನರ ಹಾದಿತಪ್ಪಿಸುತ್ತಿದ್ದಾರೆ. ಸರ್ಕಾರ ಘೋಷಿಸಿದ ಆರೋಗ್ಯ ವಿಮೆ ಕುರಿತೂ ಸ್ಪಷ್ಟನೆ ಇಲ್ಲ. ಒಟ್ಟಿನಲ್ಲಿ ಇದೊಂದು ವಿಫಲ ಬಜೆಟ್ ಎಂದು ಪ್ರತಿಕ್ರಿಯಿಸಿದ್ದಾರೆ.

Brinda Karat criticises Union Budget over farmers issue
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+