ಗ್ರಾಹಕರೇ ಎಚ್ಚರ! ಮಾರ್ಚ್ ತಿಂಗಳಿನಲ್ಲಿ ಬ್ಯಾಂಕುಗಳಿಗೆ ಸಾಲು ಸಾಲು ರಜೆ
ಬೆಂಗಳೂರು, ಮಾರ್ಚ್ 2 : ಮಾರ್ಚ್ ತಿಂಗಳಿನಲ್ಲಿ ಸಾಲು ಸಾಲು ರಜೆಗಳಿದ್ದು, ಬ್ಯಾಂಕಿಂಗ್ ವ್ಯವಹಾರದಲ್ಲಿ ವ್ಯತ್ಯಯ ಕಂಡು ಬರುವ ಸಾಧ್ಯತೆಯಿದೆ. ಈ ವರ್ಷದ ಫೆಬ್ರವರಿಯಲ್ಲಿ 29 ದಿನಗಳಿತ್ತು. 2 ಮತ್ತು 4ನೇ ಶನಿವಾರ, ಭಾನುವಾರ ಸೇರಿ ಬ್ಯಾಂಕ್ಗಳಿಗೆ ಹಲವು ರಜೆಗಳಿತ್ತು. ಕಳೆದ ತಿಂಗಳ ಮೊದಲ ದಿನವೇ ಬ್ಯಾಂಕ್ ಸಿಬ್ಬಂದಿ ಮುಷ್ಕರದಿಂದಾಗಿ ಬ್ಯಾಂಕ್ ವ್ಯವಹಾರ ಬಂದ್ ಆಗಿತ್ತು. ಒಟ್ಟಾರೆ, ಕಳೆದ ತಿಂಗಳು ಬ್ಯಾಂಕ್ ಸಿಬ್ಬಂದಿಗಳಿಗೆ ಒಟ್ಟು 10 ರಜೆಗಳು ಸಿಕ್ಕಿದಂತೆ ಆಗುತ್ತದೆ. 4 ಭಾನುವಾರ, 2 ಮತ್ತು 4ನೇ ಶನಿವಾರ ಎಂದಿನಂತೆ ಬ್ಯಾಂಕ್ ರಜೆ ಸಿಕ್ಕಿತ್ತು.
Recommended Video
ಬ್ಯಾಂಕ್ ಸಿಬ್ಬಂದಿಗಳಿಗೆ ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ರಜಾದಿನವಿರಲಿದೆ. ಇದಲ್ಲದೆ, ಯಾವೆಲ್ಲ ದಿನಗಳಲ್ಲಿ ರಜಾ ಸಿಗಬಹುದು ಎಂಬುದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ ಬಿಐ) ಪ್ರಕಟಿಸಿದೆ. ಸಾರ್ವತ್ರಿಕ ರಜಾ ದಿನ, ನಿರ್ಬಂಧಿತ ರಜಾ ದಿನಗಳನ್ನು ಇದರಲ್ಲಿ ನೀಡಲಾಗಿದೆ. ಕೆಲವು ರಜಾ ದಿನಗಳು ಕೆಲವು ಪ್ರದೇಶಕ್ಕೆ ಮಾತ್ರ ಸೀಮಿತವಾಗಿರಲಿದೆ.
ಅಸ್ಸಾಂನ ಬಿಹು, ಕೇರಳ ಓಣಂ ಸೇರಿದಂತೆ ಪ್ರಾದೇಶಿಕ ಹಬ್ಬಗಳ ದಿನದಂದು ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ ಎಂದು ಆರ್ ಬಿಐ ಪ್ರಕಟಿಸಿದೆ.

ಮಾರ್ಚ್ 8 ರಂದು ಭಾನುವಾರ ರಜೆ ಇದೆ. ಮಾರ್ಚ್ 10 ರಂದು ಹೋಳಿಹುಣ್ಣಿಮೆ ಪ್ರಯುಕ್ತ ರಜೆ ಇರುತ್ತದೆ. ಮಾರ್ಚ್ 11 ರಿಂದ 13 ರವರೆಗೆ 3 ದಿನಗಳ ಮುಷ್ಕರ ನಡೆದರೆ, ಮಾರ್ಚ್ 14ರಂದು ಎರಡನೇ ಶನಿವಾರ, ಮಾರ್ಚ್ 15 ಭಾನುವಾರ ರಜೆ ಸಿಗಲಿದೆ. ಸರಣಿಯಾಗಿ 6 ದಿನಗಳ ಕಾಲ ಬ್ಯಾಂಕ್ ಗಳ ಬಾಗಿಲು ಬಂದ್ ಮಾಡಿದರೆ, ಗ್ರಾಹಕರಿಗೆ ಸಮಸ್ಯೆ ಎದುರಾಗಲಿದೆ. ಹೀಗಾಗಿ, ಬಹುತೇಕ ಮಾರ್ಚ್ 2ನೇ ವಾರ ಬ್ಯಾಂಕುಗಳು ಕಾರ್ಯನಿರ್ವಹಿಸುವ ಸಾಧ್ಯತೆ ಕಡಿಮೆ. ಆದರೆ, ಮೂರು ದಿನಗಳ ಮುಷ್ಕರ ಹಿಂಪಡೆಯುವ ಸಾಧ್ಯತೆ ಹೆಚ್ಚಿರುವುದರಿಂಡ ಗ್ರಾಹಕರಿಗೆ ಕೊಂಚ ನೆಮ್ಮದಿ ಸಿಕ್ಕಿದೆ.
ಮಾರ್ಚ್ ತಿಂಗಳಿನಲ್ಲಿರುವ ರಜಾದಿನಗಳು:
ಮಾರ್ಚ್ 1: ಭಾನುವಾರ.
ಮಾರ್ಚ್ 5: ಬುಧವಾರ-ಪಂಚಾಯತಿ ರಾಜ್ ದಿನ(ಒಡಿಶಾ)
ಮಾರ್ಚ್ 6: ಶುಕ್ರವಾರ- ಮಿಜೋರಾಂನಲ್ಲಿ ಛಾಪ್ಚುರ್ ಕುತ್ ಹಬ್ಬ
ಮಾರ್ಚ್ 8: ಭಾನುವಾರ
ಮಾರ್ಚ್ 9: ಸೋಮವಾರ-ಉತ್ತರಪ್ರದೇಶದಲ್ಲಿ ಹಜರತ್ ಅಲಿ ವಾರ್ಷಿಕೋತ್ಸವ
ಮಾರ್ಚ್ 10: ಹೋಳಿ
ಮಾರ್ಚ್ 14: ಎರಡನೇ ಶನಿವಾರ
ಮಾರ್ಚ್ 15: ಭಾನುವಾರ
ಮಾರ್ಚ್ 22: ಭಾನುವಾರ
ಮಾರ್ಚ್ 23: ಸೋಮವಾರ-ಹರ್ಯಾಣದಲ್ಲಿ ಶಹೀದ್ ಭಗತ್ ಸಿಂಗ್ ದಿನ
ಮಾರ್ಚ್ 25: ಬುಧವಾರ- ಕರ್ನಾಟಕ, ಆಂಧ್ರಪ್ರದೇಶದಲ್ಲಿ ಯುಗಾದಿ, ಮಹಾರಾಷ್ಟ್ರದಲ್ಲಿ ಗುಡಿ ಪಡ್ವಾ, ಮಣಿಪುರದಲ್ಲಿ ಸಜಿಬು ನೊಗ್ಮಾಪನ್ಬಾ, ಜಮ್ಮು ಮತ್ತು ಕಾಶ್ಮೀರದಲ್ಲಿ ನವರಾತ್ರಾ.
ಮಾರ್ಚ್ 26: ಗುರುವಾರ-ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಉತ್ತರಾಖಂಡ್ ರಾಜ್ಯಗಳಲ್ಲಿ ಛೇತಿ ಚಾಂದ್ ವಾರ್ಷಿಕೋತ್ಸವ.
ಮಾರ್ಚ್ 27: ಶುಕ್ರವಾರ- ಜಾರ್ಖಂಡ್ ರಾಜ್ಯದಲ್ಲಿ ಸಾರ್ಹುಲ್ ಹಬ್ಬ.
ಮಾರ್ಚ್ 28: ನಾಲ್ಕನೇ ಶನಿವಾರ.
ಮಾರ್ಚ್ 29: ಭಾನುವಾರ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications