ಪಾಕಿಸ್ತಾನದಲ್ಲಿರುವ ರಿಷಿ ಕಪೂರ್ ಪೂರ್ವಜರ ಮನೆ ಆಗಲಿದೆ ಮ್ಯೂಸಿಯಂ
ಬಾಲಿವುಡ್ ನಟ ರಿಷಿ ಕಪೂರ್ ನ ಪೂರ್ವಜರ ಮನೆಯನ್ನು ಸಂಗ್ರಹಾಲಯವಾಗಿ ಮಾರ್ಪಡಿಸಲು ಯೋಜನೆ ರೂಪಿಸಿದೆ. ಅಲ್ಲಿನ ಖಿಸಾ ಖ್ವಾನಿ ಬಜಾರ್ ಮನೆಯನ್ನು ಸಂಗ್ರಹಾಲಯವಾಗಿ ಬದಲಿಸಲು ರಿಷಿ ಕಪೂರ್ ಮನವಿ ಮಾಡಿದ್ದರು. ಭಾರತೀಯ ಪತ್ರಕರ್ತರ ಜತೆ ಬುಧವಾರ ರಾತ್ರಿ ಈ ಬಗ್ಗೆ ಪಾಕ್ ವಿದೇಶಾಂಗ ಸಚಿವ ಷಾ ಮಹ್ಮೂದ್ ಖುರೇಷಿ ಮಾತನಾಡಿದ್ದಾರೆ.
ಆ ಮನೆಯನ್ನು ಸಂಗ್ರಹಾಲಯ ಅಥವಾ ಒಂದು ಸಂಸ್ಥೆಯನ್ನಾಗಿ ಮಾಡಿ ಎಂದು ರಿಷಿ ಕಪೂರ್ ಕೇಳಿಕೊಂಡಿದ್ದರು. ನಾವದನ್ನು ಸಂಗ್ರಹಾಲಯವಾಗಿ ಮಾಡ್ತೀವಿ ಅಂತ ತಿಳಿಸಿ ಎಂದು ಅಲ್ಲಿನ ಸಚಿವ ಹೇಳಿದ್ದಾರೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ರಾಜಕೀಯ ವ್ಯವಹಾರಗಳ ವಿಶೇಷ ಸಹಾಯಕ ನಯಿಮುಲ್ ಹಕ್ ಮಾತನಾಡಿ, ಪೇಶಾವರದ ಇತಿಹಾಸ, ಪರಂಪರೆ ಕಾಪಾಡಿಕೊಳ್ಳುವಲ್ಲಿ ಪ್ರಧಾನಿಗಳಿಗೆ ವಿಶೇಷ ಕಾಳಜಿ ಇದೆ. ಈ ಸ್ಥಳಗಳನ್ನು ಮತ್ತೆ ಹಳೆ ವೈಭವಕ್ಕೆ ತರುವುದು ಅವರ ಗುರಿ. ಆದ್ದರಿಂದ ರಿಷಿ ಕಪೂರ್ ಅವರ ಮನವಿಯನ್ನು ಸಕಾರಾತ್ಮಕವಾಗಿ ಪೂರೈಸಲಾಗುವುದು ಎಂದಿದ್ದಾರೆ.
ಸಚಿವ ಶೆಹರ್ಯಾರ್ ಖಾನ್ ಅಫ್ರಿದಿ ಮಾತನಾಡಿ, 2016ರಲ್ಲಿ ನಾನು ಜೈಪುರ್ ಗೆ ಭೇಟಿ ನೀಡಿದಾಗ ಆ ಮನೆ ಬಗ್ಗೆ ರಿಷಿ ಕಪೂರ್ ಕರೆ ಮಾಡಿದ್ದರು ಎಂದಿದ್ದಾರೆ. ಆ ಸಂದರ್ಭದಲ್ಲಿ ಅಫ್ರಿದಿ ಅವರು ಖೈಬರ್-ಪಂಖ್ತುವಾ ಪ್ರಾಂತ್ಯದ ಸಂಸದ ಆಗಿದ್ದರು. ಮತ್ತು ಇಮ್ರಾನ್ ಖಾನ್ ರ ತೆಹ್ರೀಕ್ ಇ ಇನ್ಸಾಫ್ ಪಕ್ಷ ವಿರೋಧ ಪಕ್ಷವಾಗಿತ್ತು.

