ಮತ ಕೇಳೋಕೆ ಹಿಂದಿ ಬೇಕು, ಸಂಸತ್ತಿನಲ್ಲಿ ಯಾಕ್ ಬೇಡ?
ಇತ್ವಾ (ಉ.ಪ್ರ), ನ 18: ಹಿಂದಿಯನ್ನು ಭಲವಂತವಾಗಿ ಹೇರುತ್ತಿರುವುದಕ್ಕೆ ಅಲ್ಲಲ್ಲಿ, ಆಗಾಗ ಪ್ರತಿಭಟನೆಗಳು ನಡೆಯುತ್ತಲೇ ಇರುತ್ತವೆ, ಅದರಂತೆ ಬೆಂಗಳೂರಿನಲ್ಲೂ. ಕೇಂದ್ರ ಸರಕಾರದ ಅಧೀನದ ಕಚೇರಿಗಳಲ್ಲಿ ಹಿಂದಿ ಹೇರಿಕೆ ವಿರುದ್ದ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ ಉದಾಹರಣೆಗಳೂ ಸಾಕಷ್ಟಿವೆ.
ಪ್ರತೀ ಸೆಪ್ಟಂಬರ್ 14ರಂದು ಕೇಂದ್ರ ಸರಕಾರದ ಕಚೇರಿಗಳಲ್ಲಿ 'ಹಿಂದಿ ದಿವಸ್' ಎಂದು ಆಚರಿಸಲಾಗುತ್ತಿತ್ತು. ಒಂದು ದಿನ ಇದ್ದ ಈ ಆಚರಣೆ ನಂತರದ ದಿನಗಳಲ್ಲಿ 'ಹಿಂದಿ ಸಪ್ತಾಹ್' ಮತ್ತು 'ಹಿಂದಿ ಪಾಕ್ಷಿಕ್' ಎಂದು ವಿಸ್ತರಣೆಗೊಂಡಿತು.

ಈ ಲೇಖನದಲ್ಲಿ ವಿಚಾರಕ್ಕೆ ಬರುವುದಾದರೆ 'ವೋಟು ಕೇಳೋಕೆ ನಿಮಗೆ ಹಿಂದಿ ಬೇಕು, ಸಂಸತ್ತಿನಲ್ಲಿ ನಿಮಗ್ಯಾಕೆ ಇಂಗ್ಲಿಷ್ ಪ್ರೇಮ' ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಹೇಳಿದ್ದಾರೆ.
ನಗರದಲ್ಲಿ ಇತ್ವಾ ಹಿಂದಿ ಸೇವಾ ಟ್ರಸ್ಟ್ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡುತ್ತಿದ್ದ ಮುಲಾಯಂ, ನಾನು ಇಂಗ್ಲಿಷ್ ವಿರೋಧಿಯಲ್ಲ, ಆದರೂ ನಮಗೆ ನಮ್ಮ ಭಾಷೆಯ ಮೇಲೆ ಅಭಿಮಾನವಿರಬೇಕು. ಹೀಗಾಗಿ ಸಂಸತ್ತಿನ ಉಭಯ ಸದನದಲ್ಲಿ ಇಂಗ್ಲಿಷ್ ಪದ ಬಳಸುವುದನ್ನು ನಿಷೇಧಿಸಿ 'ಹಿಂದಿ ಕಡ್ಡಾಯ' ಮಾಡಬೇಕೆಂದು ಆಗ್ರಹಿಸಿದ್ದಾರೆ.
ಮಾತು ಮುಂದುವರಿಸುತ್ತಾ, ದೇಶದ ಹಲವಾರು ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆ ಚಾಲ್ತಿಯಲ್ಲಿದೆ. ಆಯಾಯ ರಾಜ್ಯದ ಅಸೆಂಬ್ಲಿಯಲ್ಲಿ ಪ್ರಾದೇಶಿಕ ಭಾಷೆಯನ್ನೇ ಬಳಸಲಿ. ಆದರೆ ಸಂಸತ್ತಿನ ವಿಚಾರಕ್ಕೆ ಬಂದಾಗ ಸಂಸದರು ಪ್ರಾದೇಶಿಕ ಭಾಷೆಯ ಬದಲು ಹಿಂದಿಯಲ್ಲೇ ವ್ಯವಹರಿಸ ಬೇಕೆಂದು ಹೇಳಿದ್ದಾರೆ.
ನಮ್ಮ ದೇಶದ ಏಕತೆಗೆ ಒಂದು ಭಾಷೆ ಬೇಕು. ಹಾಗಾಗಿ ಹಿಂದಿ ಹೊರತು ಪಡಿಸಿ ಸಂಸತ್ತಿನಲ್ಲಿ ಬೇರೆ ಎಲ್ಲಾ ಭಾಷೆಗಳನ್ನು ನಿಷೇಧಿಸ ಬೇಕೆಂದು ಮುಲಾಯಂ ಆಗ್ರಹಿಸಿದ್ದಾರೆ.
ಹಿಂದಿ ಹೊರತು ಪಡಿಸಿ ಮಿಕ್ಕ ಭಾಷೆಗಳನ್ನು ನಿಷೇಧಿಸ ಬೇಕೆನ್ನುವ ಮುಲಾಯಂ ಹೇಳಿಕೆ ಸಮಂಜಸವೇ?
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications