ವಿಪ್ರೋ ಅಜೀಂ ಪ್ರೇಮ್ಜಿ ದಾನಕ್ಕೆ ಸರಿಸಾಟಿಯಿಲ್ಲ

ಇತ್ತೀಚೆಗಷ್ಟೆ ಎಚ್ ಸಿಎಲ್ ಕಾರ್ಪೊರೇಶನ್ ಕಂಪನಿಯ ಸಂಸ್ಥಾಪಕ ಅಧ್ಯಕ್ಷ ಶಿವ್ ನಡಾರ್ ಅವರು ತಮ್ಮ Shiv Nadar Foundation ವತಿಯಿಂದ ಶಿಕ್ಷಣಕ್ಕಾಗಿ 3,000 ಕೋಟಿ ರೂಪಾಯಿ ದಾನ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದರ ಬೆನ್ನಿಗೇ ವಿಪ್ರೋ ಅಧ್ಯಕ್ಷರಾದ ಅಜೀಂ ಪ್ರೇಮ್ಜಿ ಅವರು ಈ ಬಾರಿ ಬರೋಬ್ಬರಿ 8,000 ಕೋಟಿ ರೂ ದಾನ ತೆಗೆದಿಟ್ಟಿದ್ದಾರೆ. ಇದರಿಂದ ವಿಶ್ವಮಟ್ಟದಲ್ಲಿ ಅಜೀಂ ಅಗ್ರ ಕೊಡುಗೈ ದಾನಿಯಾಗಿ ಹೊರಹೊಮ್ಮಿದ್ದಾರೆ.
68 ವರ್ಷದ ಅಜೀಂ ಪ್ರೇಮ್ಜಿ ಅವರು ವಿಪ್ರೋ ಕಂಪನಿಯಲ್ಲಿ ಶೇ. 57ರಷ್ಟು ಪಾಲು ಹೊಂದಿದ್ದಾರೆ. ಅದರಲ್ಲಿ ಶೇ. 10ರಷ್ಟನ್ನು ಭಾರತದ ಗ್ರಾಮೀಣ ಭಾಗದಲ್ಲಿನ ಶಿಕ್ಷಣಕ್ಕಾಗಿ ವಿನಿಯೋಗಿಸಿದ್ದಾರೆ.
ಚೀನಾದ Hurun India Philanthropy List 2013 ಪ್ರಕಾರ, ಇಂಡಿಯಾ ಫಿಲೋಂಥ್ರಪಿ ಲಿಸ್ಟಿನಲ್ಲಿ ಪ್ರೇಮ್ಜಿ ಹೆರು ಅಗ್ರ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಎಚ್ಸಿಎಲ್ ಸಮೂಹ ಸಂಸ್ಥೆಯ ಅಧ್ಯಕ್ಷ ಶಿವ್ ನಾಡಾರ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಜಿಎಂಆರ್ ಸಮೂಹ ಸಂಸ್ಥೆಯ ಜಿಎಂ ರಾವ್ ಪ್ರತಿ ವರ್ಷ 740 ಕೋಟಿ ದಾನ ನೀಡುವ ಮೂಲಕ ತೃತೀಯ ಸ್ಥಾನದಲ್ಲಿದ್ದಾರೆ.
ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರದ ಅಧ್ಯಕ್ಷ ನಂದನ್ ನೀಲೇಕಣಿ ಮತ್ತು ರೋಹಿಣಿ ನೀಲೇಕಣಿ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ರೊನ್ನೆ ಸ್ಕ್ರೂವ್ವೆವ್ವಾಲಾ ಸ್ವದೇಶಿ ಫೌಂಡೇಷನ್ ಮತ್ತು ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಬಯೋಕಾನ್ ಸಂಸ್ಥೆ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ 470 ಕೋಟಿ ನೀಡುವ ಮೂಲಕ ನಂತರದ ಸ್ಥಾನಗಳಲ್ಲಿದ್ದಾರೆ.
ದಾನಿಗಳ ವಯೋಮಾನ ಸರಾಸರಿ 62 ವರ್ಷಗಳಾಗಿದೆ. ಹತ್ತಕ್ಕೂ ಹೆಚ್ಚು ದಾನಿಗಳ ವಯಸ್ಸು 64 ಆಗಿದೆ. ಪ್ರಾದೇಶಿಕವಾಗಿ ಹೇಳುವುದಿದ್ದರೆ ದಕ್ಷಿಣ ಭಾರತೀಯರು ಒಟ್ಟಾರೆಯಾಗಿ 10,000 ಕೋಟಿ ದಾನ ಮಾಡುವ ಮೂಲಕ ಉತ್ತರ ಭಾರತೀಯರನ್ನು ಮೀರಿಸಿದ್ದಾರೆ. ದಾನಪಟ್ಟಿಯಲ್ಲಿ ಉತ್ತರ ಭಾರತೀಯರು ಕೊಟ್ಟ ಮೌಲ್ಯ 4,865 ಕೋಟಿ ಮಾತ್ರ.
ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಉದ್ಯಮಿಗಳು ಹೆಚ್ಚಿನ ಪ್ರಮಾಣದಲ್ಲಿ ದಾನ ಮಾಡುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದಕ್ಕೆ ದೇಶದ ಉದ್ದಿಮೆದಾರರ ಕೊಡುಗೆ 12,200 ಕೋಟಿ! ಆ ನಂತರ, social development (Rs 1,210 crore), healthcare (Rs 1,065 crore), rural development (Rs 565 crore), environmental cause (Rs 170 crore) ಮತ್ತು agriculture (Rs 40 crore) ಮನ್ನಣೆ ಪಡೆದಿವೆ.
ಕಂಪನಿ ಕಾಯಿದೆ 2013ರ ಅನುಸಾರ ಕಂಪನಿಗಳು 500 ಕೋಟಿ ರೂ. ಗೂ ಅಧಿಕ ನಿವ್ವಳ ಮೌಲ್ಯ ಅಥವಾ 1,000 ಕೋಟಿ ರೂ. ಆದಾಯ ಗಳಿಸಿದ್ದರೆ ಅಥವಾ 5 ಕೋಟಿ ರೂ. ಗೂ ಅಧಿಕ ನಿವ್ವಳ ಲಾಭ ಗಳಿಸಿದರೆ ಅದರಲ್ಲಿ ಕನಿಷ್ಠ ಶೇ. 2ರಷ್ಟು ಪಾಲನ್ನು ದಾನಕ್ಕಾಗಿ ವಿನಿಯೋಗಿಸುವುದು ಕಡ್ಡಾಯವಾಗಿದೆ.
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು












Click it and Unblock the Notifications