ಪೃಥ್ವಿರಾಜ್ ಕಪೂರ್ ರ ತಂದೆ ನಿರ್ಮಿಸಿದ ಮನೆ
"ರಿಷಿ ಕಪೂರ್ ಕರೆ ಮಾಡಿದ್ದರು. ಅವರ ಪೂರ್ವಜರ ಮನೆಯನ್ನು ಸಂಗ್ರಹಾಲಯ ಮಾಡುವ ಬಗ್ಗೆ ಮಾತನಾಡಿದರು. ಇದೀಗ ಕೇಂದ್ರ ಹಾಗೂ ಪ್ರಾಂತ್ಯದ ಸರಕಾರವು ಇದನ್ನು ಪೂರ್ಣಗೊಳಿಸಲು ಕೆಲಸ ಮಾಡುತ್ತಿವೆ" ಎಂದು ಅಫ್ರಿದಿ ಹೇಳಿದ್ದಾರೆ. ಪಾಕಿಸ್ತಾನದ ಖಿಸಾ ಖ್ವಾನಿ ಬಜಾರ್ ನಲ್ಲಿ ಬಶೇರ್ ನಾಥ್ ಕಪೂರ್ ಮನೆಯನ್ನು ನಿರ್ಮಿಸಿದ್ದರು. ಅವರು ಪೃಥ್ವಿರಾಜ್ ಕಪೂರ್ ರ ತಂದೆ.

ರಾಜ್ ಕಪೂರ್ ಜನಿಸಿದ್ದು ಅದೇ ಮನೆಯಲ್ಲಿ
ಅದೇ ಮನೆಯಲ್ಲಿ ಪೃಥ್ಚಿರಾಜ್ ಕಪೂರ್ ರ ಮಗ ರಾಜ್ ಕಪೂರ್ 1924ರಲ್ಲಿ ಜನಿಸಿದ್ದರು. ಐದು ಅಂತಸ್ತಿನ ಈ ಮನೆ ದಖಿ ನಲ್ ಬಂದಿ, ಪೇಶಾವರದ ಅತಿ ಎತ್ತರದ ಜಾಗ ಕೆಲ ವರ್ಷಗಳ ಹಿಂದೆ ಕುಸಿದಿದೆ. ಆದರೆ ಈಗಲೂ ಅರವತ್ತು ಕೋಣೆಗಳು ಹಾಗೇ ಉಳಿದಿವೆ. ಭಾರತ-ಪಾಕಿಸ್ತಾನ ವಿಭಜನೆಯ ನಂತರ ಕಪೂರ್ ಕುಟುಂಬದವರು ಪೇಶಾವರ್ ಬಿಟ್ಟು ಭಾರತಕ್ಕೆ ಬಂದರು. ಆ ಮನೆಯ ಒಡೆತನ ಹಲವರ ಕೈ ಬದಲಾಗಿದೆ.

ದಿಲೀಪ್ ಕುಮಾರ್ ರ ಮನೆಯೂ ಅಲ್ಲಿದೆ
ಬಾಲಿವುಡ್ ನ ಮತ್ತೊಬ್ಬ ದಿಗ್ಗಜ ದಿಲೀಪ್ ಕುಮಾರ್ ರ ಪೂರ್ವಜರ ಮನೆ ಕೂಡ ಖಿಸಾ ಖ್ವಾನಿ ಬಜಾರ್ ಹತ್ತಿರದಲ್ಲೇ ಇದೆ. ಆ ಕಟ್ಟಡವನ್ನು ವಶಕ್ಕೆ ಪಡೆದು, ರಾಷ್ಟ್ರೀಯ ಪಾರಂಪರಿಕ ತಾಣವಾಗಿ ಮಾಡಲು ಪಾಕಿಸ್ತಾನದ ಅಧಿಕಾರಿಗಳು ಬಹಳ ಪ್ರಯತ್ನ ಪಟ್ಟರು. ಆದರೆ ಕಾನೂನು ತೊಡಕುಗಳ ಕಾರಣದಿಂದಾಗಿ ಅದು ಸಾಧ್ಯವಾಗಲಿಲ್ಲ.

ಶಾರೂಕ್ ಖಾನ್ ನ ಸಂಬಂಧಿಕರು ಪೇಶಾವರದಲ್ಲಿ ಇದ್ದಾರೆ
ದಿಲೀಪ್ ಕುಮಾರ್ ರ ಮನೆಯು ಖುದಾಬಾದ್ ಮೊಹಲ್ಲಾದ ಡೋಮಾ ಗಲಿಯಲ್ಲಿದೆ. ದಿಲೀಪ್ ಕುಮಾರ್ ಮೂಲ ಹೆಸರು ಮುಹಮ್ಮದ್ ಯುಸೂಫ್ ಖಾನ್. ಅಲ್ಲೇ ಡಿಸೆಂಬರ್ 11, 1922ರಲ್ಲಿ ಜನಿಸಿದರು. ಅವರ ಬಾಲ್ಯದ ಕೆಲ ವರ್ಷಗಳು ಖಿಸಾ ಖ್ವಾನಿ ಬಜಾರ್ ನಲ್ಲಿ ಕಳೆದಿದ್ದರು. ಬಾಲಿವುಡ್ ನಟ ಶಾರುಕ್ ಖಾನ್ ಕೆಲ ಸಂಬಂಧಿಕರು ಈಗಲೂ ಪೇಶಾವರದ ಶಾ ವಲೀ ಕತಾಲ್ ಪ್ರದೇಶದಲ್ಲೇ ಇದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ?












Click it and Unblock the Notifications