Parliament: ಮೇಧಾ ಪಾಟ್ಕರ್, ಪ್ರಕಾಶ್ ರಾಜ್ ಉಪಸ್ಥಿತಿಗೆ ಭಾರೀ ವಿರೋಧ: ಸಭೆಯಿಂದ ಹೊರನಡೆದ ಬಿಜೆಪಿ ಸಂಸದರು
ದೆಹಲಿ, ಜುಲೈ 03: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸ್ಥಾಯಿ ಸಮಿತಿಯ ಸಭೆ ಕಾಂಗ್ರೆಸ್ ಸಂಸದ ಸಪ್ತಗಿರಿ ಶಂಕರ್ ಉಲಕ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಗೆ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಮತ್ತು ನಟ-ಕಾರ್ಯಕರ್ತ ಪ್ರಕಾಶ್ ರಾಜ್ ಅವರ ಭಾಗವಹಿಸುವಿಕೆಯ ವಿಷಯ ಸಭೆಯನ್ನು ವಿವಾದಾತ್ಮಕವಾಗಿಸಿತು. ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಮತ್ತು ನಟ-ಕಾರ್ಯಕರ್ತ ಪ್ರಕಾಶ್ ರಾಜ್ ಅವರ ಉಪಸ್ಥಿತಿಯನ್ನು ವಿರೋಧಿಸಿ ಬಿಜೆಪಿ ಮತ್ತು ವಿರೋಧ ಪಕ್ಷದ ನಡುವೆ ರಾಜಕೀಯ ವಾಗ್ವಾದ ಭುಗಿಲೆದ್ದಿತು. ಈ ವೇಳೆ ಬಿಜೆಪಿ ಸಂಸದರು ವಿರೋಧಿಸಿ ಸಭೆಯಿಂದ ಹೊರನಡೆದರು.
ಭೂ ಸಂಪನ್ಮೂಲ ಇಲಾಖೆ ಮತ್ತು ಪಂಚಾಯತ್ ರಾಜ್ ಸಚಿವಾಲಯದ ಕ್ರಮಗಳ ಕುರಿತ ಕರಡು ವರದಿಗಳ ಪರಿಗಣನೆ ಮತ್ತು 2013ರ ಭೂಸ್ವಾಧೀನ, ಪುನರ್ವಸತಿ ಮತ್ತು ಪಾರದರ್ಶಕತೆ ಕಾಯ್ದೆಯ ಅನುಷ್ಠಾನದ ಸಾಕ್ಷ್ಯ ಸಂಗ್ರಹಣೆ ಸಭೆಯನ್ನು ಕರೆಯಲಾಗಿತ್ತು,. ಈ ವೇಳೆ ಮೇಧಾ ಪಾಟ್ಕರ್, ಪ್ರಕಾಶ್ ರಾಜ್ ಉಪಸ್ಥಿತಿಗೆ ವಿರೋಧ ವ್ಯಕ್ತವಾದ ಹಿನ್ನೆಲೆ ಈ ಸಭೆಯನ್ನು ಅಂತಿಮವಾಗಿ ರದ್ದುಗೊಳಿಸಲಾಯಿತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸ್ಥಾಯಿ ಸಮಿತಿಯ ಸಭೆಗೆ ಆಹ್ವಾನಿತರ ಪಟ್ಟಿಯಲ್ಲಿ ಮೇಧಾ ಪಾಟ್ಕರ್ ಮತ್ತು ಪ್ರಕಾಶ್ ರಾಜ್ ಅವರ ಹೆಸರುಗಳು ಇದ್ದವು ಎಂಬುದು ಬಿಜೆಪಿ ಸದಸ್ಯರಿಗೆ ಮುಂಚಿತವಾಗಿ ತಿಳಿಸಲಾಗಿರಲಿಲ್ಲ. ಇದರಿಂದ ಕೋಪಗೊಂಡ ಬಿಜೆಪಿ ಸಂಸದರು, ಈ ಆಹ್ವಾನವು ರಾಜಕೀಯ ಪ್ರೇರಿತವೆಂದು ಆರೋಪಿಸಿ ತೀವ್ರ ವಿರೋಧ ವ್ಯಕ್ತಪಡಿಸಿದರು.

