ಆಯುಷ್ಮಾನ್ ಭಾರತ ಯೋಜನೆ : ಯಾರು ಫಲಾನುಭವಿ, ಯಾರು ಅರ್ಹರು?
Recommended Video

ಸೆಪ್ಟೆಂಬರ್ 25ರಂದು ಮಂಗಳವಾರ ನರೇಂದ್ರ ಮೋದಿ ಸರಕಾರದ ಮಹತ್ವಾಕಾಂಕ್ಷಿ ಆಯುಷ್ಮಾನ್ ಭಾರತ ಅಥವಾ ರಾಷ್ಟ್ರೀಯ ಆರೋಗ್ಯ ರಕ್ಷಣಾ ಮಿಷನ್ ಅಥವಾ ಮೋದಿಕೇರ್ ಯೋಜನೆಯನ್ನು ಆರಂಭಿಸಲಾಗುತ್ತಿದೆ.
ಸರಕಾರಿ ಪ್ರಯೋಜಿತ ಈ ಆರೋಗ್ಯ ವಿಮೆ ಯೋಜನೆಯಿಂದ ದೇಶದಲ್ಲಿರುವ 10.74 ಕೋಟಿ ಕುಟುಂಬಗಳು ಮತ್ತು 50 ಕೋಟಿಯಷ್ಟು ಜನರು ಪ್ರಯೋಜನ ಪಡೆಯಲಿದ್ದಾರೆ. ಉಚಿತ ಕವರೇಜ್ ಇರುವ ಯೋಜನೆಯಿಂದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರುಪಾಯಿಯಷ್ಟು ಹಣದ ನೆರವು ಸಿಗಲಿದೆ. ಯಾವುದೇ ಸರಕಾರಿ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಕೂಡ ಚಿಕಿತ್ಸೆ ಪಡೆಯಬಹುದಾಗಿದೆ.
ಆದರೆ, ಇದು ಕೇವಲ ದೇಶದ ಬಡಜನತೆಗೆ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ಮಾತ್ರ ಲಭ್ಯವಾಗಿರಲಿದ್ದು, ಉಚಿತ ವೈದ್ಯಕೀಯ ವಿಮೆಯ ಸೌಲಭ್ಯ ಎಲ್ಲರಿಗೂ ಸಿಗುವುದಿಲ್ಲ. ಹಾಗಿದ್ದರೆ ಈ ಯೋಜನೆಯಡಿ ಯಾರು ಬರಲಿದ್ದಾರೆ, ಯಾರ್ಯಾರು ಇದಕ್ಕೆ ಅರ್ಹತೆ ಗಳಿಸಲಿದ್ದಾರೆ, ಇದಕ್ಕಾಗಿ ಇರಬೇಕಾಗಿರುವ ದಾಖಲಾತಿಗಳೇನು? ಮುಂತಾದ ವಿವರಗಳು ಮುಂದಿವೆ.

ಗ್ರಾಮೀಣ ಪ್ರದೇಶದಲ್ಲಿ
1) ಕೇವಲ ಒಂದೇ ಕೋಣೆಯಲ್ಲಿ, ಕಚ್ಚಾ ಗೋಡೆ ಮತ್ತು ಕಚ್ಚಾ ಮಾಳಿಗೆ ಇರುವ ಮನೆಯಲ್ಲಿ ವಾಸಿಸುತ್ತಿರುವವರು.
2) 16ರಿಂದ 59 ವರ್ಷದೊಳಗಿನ ವಯಸ್ಕರು ಇಲ್ಲದಿರುವ ಕುಟುಂಬದ ಸದಸ್ಯರು.
3) 16ರಿಂದ 59 ವರ್ಷದೊಳಗಿನ ಪುರುಷರು ಇಲ್ಲದಿರುವ, ಆದರೆ, ಮಹಿಳೆ ನಿರ್ವಹಿಸುತ್ತಿರುವ ಬಡ ಕುಟುಂಬ.
4) ಕನಿಷ್ಠ ಒಬ್ಬರು ವಿಕಲಾಂಗವಿರುವ ಮತ್ತು ಹಿರಿಯರಿದ್ದರೂ ಅಂಗವೈಕಲ್ಯತೆ ಇರುವ ಕುಟುಂಬ.
5) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬ.
6) ದಿನಗೂಲಿ ನೌಕರಿಯನ್ನೇ ನಂಬಿರುವ, ಯಾವುದೇ ಭೂಮಿ ಇಲ್ಲದ ಕುಟುಂಬ.
7) ನಿರ್ಗತಿಕರು ಮತ್ತು ಭಿಕ್ಷೆಯ ಮೇಲೆ ಆಧಾರಿತ ಕುಟುಂಬ.
8) ಒಳಚರಂಡಿ ಸ್ವಚ್ಛಗೊಳಿಸುವ ಕಾಯಕದಲ್ಲಿ ತೊಡಗಿರುವ ಕುಟುಂಬ.
9) ಆಧುನಿಕ ಸಂಸ್ಕೃತಿಗೆ ತೆರೆದುಕೊಂಡಿರದ ಗುಡ್ಡಗಾಡು ಕುಟುಂಬ.
10) ಜೀತಪದ್ಧತಿಯಿಂದ ಕಾನೂನಾತ್ಮಕವಾಗಿ ಬಿಡುಗಡೆಗೊಂಡಿರುವ ಕುಟುಂಬ.

