Get Updates
Get notified of breaking news, exclusive insights, and must-see stories!

ಬೆಂಗಳೂರಿನ ಕ್ಯಾಪ್ಟನ್ ಹೇಳಿದಂತೆ ಕೇಳಲಿದ್ದಾನೆ 'ವಿಕ್ರಮಾದಿತ್ಯ'

ಬೆಂಗಳೂರು, ನವೆಂಬರ್. 02: ಭಾರತದ ವಾಯುಸೇನೆಯ ಅತಿದೊಡ್ಡ ಯುದ್ಧ ನೌಕೆ 'ವಿಕ್ರಮಾದಿತ್ಯ' ವನ್ನು ಇನ್ನು ಮುಂದೆ ಬೆಂಗಳೂರು ಮೂಲದ ಕೃಷ್ಣ ಸ್ವಾಮಿನಾಥನ್ ಮುಂದೆ ನಡೆಸಲಿದ್ದಾರೆ.

ಕೃಷ್ಣ ಸ್ವಾಮಿನಾಥನ್ ನೌಕೆಯ ಸೆಕೆಂಡ್ ಕಮಾಂಡಿಂಗ್ ಆಫಿಸರ್ (ಸಿಒ) ಆಗಿ ಕಾರವಾರದಲ್ಲಿ ಸೋಮವಾರ ಅಧಿಕಾರ ತೆಗೆದುಕೊಂಡರು ಎಂದು ಭಾರತೀಯ ಸೇನೆ ತಿಳಿಸಿದೆ. ಇಷ್ಟು ದಿನ ವಿಕ್ರಮಾದಿತ್ಯ ಕ್ಯಾಪ್ಟನ್ ಸುರಜ್ ಬೆರ್ರಿ ಮುಂದಾಳತ್ವದಲ್ಲಿ ಸಾಗುತ್ತಿತ್ತು. 2013 ರ ನವೆಂಬರ್ 26 ರಿಂದ ಬೆರ್ರಿ ನೌಕೆಯನ್ನು ಮುನ್ನಡೆಸುತ್ತಿದ್ದರು.[ವಿಶ್ವದ ಬಲಿಷ್ಠ ಮಿಲಿಟರಿ ಶಕ್ತಿ ಹೊಂದಿರುವ ದೇಶಗಳು : ಇಲ್ಲಿದೆ ಪಟ್ಟಿ]

army

ದೆಹಲಿಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿ, ಅಮೆರಿಕದಲ್ಲಿ ಸ್ವಾಮಿನಾಥನ್ ತಮ್ಮ ತರಬೇತಿಯನ್ನು ಮುಗಿಸಿ ಭಾರತಕ್ಕೆ ಹಿಂದಿರುಗಿದ್ದರು.[ವಜ್ರಕೋಶದ ವಿಶೇಷಗಳೇನು]

ವಿಕ್ರಮಾದಿತ್ಯನ ಹೊಸ ನಾವಿಕನ ಬಗ್ಗೆ ಮತ್ತಷ್ಟು
* ಬೆಂಗಳೂರಿನ ಬಿಷಪ್ ಕಾಟನ್ಸ್ ಶಾಲೆ ಮತ್ತು ಬಿಜಾಪುರದ ಸೈನಿಕ ಶಾಲೆಯಲ್ಲಿ ಸ್ವಾಮಿನಾಥನ್ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿದ್ದರು.
* ಕ್ಷಿಪಣಿ ನೌಕೆಗಳಾದ ಐಎನ್ ಎಸ್ ವಿದ್ಯುತ್ ಮತ್ತು ವಿನಾಶ್ ನ್ನು ಮುನ್ನಡಿಸಿದ ಅನುಭವ ಅವರಿಗಿದೆ.
* ಮೈಸೂರಿನಲ್ಲೂ ಸೈನ್ಯದ ತಂಡಗಳಿಗೆ ಮಾರ್ಗದರ್ಶನ ನೀಡಿದ್ದಾರೆ.
* ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಬಿ ಎಸ್ಸಿ ಪದವಿ ಪಡೆದುಕೊಂಡಿದ್ದರು. ರಕ್ಷಣಾ ವಿಭಾಗದಲ್ಲಿ ಎಂಎ ಮತ್ತು ಮುಂಬೈ ವಿವಿಯಿಂದ ಎಂ ಫಿಲ್ ಸಹ ಪಡೆದುಕೊಂಡಿದ್ದಾರೆ.
* ವೆಲ್ಲಿಂಗ್ ಟನ್ ಕಾಲೇಜಿನ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದಾರೆ.
*ನವೆಲ್ ಸಿಗ್ನಲ್ಸ್ ನ ಪ್ರಧಾನ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.

army
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+