ಅಲ್ವಾರ್ ಬಿಜೆಪಿ ಸಂಸದರ ನಿಧನಕ್ಕೆ ಮೋದಿ ಸಂತಾಪ
ನವದೆಹಲಿ, ಸೆಪ್ಟೆಂಬರ್ 17: ರಾಜಸ್ಥಾನದ ಅಲ್ವಾರ್ ನ ಹಾಲಿ ಬಿಜೆಪಿ ಸಂಸದ ಮಹಂತ್ ಚಂದನಾಥ್ ಇಂದು ಬೆಳಿಗ್ಗೆ ದೆಹಲಿಯ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು.
ಮಹಂತ್ ಚಂದನಾಥ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಸಂಸದರ ನಿಧನಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, "ತಮ್ಮ ಶ್ರೀಮಂತ ಸಾಮಾಜಿಕ ಕಾರ್ಯಗಳಿಂದ ಮಹಾಂತ್ ಚಂದನಾಥ್ ಯಾವತ್ತೂ ನೆನಪಿನಲ್ಲಿ ಉಳಿಯುತ್ತಾರೆ. ಅವರ ನಿಧನಕ್ಕೆ ತೀವ್ರ ಸಂತಾಪಗಳು," ಎಂದು ಟ್ವೀಟ್ ಮಾಡಿದ್ದಾರೆ.
Saddened by the demise of LS MP from Alwar, Mahant Chand Nath ji. He will be remembered for his rich social work. My deepest condolences: PM
— PMO India (@PMOIndia) September 17, 2017
ಇನ್ನು ಇದೇ ವರ್ಷದ ಆರಂಭದಲ್ಲಿ ಮಹಾಂತ್ ಚಂದನಾಥ್ ಒಂದು ವರ್ಷದ ಜೈಲು ಶಿಕ್ಷೆಗೆ ಗುರಿಯಾಗದ್ದರು. ಭೂ ಹಗಣವೊಂದರಲ್ಲಿ ಚಂದನಾಥ್ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿತ್ತು.

2014ರಲ್ಲಿ ಅಲ್ವರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಮಾಜಿ ಸಚಿವ ಜಿತೇಂದ್ರ ಸಿಂಗ್ ಅವರನ್ನು ಸೋಲಿಸಿ ಚಂದನಾಥ್ ಸಂಸತ್ ಪ್ರವೇಶಿಸಿದ್ದರು.












Click it and Unblock the Notifications