ಕ್ಯಾನ್ಸರ್: ನಟಿ ಜೂಹಿ ಮೊಬೈಲ್ ಮಾತು ಕೇಳಿಸಿಕೊಳ್ಳಿ
ಮುಂಬೈ, ಅ.19: ಮೊಬೈಲ್ ಬಳಕೆ ಮತ್ತು ವಾಯುಮಾಲಿನ್ಯವು ಮಾರಕ ಕ್ಯಾನ್ಸರ್ ಅನ್ನು ಹೇಗೆ ಪೋಷಿಸುತ್ತದೆ ಎಂಬ ಬಗ್ಗೆ ಇಲ್ಲೆರಡು ವರದಿಗಳಿವೆ ತಪ್ಪದೆ ಓದಿ.
ಮೊದಲು ಬಾಲಿವುಡ್ ನಟಿ ಜೂಹಿ ಮೊಬೈಲ್ ಮಾತು:
ವಿಪರೀತವಾಗಿ ಮೊಬೈಲ್ ಫೋನ್ ಬಳಸಿದರೆ ಕ್ಯಾನ್ಸರ್ ರೋಗ ಬರಬಹುದು. ಅಷ್ಟೇ ಅಲ್ಲ. ಮೊಬೈಲ್ ಟವರುಗಳು ನಾಯಿಕೊಡೆಗಳಂತೆ ಎಲ್ಲೆಡ ತಲೆ ಎತ್ತುತ್ತಿವೆ. ಇದರಿಂದ ಕೂಡ ವಿಕಿರಣ ಉಂಟಾಗಿ ಜನರಿಗೆ ಕ್ಯಾನ್ಸರ್ ಅಂತಹ ಮಹಾ ರೋಗಗಳು ಬರಬಹುದು ಎಂಬು ನಿತ್ಯ ಸತ್ಯ. ಆದರೆ ಇದನ್ನು ಯಾರೂ ಲೆಕ್ಕಕ್ಕೇ ತೆಗೆದುಕೊಳ್ಳುತ್ತಿಲ್ಲ.

ಇದಕ್ಕೆ ಕಾರಣ ಮೊಬೈಲ್ ಫೋನಿಗೆ ಜನರು ಜೋತುಬಿದ್ದಿರುವುದು. ಇಂದು ಮೊಬೈಲ್ ಫೋನ್ ಕೇವಲ ಮಾತನಾಡುವ ಸಾಧನವಾಗಿ ಉಳಿದಿಲ್ಲ. ಅದೊಂದು ಕಂಪ್ಯೂಟರ್ ಆಗಿಯೂ ಮಾರ್ಪಟ್ಟಿದ್ದು, ಸುಲಭ ಮನೋರಂಜನೆಯ ಸಾಧನ ಕೂಡ ಆಗಿಬಿಟ್ಟಿದೆ. ಆದರೆ ಜನರಿಗೆ ಮೊಬೈಲಿಂದ ಉಂಟಾಗುವ ಆರೋಗ್ಯ ಹಾನಿಯ ಬಗ್ಗೆ ತಿಳಿವಳಿಕೆ ಮೂಡಿಸುವ ಪ್ರಯತ್ನ ನಡೆಯುತ್ತಿಲ್ಲ ಎಂದು ಬಾಲಿವುಡ್ ನಟಿ ಜೂಹಿ ಚಾವ್ಲಾ ವಿಷಾಸಿದ್ದಾರೆ.
ಸದ್ಯೋಭವಿಷ್ಯದಲ್ಲಿ ಭಾರತವು ಕ್ಯಾನ್ಸರ್ ಕಾಯಿಲೆಯಲ್ಲಿ ಇಡೀ ವಿಶ್ವಕ್ಕೆ ರಾಜಧಾನಿಯಾಗುವುದು ನಿಶ್ಚಿತ ಎಂಬುದನ್ನು ಮನಗಂಡು ನಟಿ ಜೂಹಿ ಈ ಕುರಿತಾಗಿ ಜನಜಾಗೃತಿಯಲ್ಲಿ ತೊಡಗಿದ್ದಾರೆ.
ಇನ್ನು, ಉಸಿರಾಡುವ ಗಾಳಿಯೂ ಕ್ಯಾನ್ಸರ್ ಕಾರಕ :
'ಬೇರೆಯವರು ಸೇದಿಬಿಟ್ಟ ಸಿಗರೇಟ್ನ ಹೊಗೆ ಸೇವನೆ ಅಪಾಯಕಾರಿಯೇ. ಉಸಿರಾಟಕ್ಕಾಗಿ ನಾವು ದೇಹದೊಳಕ್ಕೆ ಎಳೆದುಕೊಳ್ಳುವ ಗಾಳಿಯಲ್ಲೂ ಕ್ಯಾನ್ಸರ್ ಕಾರಕ ಅಂಶಗಳಿವೆ'ಎಂದು ವಿಶ್ವ ಆರೋಗ್ಯ ಸಂಸ್ಥೆಯ ಕ್ಯಾನ್ಸರ್ ಸಂಘಟನೆ ಲಂಡನ್ನಿನಲ್ಲಿ ಹೇಳಿದೆ. [ಬೆಂಗಳೂರು ಕ್ಯಾನ್ಸರ್ ರಾಜಧಾನಿ]
2010ರಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ವಿಶ್ವಾದ್ಯಂತ ವಾಯುಮಾಲಿನ್ಯದಿಂದಾಗಿ ಶ್ವಾಸಕೋಶ ಕ್ಯಾನ್ಸರಿಗೆ ತುತ್ತಾಗಿದ್ದಾರೆ. ಮೂತ್ರಕೋಶ ಕ್ಯಾನ್ಸರ್ ಸಂಭಾವ್ಯತೆಯನ್ನೂ ವಾಯುಮಾಲಿನ್ಯ ಹೆಚ್ಚಿಸುತ್ತದೆ ಎಂಬುದಕ್ಕೆ ಪುರಾವೆಗಳೂ ಲಭಿಸಿವೆ ಎಂದು ಅಂತಾರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಹೇಳಿದೆ. ಅಲ್ಲದೆ ವಾತಾವರಣದಲ್ಲಿನ ಗಾಳಿ ಮಾನವರಿಗೆ ಕ್ಯಾನ್ಸರ್ ಕಾರಕ ಎಂದು ವರ್ಗೀಕರಿಸಿದೆ.
ಜನರು ವಾಯುಮಾಲಿನ್ಯಕ್ಕೆ ಹೆಚ್ಚೆಚ್ಚು ತುತ್ತಾದಷ್ಟೂ ಶ್ವಾಸಕೋಶ ಕ್ಯಾನ್ಸರಿಗೆ ತುತ್ತಾಗುವ ಅಪಾಯವಿರುತ್ತದೆ. ವಿವಿಧ ಭಾಗಗಳಲ್ಲಿನ ಮಾಲಿನ್ಯಪೂರಿತ ಗಾಳಿಯ ಸೇವನೆ ಪ್ಯಾಸಿವ್ ಸ್ಮೋಕಿಂಗ್ (ಬೇರೆಯವರು ಸೇದಿಬಿಟ್ಟ ಸಿಗರೇಟ್ನ ಹೊಗೆ ಸೇವನೆ)ನಷ್ಟೇ ಅಪಾಯಕಾರಿ ಎಂದು ಕಂಡುಬಂದಿದೆ.
ಸಾರಿಗೆ, ವಿದ್ಯುತ್ ಉತ್ಪಾದನೆ, ಕೈಗಾರಿಕಾ ಅಥವಾ ಕೃಷಿ ಕ್ಷೇತ್ರದಲ್ಲಿ ಹಾಗೂ ನಿವಾಸಗಳಲ್ಲಿ ಅಡುಗೆ ವೇಳೆ ಬಿಡುಗಡೆಯಾಗುವ ಅನಿಲದಿಂದ ವಾಯುಮಾಲಿನ್ಯ ಉಂಟಾಗುತ್ತಿದೆ. ಇದರಿಂದಾಗಿ ಉಸಿರಾಟ ಹಾಗೂ ಹೃದ್ರೋಗ ಕೂಡ ಕಾಣಿಸಿಕೊಳ್ಳುತ್ತದೆ ಎಂದು ಹೇಳಿದೆ. [ಧೂಮಪಾನಿಗಳು ಓದಲೇಬೇಕಾದ ಸಮೀಕ್ಷೆಯಿದು!]
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್












Click it and Unblock the Notifications