ರೇಪ್ ಅಂದ್ರೆ ಏನು ಗೊತ್ತಾ ಅಂತ ಹುಡ್ಗೀರನ್ನು ಕೇಳಿದ ಎಂಎಲ್ಎ !!
ಪಾಟ್ನಾ, ಜ. 11: "ಒಂದು ಹುಡುಗಿ ಅತ್ಯಾಚಾರಕ್ಕೊಳಗಾಗಿದ್ದಾಳೆ ಅಂತ ಹೇಗೆ ಹೇಳ್ತೀರಿ? ಅಸಲಿಗೆ ರೇಪ್ ಅಂದ್ರೆ ಏನು ಗೊತ್ತಾ? ಹಾಗಾದಾಗ ರಕ್ತ ಎಲ್ಲಿಂದ ಬರುತ್ತೆ ಹೇಳಿ ನೋಡೋಣ?'' ಇಂಥ ಪ್ರಶ್ನೆಗಳನ್ನು ಜನಪ್ರತಿನಿಧಿಯೊಬ್ಬರು ಕಾಲೇಜು ಹುಡುಗಿಯನ್ನು ಕೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಅಂದಹಾಗೆ, ಇವರು ಬಿಹಾರದ ರೋಹ್ಟಾಸ್ ಜಿಲ್ಲೆಯ ಚೆನಾರಿ ಎಂಬ ತಾಲೂಕಿನ ಶಾಸಕರು. ಹೆಸರು ಲಲನ್ ಪಾಸ್ವಾನ್. ರಾಷ್ಟ್ರೀಯ ಲೋಕ ಸಮತಾ ಪಾರ್ಟಿಯ (ಆರ್ ಎಲ್ ಎಸ್ ಪಿ) ನಾಯಕರೂ ಆಗಿದ್ದಾರೆ.

ಬುಧವಾರ ಬಿಹಾರದ ವೈಶಾಲಿ ಜಿಲ್ಲೆಯಲ್ಲಿರುವ ದಲಿತ ಬಾಲಕಿಯರ ವಸತಿ ಶಾಲೆಗೆ ಭೇಟಿ ನೀಡಿದ್ದ ಇವರು, ಹಾಸ್ಟೆಲ್ ನಲ್ಲಿರುವ 11ನೇ ತರಗತಿಯಲ್ಲಿ ಓದುತ್ತಿರುವ ಹುಡುಗಿಯರ ಬಳಿ ಇಂಥ ಪ್ರಶ್ನೆಗಳನ್ನು ಕೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ಜ. 8ರಂದು ಬೆಳಗ್ಗೆ ಅದೇ ಹಾಸ್ಟೆಲ್ ನಲ್ಲಿ ಓದುತ್ತಿದ್ದ ಬಾಲಕಿಯರ ಶವ, ಹಾಸ್ಟೆಲ್ ನಿಂದ ತುಸು ದೂರ ಪತ್ತೆಯಾಗಿತ್ತು. ರಕ್ತ ಸಿಕ್ತವಾಗಿ, ಬಟ್ಟೆ ಹರಿದಿದ್ದರಿಂದಾಗಿ ಅದು ಅತ್ಯಾಚಾರವೆಂದೇ ಭಾಸವಾಗುವಂತಿತ್ತು.
ಪ್ರಕರಣದ ಹಿನ್ನೆಲೆಯಲ್ಲೇ ಹಾಸ್ಟೆಲ್ ಗೆ ಎಂಎಲ್ ಎ ಮಹಾಶಯರು ಭೇಟಿ ನೀಡಿದ್ದು. ಹಾಸ್ಟೆಲ್ ನ ಭದ್ರತೆ ಪರಿಶೀಲಿಸಲು ಬಂದಿರುವುದಾಗಿ ತಿಳಿಸಿದ್ದ ಎಂಎಲ್ ಎ ಸಾಹೇಬ್ರು, ಅಲ್ಲಿನ ಹುಡುಗಿಯರ ಬಳಿ ಪ್ರಕರಣದ ತನಿಖೆಯನ್ನೇ ಶುರು ಮಾಡಿದ್ದಾರೆ.
ಮೊದಲೇ ಭೀತಿಗೊಳಗಾಗಿದ್ದ ಹುಡುಗಿಯರ ಬಳಿಗೆ ತೆರಳಿ, ರೇಪ್ ಅಂದ್ರೆ ಏನು ಗೊತ್ತಾ... ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಅವರನ್ನು ಮುಜುಗರಕ್ಕೊಳಪಡಿಸಿರುವುದು ವಿವಾದವೆಬ್ಬಿಸಿದೆ.
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications