ನೇಣುಬಿಗಿದ ಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತನ ಶವ ಪತ್ತೆ
ಕೋಲ್ಕತಾ, ಜೂನ್ 2: ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಬಲರಾಮಪುರ ಎಂಬಲ್ಲಿ ವಿದ್ಯುತ್ ಕಂಬವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತನ ಶವ ಪತ್ತೆಯಾಗಿದೆ.
ಬಿಜೆಪಿ ಆಯೋಜಿಸಿದ್ದ ಥಾಣಾ ಘೆರಾವೊ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾರಣಕ್ಕೆ ಆತನನ್ನು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಹತ್ಯೆ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಆತ್ಮಹತ್ಯೆ ಯತ್ನ ಇನ್ನು ಮುಂದೆ ಅಪರಾಧವಲ್ಲ
ಕಾರ್ಯಕರ್ತನನ್ನು ದುಲಾಲ್ ಕುಮಾರ್ (32) ಎಂದು ಗುರುತಿಸಲಾಗಿದೆ. ಘಟನೆಯ ತನಿಖೆಯ ಹೊಣೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ.
'ಈ ಹೀನ ಕೃತ್ಯವನ್ನು ಬಲವಾಗಿ ಖಂಡಿಸುತ್ತೇವೆ. ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಯಬೇಕು. ಈ ಘೋರ ಕೃತ್ಯ ಎಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಜಾರ್ಖಂಡ್ ಗಡಿಯಲ್ಲಿನ ಪಾತ್ರವೇನು, ಬಜರಂಗ ದಳ, ಮಾವೊವಾದಿಗಳು ಅಥವಾ ಬಿಜೆಪಿ ಭಾಗಿಯಾಗಿರುವ ಸಂಗತಿಗಳಾವುವು. ಇವೆಲ್ಲವುಗಳ ಸತ್ಯ ಹೊರಬರಬೇಕು' ಎಂದು ಟಿಎಂಸಿ ಮುಖಂಡ ಡೆರೆಕ್ ಒಬ್ರಿಯಾನ್ ಹೇಳಿದ್ದಾರೆ.
ಪಶ್ಚಿಮ
ಬಂಗಾಲದಲ್ಲಿ
ಟಿಎಂಸಿ
ಕಾರ್ಯಕರ್ತರಿಂದ
ಬಿಜೆಪಿ
ಕಾರ್ಯಕರ್ತನ
ಹತ್ಯೆ
ನಡೆದಿದೆ
ಎನ್ನಲಾದ
ಆರೋಪ
ಕೇಳಿಬಂದಿರುವುದು
ಇದು
ಎರಡನೆಯ
ಪ್ರಕರಣವಾಗಿದೆ.
Delhi: Members of BJP SC Morcha stage protest against the incident where body of a BJP youth worker was found hanging from a tree in Purulia's Balrampur (West Bengal), yesterday. BJP MP Manoj Tiwari is also at the protest. pic.twitter.com/4jzNAzZMLT
— ANI (@ANI) 1 June 2018
ಮೇ 30ರಂದು ತ್ರಿಲೋಚನ್ ಮಹತೋ (18) ಎಂಬಾತನ ಶವ ಮರವೊಂದಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
18ರ ವಯಸ್ಸಿನಲ್ಲಿಯೇ ಬಿಜೆಪಿಯೊಂದಿಗೆ ರಾಜಕೀಯದಲ್ಲಿ ಗುರುತಿಸಿಕೊಂಡಿರುವುದು ನಿನ್ನ ಜೀವವನ್ನು ಬಲಿ ತೆಗೆದುಕೊಂಡಿದೆ. ಚುನಾವಣೆ ಸಮಯದಿಂದಲೂ ನಿನಗಾಗಿ ಹುಡುಕಾಡುತ್ತಿದ್ದೆ. ಮತ್ತೀಗ ನೀನು ಸತ್ತುಹೋಗಿದ್ದಿ ಎಂದು ಆತನ ದೇಹದ ಹಿಂಭಾಗದಲ್ಲಿ ಅಂಟಿಸಿದ್ದ ಪೋಸ್ಟರ್ನಲ್ಲಿ ಬರೆಯಲಾಗಿತ್ತು.