Bank Holidays in November 2024: ನವೆಂಬರ್ನಲ್ಲಿ 13 ದಿನ ಬ್ಯಾಂಕ್ಗಳಿಗೆ ರಜೆ, ಗಮನಿಸಿ
ಬೆಂಗಳೂರು, ಅಕ್ಟೋಬರ್ 29: ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದಿಷ್ಟ ರಾಷ್ಟ್ರೀಯ ಸಾರ್ವಜನಿಕ ರಜಾ ದಿನಗಳ ಪಟ್ಟಿ ಪ್ರಕಟಿಸಿದೆ. ಅದರ ಪ್ರಕಾರ ನವೆಂಬರ್ 2024 ರಲ್ಲಿ ದೇಶದ ಎಲ್ಲ ಬ್ಯಾಂಕ್ಗಳಿಗೆ ಒಟ್ಟು 13 ದಿನ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಗ್ರಾಹಕರು ಇಲ್ಲಿ ನೀಡಲಾಗಿರುವ ದಿನಾಂಕಗಳನ್ನು ಗಮನಿಸಿ, ಬ್ಯಾಂಕ್ಗಳಿಗೆ ತೆರಳಬಹುದು, ವ್ಯವಹರಿಸಬಹುದು.
ಆರ್ಬಿಐ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಹಬ್ಬಗಳ ಆಧಾರದಲ್ಲಿ ಬ್ಯಾಂಕ್ಗಳಿಗೆ ನವೆಂಬರ್ನಲ್ಲಿ ಸಾರ್ವಜನಿಕ ರಜೆ ಘೋಷಿಸಿ ದಿನಾಂಕಗಳನ್ನು ಬಿಡುಗಡೆ ಮಾಡಿದೆ. ಹೀಗೆ ಬ್ಯಾಂಕ್ಗಳು ಬಂದ್ ಇರುವ ಸಮಯದಲ್ಲಿ ಆಯಾ ದಿನ ನೆಟ್ ಬ್ಯಾಂಕ್, ಮೊಬೈಲ್ ಅಪ್ಲಿಕೇಷನ್ ಸೇರಿದಂತೆ ಡಿಜಿಟಲ್ ಬ್ಯಾಂಕಿಂಗ್ ಆಯ್ಕೆಗಳು ಲಭ್ಯ ಇರುತ್ತವೆ ಎಂದು ಆರ್ಬಿಐ ತಿಳಿಸಿದೆ.

ನವೆಂಬರ್ ಬ್ಯಾಂಕ್ ರಜೆಗಳು ಯಾಕೆ?
ಮುಂದಿನ ನವೆಂಬರ್ ತಿಂಗಳಲ್ಲಿ ಮೊದಲ ದಿನವೇ ದೀಪಾವಳಿ ಹಬ್ಬ ಮತ್ತು ಛತ್ ಪೂಜೆ, ಗುರುನಾನಕ್ ಜಯಂತಿ ಇದೆ. ಇಷ್ಟು ಮಾತ್ರವಲ್ಲದೇ ಆಯಾ ರಾಜ್ಯಗಳಲ್ಲಿ ನಿರ್ದಿಷ್ಟ ಕಾರ್ಯಕ್ರಮಗಳ ಕಾರಣದಿಂದ ಬ್ಯಾಂಕ್ ವ್ಯವಹಾರ ಉದ್ದೇಶಿತ ದಿನಗಳಂದು ಕಾರ್ಯ ನಿರ್ವಹಿಸುವುದಿಲ್ಲ. ಈ ಬ್ಯಾಂಕ್ ಗಳ ಸಾರ್ವಜನಿಕ ರಜೆಯು ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯಗಳ ಗ್ರಾಹಕರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.
ನವೆಂಬರ್ ಮಾತ್ರವಲ್ಲದೇ ಯಾವಾಗಲೇ ಬ್ಯಾಂಕ್ಗಳು ರಜೆ ಇದ್ದರೂ ಸಹಿತ ಗ್ರಾಹಕರು ಡಿಜಿಟಲ್ ಬ್ಯಾಂಕಿಂಗ್ ಸೇವೆ ಪಡೆಯಬಹುದು. ವಿತ್ ಡ್ರಾ, ಪಾವತಿ, ಇನ್ನಿತರ ಖಾತೆ ನಿರ್ವಹಣೆ ಕುರಿತಂತೆ ಭಾರತೀಯ ರಿಸರ್ವ್ ಬ್ಯಾಂಕ್ ಡಿಜಿಟಲ್ ಬ್ಯಾಂಕಿಂಗ್ಗೆ ಆದ್ಯತೆ ನೀಡುವಂತೆ ಕೋರಿದೆ. ಈ ನವೆಂಬರ್ ರಜಾ ದಿನದ ಹೆಚ್ಚಿನ ಮಾಹಿತಿಗೆ ಗ್ರಾಹಕರು RBI ಕ್ಯಾಲೆಂಡರ್ ವೀಕ್ಷಿಸಬಹುದು.
ನವೆಂಬರ್ ತಿಂಗಳಲ್ಲಿ ಯಾವೆಲ್ಲ ದಿನ ಬ್ಯಾಂಕ್ ರಜೆ, ಪಟ್ಟಿ
ನವೆಂಬರ್ 1- ದೀಪಾವಳಿ ಅಮವಾಸ್ಯೆ
ನವೆಂಬರ್ 2- ದೀಪಾವಳಿ (ಬಲಿ ಪ್ರತಿಪದ)
ನವೆಂಬರ್ 3- ಭಾನುವಾರ
ನವೆಂಬರ್ 7- ಛತ್
ನವೆಂಬರ್ 8- ಛತ್
ನವೆಂಬರ್ 9 - ಎರಡನೇ ಶನಿವಾರ
ನವೆಂಬರ್ 10 - ಭಾನುವಾರ
ನವೆಂಬರ್ 12 - ಎಗಾಸ್-ಬಗ್ವಾಲ್
ನವೆಂಬರ್ 15 - ಗುರುನಾನಕ್ ಜಯಂತಿ
ನವೆಂಬರ್ 17 - ಭಾನುವಾರ
ನವೆಂಬರ್ 18 - ಕನಕದಾಸ ಜಯಂತಿ
ನವೆಂಬರ್ 23 - ಸೆಂಗ್ ಕುಟ್ಸ್ನೆಮ್, ನಾಲ್ಕನೇ ಶನಿವಾರ
ನವೆಂಬರ್ 24 - ಭಾನುವಾರ
ರಾಜ್ಯವಾರು ಬ್ಯಾಂಕ್ ರಜೆಗಳ ಮಾಹಿತಿ
ನವೆಂಬರ್ 1 ರಂದು ತ್ರಿಪುರ, ಕರ್ನಾಟಕ ಇನ್ನಿತರ ಕಡೆ ದೀಪಾವಳಿ ಮತ್ತು ಕನ್ನಡ ರಾಷ್ಟ್ರೀಯ ಹಬ್ಬ ರಜೆ ಇದೆ
ನವೆಂಬರ್ 7 ಮತ್ತು 8 ಕ್ಕೆ ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ರಾಜ್ಯದಲ್ಲಿ ಛತ್ ಪೂಜೆ ಸಲುವಾಗಿ ರಜೆ
ನವೆಂಬರ್ 15 ರಂದು ವಿವಿಧ ರಾಜ್ಯಗಳಲ್ಲಿ ಗುರುನಾನಕ್ ಜಯಂತಿ ಪ್ರಯುಕ್ತ ಬ್ಯಾಂಕ್ ರಜೆ ಇರಲಿವೆ.
ನವೆಂಬರ್ 18 ಮತ್ತು 23 ರಂದು ಕರ್ನಾಟಕ ಮತ್ತು ಮೇಘಾಲಯ ರಾಜ್ಯದಲ್ಲಿ ಬ್ಯಾಂಕ್ಗಳಿಗೆ ಪ್ರಾದೇಶಿಕ ರಜೆ ಇದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications