ಅಣ್ಣಾಮಲೈ ನೇತೃತ್ವದಲ್ಲಿ ಮಹಿಳೆಯರು ಸುರಕ್ಷಿತವಲ್ಲ: ಬಿಜೆಪಿ ನಾಯಕಿ
ಚೆನ್ನೈ, ಜನವರಿ 3: ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡು ಬಿಜೆಪಿಯ ರಾಜ್ಯಾಧ್ಯಕ್ಷ ಅಣ್ಣಾಮಲೈ ನಾಯಕತ್ವದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ. ಮಹಿಳೆಯರಿಗೆ ಗೌರವದ ಕೊರತೆಯಿಂದಾಗಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ರಾಜೀನಾಮೆ ನೀಡುವುದಾಗಿ ತಮಿಳುನಾಡಿನ ನಟಿ ಮತ್ತು ನೃತ್ಯ ಸಂಯೋಜಕಿ ಗಾಯತ್ರಿ ರಘುರಾಮ್ ಅವರು ತಿಳಿಸಿದ್ದಾರೆ.
ನಿಜವಾದ ಕಾರ್ಯಕರ್ತರ ಬಗ್ಗೆ ಯಾರೂ ಕಾಳಜಿ ವಹಿಸುವುದಿಲ್ಲ ಎಂದು ಹೇಳಿಕೊಂಡ ಗಾಯತ್ರಿ ಅವರು, ನಾನು ಇನ್ನೂ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನಿಷ್ಠೆ ಹೊಂದಿರುತ್ತೇನೆ. ತನ್ನ ರಾಜೀನಾಮೆಯ ಹಿಂದಿನ ಕಾರಣ ಅಣ್ಣಾಮಲೈ ಎಂದು ಸೇರಿಸಿದ ಅವರು, ಅಣ್ಣಮಲೈ ಅವರನ್ನು ಸುಳ್ಳುಗಾರ ಮತ್ತು ಅಧಾರ್ಮಿಕ ನಾಯಕ ಎಂದು ಆರೋಪಿಸಿದ್ದಾರೆ.
ಅಣ್ಣಾಮಲೈ ನಾಯಕತ್ವದಲ್ಲಿ ಮುಂದುವರಿಯಲು ಸಾಧ್ಯವಿಲ್ಲ, ಅವರಿಂದ ಸಾಮಾಜಿಕ ನ್ಯಾಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದ ಅವರು, ತಮ್ಮ ಟ್ವಿಟ್ಟರ್ನಲ್ಲಿ ಗಾಯತ್ರಿ ಅವರು ತಮ್ಮ ಸಹ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಹೇಳಿದ್ದಾರೆ. ಅವರ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವವನ್ನು ಹಂಚಿಕೊಂಡಿದ್ದೇನೆ ಎಂದು ಹೇಳಿದರು.

ಪಕ್ಷದ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಗಾಯತ್ರಿ, ಮಹಿಳೆಯರು ತಮ್ಮನ್ನು ಯಾರಾದರೂ ಉಳಿಸುತ್ತಾರೆ ಎಂದು ನಂಬಬಾರದು ಮತ್ತು ಗೌರವವಿಲ್ಲದ ಸ್ಥಳಗಳಲ್ಲಿ ಉಳಿಯಬಾರದು ಎಂದು ಹೇಳಿದರು. ಗಾಯತ್ರಿ ಅವರು ಅಣ್ಣಾಮಲೈ ವಿರುದ್ಧ ಪೊಲೀಸ್ ದೂರು ನೀಡಲು ಸಿದ್ಧರಿರುವುದಾಗಿ ಅವರನ್ನು ತನಿಖೆ ಮಾಡಬೇಕಾಗಿದೆ ಎಂದು ಹೇಳಿದರು.
ಆದರೆ ರಾಜಕಾರಣಿಯಾಗಿ ಪರಿವರ್ತಿತಳಾದ ನಟಿ ತಾನು ಆಡಿಯೋ ಕ್ಲಿಪ್ಗಳು ಮತ್ತು ವಿಡಿಯೋಗಳನ್ನು ಪೊಲೀಸರಿಗೆ ನೀಡುವುದಾಗಿ ಹೇಳಿದ್ದರೂ ಅವು ಏನೆಂಬುದನ್ನು ನಮೂದಿಸಿಲ್ಲ. ನವೆಂಬರ್ 23ರಂದು ಅಣ್ಣಾಮಲೈ ಅವರು ಗಾಯತ್ರಿ ಅವರನ್ನು ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ಆರು ತಿಂಗಳ ಕಾಲ ಅಮಾನತುಗೊಳಿಸಿದ್ದರು. ಪಕ್ಷಕ್ಕೆ ಕಳಂಕ ತರುವ ಚಟುವಟಿಕೆಗಳಲ್ಲಿ ಅವರು ತೊಡಗಿದ್ದರು ಎಂಬ ಗಾಯಿತ್ರಿ ಅವರ ಮೇಲೆ ಆರೋಪ ಇತ್ತು. ಆದರೆ ಗಾಯತ್ರಿ ಅವರು ಬಿಜೆಪಿಯ ವಿರೋಧಿಯಲ್ಲ ಮತ್ತು ಅಮಾನತುಗೊಂಡಿದ್ದರೂ ದೇಶಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸುವುದಾಗಿ ಹೇಳಿದರು.

ತಮಿಳುನಾಡು ಬಿಜೆಪಿಯ ಗುಪ್ತಚರ ವಿಭಾಗದ ಉಪಾಧ್ಯಕ್ಷ ಸೆಲ್ವಕುಮಾರ್ ತನ್ನನ್ನು ಟ್ವಿಟರ್ನಲ್ಲಿ ಟ್ರೋಲ್ ಮಾಡುತ್ತಿದ್ದಾರೆ ಮತ್ತು ಅವರ ಸಂದೇಶಗಳಿಗೆ ಮರುಪ್ರಶ್ನೆ ನೀಡಿದ ಕಾರಣ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಗಾಯತ್ರಿ ಆರೋಪಿಸಿದ್ದಾರೆ.












Click it and Unblock the Notifications