ಸಂಸದೀಯ ಸಮಿತಿಯ 29 ಸದಸ್ಯರಲ್ಲಿ ಮಂಗಳವಾರ 14 ಮಂದಿ ಹಾಜರಿದ್ದರು ಮತ್ತು ಬಿಜೆಪಿ ನೇತೃತ್ವದ ಎನ್ಡಿಎಯ ಎಂಟು ಸಂಸದರು ಬಹಿಷ್ಕರಿಸಿದ್ದರಿಂದ, ಕೋರಂ ಇಲ್ಲದ ಕಾರಣ ಉಲಕ ಸಭೆಯನ್ನು ರದ್ದುಗೊಳಿಸಬೇಕಾಯಿತು. ತಮ್ಮ ಪಕ್ಷದ ಸಂಸದರ ಹೊರತಾಗಿ, ಮಿತ್ರಪಕ್ಷ ಜನತಾದಳ (ಜಾತ್ಯತೀತ) ನಾಯಕ ಮತ್ತು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು ಅವರನ್ನು ಹಿಂಬಾಲಿಸಿದರು ಎಂದು ಬಿಜೆಪಿ ಮೂಲಗಳು ತಿಳಿಸಿವೆ. ದೇವೇಗೌಡರು ಸಭೆಯನ್ನು ಬಹಿಷ್ಕರಿಸಲಿಲ್ಲ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಪ್ರಕಾಶ್ ರಾಜ್ ಸಭೆಯ ಹೊರಗೆ ಏಕೆ ಇದ್ದರು ಎಂಬುದಕ್ಕೆ ಸ್ಪಷ್ಟತೆ ಇರಲಿಲ್ಲ, ಏಕೆಂದರೆ ಅವರ ಹೆಸರು ಯಾವುದೇ ಅಧಿಕೃತ ಪಟ್ಟಿಯಲ್ಲಿ ಇರಲಿಲ್ಲ.ಅಧ್ಯಕ್ಷರು ಲೋಕಸಭಾ ಸ್ಪೀಕರ್ರಿಂದ ಆಹ್ವಾನಕ್ಕೆ ಅನುಮತಿ ಪಡೆದಿರುವುದಾಗಿ ತಿಳಿಸಿದಾಗ, ಬಿಜೆಪಿ ಸದಸ್ಯರು ಈ ಹಕ್ಕನ್ನು ಪ್ರಶ್ನಿಸಿದರು. ಕಾಂಗ್ರೆಸ್ ಸಂಸದರಾದ ಮೊಹಮ್ಮದ್ ಜಾವೇದ್ ಮತ್ತು ಇಮ್ರಾನ್ ಮಸೂದ್, ವೈವಿಧ್ಯಮಯ ಧ್ವನಿಗಳನ್ನು ಸೇರಿಸಿಕೊಳ್ಳುವುದನ್ನು ಸಮರ್ಥಿಸಿಕೊಂಡರು, ಆದರೆ ಬಿಜೆಪಿ ರಾಜಕೀಯಗೊಳಿಸುತ್ತಿದೆ ಎಂದು ಆರೋಪಿಸಿದರು.
ರಾಷ್ಟ್ರವಿರೋಧಿಗಳನ್ನು ಆಹ್ವಾನಿಸಿದ್ದಕ್ಕಾಗಿ ಉಲಕಾ ಅವರನ್ನು ಬಿಜೆಪಿ ಸಂಸದರು ಪ್ರಶ್ನಿಸಿದ್ದಾರೆಂದು ತಿಳಿದುಬಂದಿದೆ. ಪಾಟ್ಕರ್ ಮತ್ತು ಪ್ರಕಾಶ್ ರಾಜ್ರಂತಹ ಜನರನ್ನು ಸಂಸದೀಯ ಸಮಿತಿಯ ಮುಂದೆ ಹೇಳಿಕೆ ನೀಡಲು ಆಹ್ವಾನಿಸಿದ್ದರೆ, ಮುಂದಿನ ಬಾರಿ ಅವರು ಪಾಕಿಸ್ತಾನದ ಪ್ರಧಾನಿಯನ್ನು ಆಹ್ವಾನಿಸಬಹುದು ಎಂದು ಬಿಜೆಪಿ ಸಂಸದರೊಬ್ಬರು ಹೇಳಿದ್ದಾರೆಂದು ತಿಳಿದುಬಂದಿದೆ. ನಗರ ನಕ್ಸಲರನ್ನು ಸಂಸತ್ತಿಗೆ ಆಹ್ವಾನಿಸಲಾಗುತ್ತಿದೆ ಎಂದು ಮತ್ತೊಬ್ಬ ಬಿಜೆಪಿ ಸಂಸದರು ದೂರು ನೀಡಿದ್ದಾರೆ ಎಂದು ಹೇಳಲಾಗಿದೆ.
ಸಾಕ್ಷಿಗಳಾಗಿ ಯಾರು ಬರುತ್ತಿದ್ದಾರೆ ಎಂಬುದರ ಬಗ್ಗೆ ನಮಗೆ ಮಾಹಿತಿ ಇಲ್ಲದ ಕಾರಣ ನಾವು ಸಭೆಯನ್ನು ಬಹಿಷ್ಕರಿಸಿದೆವು. ನಾವು ಒಳಗೆ ಹೋಗಿ ಮೇಧಾ ಪಾಟ್ಕರ್ ಅಲ್ಲಿ ಕುಳಿತಿರುವುದನ್ನು ನೋಡಿದೆವು. ಈ ಜನರ ಪಟ್ಟಿ ಮತ್ತು ಅವರು ಯಾವ ಎನ್ಜಿಒಗೆ ಸೇರಿದವರು ಎಂಬುದನ್ನು ನಮಗೆ ನೀಡಬೇಕಿತ್ತು. ಅಧ್ಯಕ್ಷರು ಅಂತಹ ಮಾಹಿತಿಯನ್ನು ನಮ್ಮಿಂದ ಯಾಕೆ ಮುಚ್ಚಿಡಬೇಕಿತ್ತು ಎಂದು ಬಿಜೆಪಿ ಸಂಸದ ಸಂಜಯ್ ಜೈಸ್ವಾಲ್ ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications