Annamalai: ಕೊಯಂಬತ್ತೂರು ಕ್ಷೇತ್ರದಿಂದ ಬಿಜೆಪಿಯ ಅಣ್ಣಾಮಲೈ ಸ್ಪರ್ಧೆ
ಕೊಯಂಬತ್ತೂರು, ಮಾರ್ಚ್ 22: ಐಪಿಎಸ್ ಅಧಿಕಾರಿಯಾಗಿ ಪೊಲೀಸ್ ವಲಯದಲ್ಲಿ ಹೆಸರು ಮಾಡಿದ್ದ ಕೆ.ಅಣ್ಣಾಮಲೈ ಅವರು ಬಿಜೆಪಿ ಸೇರಿದ್ದಾರೆ. ತಮಿಳುನಾಡಿನಲ್ಲಿ ನೆಲೆ ಕಾಣಲು ಪರದಾಡುತ್ತಿರುವ ಬಿಜೆಪಿ ಪಾಲಿಗೆ ಅಣ್ಣಾಮಲೈ ವಿಶೇಷ ಎನ್ನಬಹುದು. ತಮಿಳುನಾಡು ರಾಜ್ಯ ಘಟಕದಲ್ಲಿ ತನ್ನ ಅಧ್ಯಕ್ಷರಾಗಿ 2021ರಿಂದ ಕಾರ್ಯನಿರ್ವಹಿಸುತ್ತಿರುವ ಅಣ್ಣಾಮಲೈಗೆ ಬಿಜೆಪಿ ಟಿಕೆಟ್ ಘೋಷಿಸಿದೆ.
ರಾಜ್ಯದ ಕೊಯಂಬತ್ತೂರು ಲೋಕಸಭಾ ಕ್ಷೇತ್ರದಲ್ಲಿ 2024ರ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ಕೆ.ಅಣ್ಣಾಮಲೈ ಕಣಕ್ಕಿಳಿದಿದ್ದಾರೆ. ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು 2019 ರಲ್ಲಿ ಸೇವೆಗೆ ರಾಜೀನಾಮೆ ನೀಡಿದರು.

ನಂತರದ ವರ್ಷ 2020 ರಲ್ಲಿ ಬಿಜೆಪಿ ಸೇರಿದ ಕೆಲವೇ ತಿಂಗಳಲ್ಲಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಲಾಯಿತು. ಈ ಮೂಲಕ ತಮಿಳುನಾಡಲ್ಲಿ ಅಸ್ತಿತ್ವ ಗಟ್ಟಿಗೊಳಿಸಲು ಬಿಜೆಪಿ ಅಂದಿನಿಂದಲೇ ರೂಪರೇಷೆ ಸಿದ್ಧಪಡಿಸಲು ಆರಂಭಿಸಿತು.
ಅಣ್ಣಾಮಲೈ ತಮಿಳುನಾಡಿನ ಬಿಜೆಪಿ ಶಕ್ತಿ
ಸಂಯೋಜಿತ ಯೋಚನೆ, ಆತ್ಮವಿಶ್ವಾಸ ಮತ್ತು ವಾಗ್ಮಿಯು ಆಗಿರುವ ಕೆ.ಅಣ್ಣಾಮಲೈ ಅವರು ಯುವಕರನ್ನು ಆಕರ್ಷಿಸುತ್ತಾರೆ. ತಮಿಳುನಾಡಿನಲ್ಲಿ ಪಕ್ಷದ ಭವಿಷ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಶಕ್ತಿ ಅವರಲ್ಲಿದೆ ಎಂದು ಬಿಜೆಪಿ ನಂಬಿಕೆ ಇಟ್ಟಿದೆ.
ದ್ರಾವಿಡ ಮತ್ತು ತಮಿಳು ರಾಷ್ಟ್ರೀಯತಾವಾದಿ ರಾಜಕೀಯತೆ ಹೊಂದಿರುವ ತಮಿಳುನಾಡಲ್ಲಿ ಬಿಜೆಪಿಯು ಇದುವರೆಗೆ ಹೆಚ್ಚಿನ ಚುನಾವಣಾ ಲಾಭ (ಸೀಟು-ಅಧಿಕಾರ) ಹೊಂದಲು ಸಾಧ್ಯವಾಗಿಲ್ಲ. ಸದ್ಯ ಅಣ್ಣಾಮಲೈ ಅವರಿಂದ ಇಲ್ಲಿ ಪ್ರಾಬಲ್ಯ ಹೊಂದುವ ವಿಶ್ವಾಸ ಬಿಜೆಪಿ ಹೊಂದಿದ್ದು, ಅದಕ್ಕೆ ಈ ಚುನಾವಣೆಯಲ್ಲಿ ಬಹುಶಃ ಉತ್ತರ ಸಿಗುವ ನಿರೀಕ್ಷೆಗಳು ಇವೆ.
ಮತ ಹಂಚಿಕೆ ನೀರ್ಣಾಯಕ
ತಜ್ಞರು ತಮಿಳುನಾಡು ರಾಜ್ಯದಲ್ಲಿ ಸುಮಾರು ಶೇಕಡಾ 40 ರಷ್ಟು ಟ್ಯಾಪ್ ಮಾಡದ ಮತ ಹಂಚಿಕೆಯನ್ನು ಸೂಚಿಸದರೆ, ಅದನ್ನು ಬಿಜೆಪಿ ಟ್ಯಾಪ್ ಮಾಡಲು ಯತ್ನಿಸುತ್ತದೆ. ಏಕೆಂದರೆ ತಳುನಾಡಿನಲ್ಲಿ ನಾಯಕತ್ವ ಜೊತೆಗೆ ಮತ ಹಂಚಿಕೆಯು ಅಧಿಕಾರ ಹಿಡಿಯ ನೀರ್ಣಾಯಕವಾಗಿದೆ.

ತಮಿಳುನಾಡಿನ ಭವಿಷ್ಯ ಯಾರ ಕೈಗೆ?
ಡಿಎಂಕೆ ಮತ್ತು ಎಐಎಡಿಎಂಕೆಯನ್ನು ಮೀರಿ ಶೇಕಡಾ 40 ರಷ್ಟು ಟ್ಯಾಪ್ ಮಾಡದ ಮತ ಹಂಚಿಕೆ ಇದೆ. ಅನೇಕ ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ ಮತದಾರರನ್ನು ಪರಿಪೂರ್ಣವಾಗಿ ಆಕರ್ಷಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಇಲ್ಲಿನ ರಾಜಕೀಯ ಕುರಿತು ದಳಪತಿ ವಿಜಯ್ ಅವರ ರಾಜಕೀಯ ಸದಸ್ಯರೊಬ್ಬರು ಇತ್ತೀಚೆಗೆ ತಿಳಿಸಿದ್ದರು.
ತಮಿಳುನಾಡು ರಾಜ್ಯ ರಾಜಕೀಯವು ಭವಿಷ್ಯದಲ್ಲಿ ದಳಪತಿ ವಿಜಯ್, ಬಿಜೆಪಿಯ ಅಣ್ಣಾಮಲೈ ಮತ್ತು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರ ಕೈ ಸೇರಬಹುದು ಎಂದು ರಾಜಕೀಯ ವಿಶ್ಲೇಷಕರು ವಿಶ್ಲೇಷಣೆ ಮಾಡಿದ್ದಾರೆ.
ಬಿಜೆಪಿಯ ಕೊಯಂಬತ್ತೂರು ಸಂಪರ್ಕ
ಬಿಜೆಪಿಯು ಸಂಕೀರ್ಣ ಸಂಬಂಧ ಹೊಂದಿರುವ ಕೊಯಂಬತ್ತೂರಿಂದ ಅಣ್ಣಾಮಲೈ ಅವರನ್ನು ಕಣಕ್ಕಿಳಿಸಿರುವುದು ವಿಶೇಷವಾಗಿದೆ. ಸಾಂಪ್ರದಾಯಿಕ ಎಡ ಭದ್ರಕೋಟೆಯಾಗಿದೆ. ಹೀಗಾಗಿ ಇಲ್ಲಿ ಬಿಜೆಪಿ ಸಂಬಂಧ ಹೇಳಿಕೊಳ್ಳುವಷ್ಟರ ಮಟ್ಟಿಗೆ ಇಲ್ಲ ಎನ್ನಲಾಗಿದೆ.
ಕೊಯಂಬತ್ತೂರಲ್ಲಿ ಡಿಎಂಕೆ 1996 ರಲ್ಲಿ ಸ್ಥಾನವನ್ನು ಕೊನೆಯದಾಗಿ ಗೆದ್ದಿತ್ತು. ಮಾಜಿ ಎಐಎಡಿಎಂಕೆ ನಾಯಕ ಮತ್ತು ಕೊಯಂಬತ್ತೂರು ಮೇಯರ್ ಗಣಪತಿ ರಾಜ್ಕುಮಾರ್ ಅವರನ್ನು ಸ್ಥಾನಕ್ಕೆ ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿತು.
ಬಿಜೆಪಿ ಶಾಸಕರನ್ನು ಲೋಕಸಭೆಗೆ ಕಳುಹಿಸಿದ ತಮಿಳುನಾಡು ಕ್ಷೇತ್ರಗಳಲ್ಲಿ ಕೊಯಮತ್ತೂರು ಮೊದಲ ಕ್ಷೇತ್ರವಾಗಿದೆ. 1998ರ ನಂತರ ತಮಿಳುನಾಡಿನಲ್ಲಿ ಬಿಜೆಪಿಯ ಋಣಾತ್ಮಕ ಅಧ್ಯಾಯ ಆರಂಭವಾಯಿತು. 1992 ರಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸದಲ್ಲಿ ಎಲ್ಕೆ ಅಡ್ವಾಣಿ ಅವರ ಪಾತ್ರದ ಹಿನ್ನೆಲೆಯಲ್ಲಿ ಅವರು ಪ್ರತೀಕಾರಕ್ಕೆ ಗುರಿಯಾದರು. ದಾಪುಗಾಲು ಇಡುತ್ತಿದ್ದ ಬಿಜೆಪಿಗೆ ಹಿನ್ನಡೆ ಆಯಿತು.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ..












Click it and Unblock the Notifications