Kangana Ranaut: ಬಿಜೆಪಿ - ಕಾಂಗ್ರೆಸ್ ರಾಜಕೀಯ "ಗೆಳತನದ ಗುಟ್ಟುರಟ್ಟು" ಮಾಡಿದ ಬಿಜೆಪಿ ಸಂಸದೆ ಕಂಗನಾ ರಣಾವತ್!
ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಬಾಲಿವುಡ್ನ ಹಲವು ವಿಷಯಗಳನ್ನು ತೆರೆದಿಟ್ಟಿದ್ದರು. ಇದೀಗ ಅವರು ರಾಜಕೀಯದಲ್ಲಿನ ಹುಳುಕು ಹಾಗೂ ರಹಸ್ಯಗಳನ್ನು ತೆರೆದಿಡುತ್ತಿದ್ದಾರೆ. ಕಂಗನಾ ರಣಾವತ್ ಅವರ ಮಾತುಗಳು ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಕಂಗನಾ ವಿವಾದಗಳಿಂದ ಸುದ್ದಿಯಾಗಿದ್ದೇ ಹೆಚ್ಚು. ಕಂಗನಾ ಅವರ ನೇರವಾಗಿ ಹೇಳುವ ಹಲವು ಮಾತುಗಳು ಟ್ರೋಲ್ ಹಾಗೂ ಚರ್ಚೆಗೆ ಕಾರಣವಾಗಿದೆ.
ಅದೇ ರೀತಿ ಇದೀಗ ಕಂಗನಾ ಅವರು ರಾಜಕೀಯದಲ್ಲಿ ಫ್ರೆಂಡ್ಶಿಫ್ ಬಗ್ಗೆ ಮಾತನಾಡಿದ್ದಾರೆ. ರಾಜ್ ಶಮಾನಿ ಕ್ಲಿಪ್ಸ್ ಪಾಡ್ಕಾಸ್ಟ್ನಲ್ಲಿ ಅವರು ಮಾತನಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ನೀವು ಬಾಲಿವುಡ್ನಲ್ಲಿ ಫ್ರೆಂಡ್ಸ್ ಆಗೋದಕ್ಕೆ ಆಗಲ್ಲ ಅಂತ ಹೇಳಿದ್ದೀರಿ. ಹಾಗಾದರೆ ರಾಜಕೀಯದಲ್ಲಿ ಫ್ರೆಂಡ್ಶಿಫ್ ಯಾವ ರೀತಿ ಇರುತ್ತೆ ಎನ್ನುವ ಬಗ್ಗೆ ಕಂಗನಾ ಮಜವಾದ ಉತ್ತರವನ್ನೇ ಕೊಟ್ಟಿದ್ದಾರೆ.

ಬಾಲಿವುಡ್ನಲ್ಲಿ ಕಂಗನಾ ಹವಾ ಸೃಷ್ಟಿ ಮಾಡಿದ್ದರು. ಒಂದಷ್ಟು ವಿವಾದವನ್ನೂ ಸೃಷ್ಟಿ ಮಾಡಿದ್ದರು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ. ಲೋಕಸಭೆ ಪ್ರವೇಶ ಮಾಡಿದ್ದಾರೆ. ಸಿನಿಮಾದಿಂದ ರಾಜಕೀಯ ಪ್ರವೇಶ ಮಾಡಿರುವ ಅವರು ರಾಜಕೀಯದಲ್ಲೂ ಒಳ್ಳೆಯ ಹವಾ ಸೃಷ್ಟಿ ಮಾಡಿದ್ದಾರೆ.
ಕಂಗನಾ ರಾಜಕೀಯವಾಗಿ ನೀಡುತ್ತಿರುವ ಹೇಳಿಕೆಗಳು ಹಾಗೂ ಪ್ರಸ್ತಾಪಿಸುತ್ತಿರುವ ವಿಷಯಗಳು ದೇಶದಾದ್ಯಂತ ಚರ್ಚೆಯಾಗುತ್ತಿವೆ. ಈಚೆಗೆ ಅವರು ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಅವರ ಕೇಸ್ನ ಬಗ್ಗೆ ಮಾತನಾಡಿದ್ದು. ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಅವರು ರಾಜಕೀಯದ ಒಳಗುಟ್ಟುಗಳನ್ನು ರಟ್ಟು ಮಾಡುತ್ತಿದ್ದು. ಇದು ಬಿಜೆಪಿ ಹಾಗೂ ಕಾಂಗ್ರೆಸ್ಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಹೌದು ಅದು ಯಾಕೆ ಎನ್ನುವ ವಿವರ ಇಲ್ಲಿದೆ.

ಸಂಸತ್ನಲ್ಲಿ ಭಾರೀ ಗದ್ದಲವಿರುತ್ತೆ. ಬೇಡಿಕೆಗಳ ಸುರಿಮಳೆಯನ್ನೇ ಸುರಿಸಲಾಗುತ್ತೆ. ಸಂಸದರು ಅವರವರ ಲೋಕಸಭಾ ಕ್ಷೇತ್ರದಲ್ಲಿ ಏನಾಗಬೇಕು ಹಾಗೂ ಏನಾಗುತ್ತಿದೆ ಎನ್ನುವ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿರುತ್ತಾರೆ. ಸಿಕ್ಕಾಪಟ್ಟೆ ಡಿಮ್ಯಾಂಡ್, ಬೈಗುಳ ಹಾಗೂ ಕಿರುಚಾಟ ಸಿಕ್ಕಾಪಟ್ಟೆ ಜೋರಾಗಿಯೇ ಇರುತ್ತದೆ. ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ವಾಕ್ಸಮರ ಇರುತ್ತೆ. ಒಂದು ಸಲ ನೀವು ಸಂಸತ್ನಿಂದ ಹೊರಗೆ ಬಂದರೆ ಅಂದರೆ ಸಂಸತ್ನ ಹಾಲ್ನಿಂದ ಹೊರಗೆ ಬಂದ ಕೂಡಲೇ ಕ್ಯಾಂಟೀನ್ನಲ್ಲಿ ಇಡೀ ಸೀನ್ ಪೂರ್ತಿ ಚೇಂಜ್ ಆಗಿ ಬಿಡುತ್ತೆ ಅಂತ ಕಂಗನಾ ಹೇಳಿದ್ದಾರೆ.
ಆಡಳಿತ - ಪ್ರತಿಪಕ್ಷ ಅಂತ ನೋಡದೆ ಎಲ್ಲಾ ಸಂಸದರು ನಗ್ತಾ ಇರ್ತಾರೆ. ಎಲ್ಲರೂ ಸೇರಿ ಊಟ ಮಾಡೋದು, ಕಾಫಿ - ಟೀ ಕುಡಿಯೋದು ಇಲ್ಲ ತಿಂಡಿ ತಿನ್ನೋದು ಮಾಡ್ತಿರ್ತಾರೆ. ಎಲ್ಲರೂ ಅಲ್ಲಿ ಗೆಳಯರೇ ಅಂತ ಹೇಳಿದ್ದಾರೆ. ಹಿರಿಯ ನಾಯಕರು ಕ್ಯಾಂಟೀನ್ನಲ್ಲಿ ಕಾಣಿಸಿಕೊಳ್ಳಲ್ಲ. ಆದರೆ ಉಳಿದಂತೆ ಎಲ್ಲರೂ ಚಿಲ್ಡ್ (ಕೂಲ್) ಆಗಿರುತ್ತಾರೆ.

ಫೋಟೋಗಳಲ್ಲಿ ಬೇಕಾದರೆ ನೋಡಿ ಅಂತ ಕಂಗನಾ ಹೇಳಿದ್ದಾರೆ. ವಿವಿಧ ಪಕ್ಷಗಳು ಸಹ ಆಹ್ವಾನ ಮಾಡುತ್ತಾರೆ. ಸಂಸತ್ನಲ್ಲಿ ಇಬ್ಬರು ರಾಜಕೀಯ ನಾಯಕರು ಗಂಟಲು ಕಿರುಚಿಕೊಂಡು, ಕಣ್ಣು ಮುಖವನ್ನೆಲ್ಲ ಕೆಂಪಗೆ ಮಾಡಿಕೊಂಡು ಕಿರುಚುತ್ತಿರುತ್ತಾರೆ. ಅವರೇ ಹೊರಗೆ ಬಂದು ನೋಡಿದರೆ ಗಹಗಹಿಸಿ ನಗ್ತಾ ಇರ್ತಾರೆ ಅಂತ ಕಂಗನಾ ನಗುತ್ತಲ್ಲೇ ಹೇಳಿದ್ದಾರೆ.
ರಾಜಕೀಯದಲ್ಲಿ ಎಲ್ಲರೂ ಗೆಳಯರೇ. ಅಲ್ಲದೆ ಅಲ್ಲಿ ಪಕ್ಷದಿಂದ ಪಕ್ಷಕ್ಕೆ ಬದಲಾದವರು ಈ ಹಿಂದೆ ಗೆಳಯರಾಗಿದ್ದವರು ಎಲ್ಲರೂ ಇದ್ದಾರೆ. ಜನರಿಗೆ ಒಳ್ಳೆಯದನ್ನು ಮಾಡಬೇಕು ಎನ್ನುವುದು ಪ್ರತಿ ಸಂಸದರ ಆಸೆಯಾಗಿದೆ ಎನ್ನುವುದಂತೂ ನಿಜ ಅಂತ ಹೇಳಿದ್ದಾರೆ.
-
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ












Click it and Unblock the Notifications