ನಗರ ಪ್ರದೇಶದಲ್ಲಿ
1) ಕಸ ಆಯುವವರು
2) ಭಿಕ್ಷುಕರು
3) ಮನೆಗೆಲಸಗಾರರು
4) ಬೀದಿ ವ್ಯಾಪಾರಿಗಳು / ಚಮ್ಮಾರರು / ಆಯುವವರು / ಬೀದಿಯಲ್ಲಿ ಇತರ ಕೆಲಸದಲ್ಲಿ ತೊಡಗಿರುವವರು
5) ಕಟ್ಟಡ ಕರ್ಮಿಗಳು / ನಲ್ಲಿ ರಿಪೇರಿಯವರು / ದಿನಗೂಲಿ ನೌಕರರು / ಬಣ್ಣ ಬಳಿಯುವವರು / ವೆಲ್ಡಿಂಗ್ ಮಾಡುವವರು / ರಕ್ಷಣಾ ಸಿಬ್ಬಂದಿಗಳು / ಕೂಲಿ ಕಾರ್ಮಿಕರು
6) ಕಸ ಗುಡಿಸುವವರು / ಶೌಚಾಲಯ ಸ್ವಚ್ಛಗೊಳಿಸುವವರು / ಮಾಲಿಗಳು
7) ಮನೆ ಸಂಬಂಧಿ ಕೆಲಸದಲ್ಲಿ ತೊಡಗಿರುವವರು / ಕುಶಲಕರ್ಮಿಗಳು / ಕರಕುಶಲ ಕರ್ಮಿಗಳು / ಶಿಂಪಿಗಳು
8) ಸಾರಿಗೆ ಕೆಲಸಗಾರರು / ಡ್ರೈವರ್ / ನಿರ್ವಾಹಕರು / ಡ್ರೈವರ್ ಮತ್ತು ನಿರ್ವಾಹಕರಿಗೆ ಸಹಾಯಕರಾಗಿರುವವರು / ಗಾಡಿ ಎಳೆಯುವವರು / ರಿಕ್ಷಾ ಎಳೆಯುವವರು.
9) ಅಂಗಡಿಯಲ್ಲಿ ಕೆಲಸ ಮಾಡುವವರು / ಸಹಾಯಕರು / ಸಣ್ಣ ಸಂಸ್ಥೆಯಲ್ಲಿ ಕೆಲಸ ಮಾಡುವ ಜವಾನರು / ಸಹಾಯಕರು / ಬಟವಾಡೆ ಮಾಡುವವರು / ಅಟೆಂಡರ್ / ಮಾಣಿಗಳು.
10) ಎಲೆಕ್ಟ್ರಿಶಿಯನ್ / ಮೆಕ್ಯಾನಿಕ್ / ಅಸೆಂಬ್ಲರ್ / ರಿಪೇರಿ ಕೆಲಸ ಮಾಡುವವರು.
11) ಅಗಸ / ಚೌಕಿದಾರ್ (ಮನೆ ಕಾಯುವವರು)
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications