ಆಯುಷ್ಮಾನ್ ಭಾರತ ಯೋಜನೆ : ಯಾರು ಫಲಾನುಭವಿ, ಯಾರು ಅರ್ಹರು?
Recommended Video

ಸೆಪ್ಟೆಂಬರ್ 25ರಂದು ಮಂಗಳವಾರ ನರೇಂದ್ರ ಮೋದಿ ಸರಕಾರದ ಮಹತ್ವಾಕಾಂಕ್ಷಿ ಆಯುಷ್ಮಾನ್ ಭಾರತ ಅಥವಾ ರಾಷ್ಟ್ರೀಯ ಆರೋಗ್ಯ ರಕ್ಷಣಾ ಮಿಷನ್ ಅಥವಾ ಮೋದಿಕೇರ್ ಯೋಜನೆಯನ್ನು ಆರಂಭಿಸಲಾಗುತ್ತಿದೆ.
ಸರಕಾರಿ ಪ್ರಯೋಜಿತ ಈ ಆರೋಗ್ಯ ವಿಮೆ ಯೋಜನೆಯಿಂದ ದೇಶದಲ್ಲಿರುವ 10.74 ಕೋಟಿ ಕುಟುಂಬಗಳು ಮತ್ತು 50 ಕೋಟಿಯಷ್ಟು ಜನರು ಪ್ರಯೋಜನ ಪಡೆಯಲಿದ್ದಾರೆ. ಉಚಿತ ಕವರೇಜ್ ಇರುವ ಯೋಜನೆಯಿಂದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರುಪಾಯಿಯಷ್ಟು ಹಣದ ನೆರವು ಸಿಗಲಿದೆ. ಯಾವುದೇ ಸರಕಾರಿ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಕೂಡ ಚಿಕಿತ್ಸೆ ಪಡೆಯಬಹುದಾಗಿದೆ.
ಆದರೆ, ಇದು ಕೇವಲ ದೇಶದ ಬಡಜನತೆಗೆ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ಮಾತ್ರ ಲಭ್ಯವಾಗಿರಲಿದ್ದು, ಉಚಿತ ವೈದ್ಯಕೀಯ ವಿಮೆಯ ಸೌಲಭ್ಯ ಎಲ್ಲರಿಗೂ ಸಿಗುವುದಿಲ್ಲ. ಹಾಗಿದ್ದರೆ ಈ ಯೋಜನೆಯಡಿ ಯಾರು ಬರಲಿದ್ದಾರೆ, ಯಾರ್ಯಾರು ಇದಕ್ಕೆ ಅರ್ಹತೆ ಗಳಿಸಲಿದ್ದಾರೆ, ಇದಕ್ಕಾಗಿ ಇರಬೇಕಾಗಿರುವ ದಾಖಲಾತಿಗಳೇನು? ಮುಂತಾದ ವಿವರಗಳು ಮುಂದಿವೆ.

ಗ್ರಾಮೀಣ ಪ್ರದೇಶದಲ್ಲಿ
1) ಕೇವಲ ಒಂದೇ ಕೋಣೆಯಲ್ಲಿ, ಕಚ್ಚಾ ಗೋಡೆ ಮತ್ತು ಕಚ್ಚಾ ಮಾಳಿಗೆ ಇರುವ ಮನೆಯಲ್ಲಿ ವಾಸಿಸುತ್ತಿರುವವರು.
2) 16ರಿಂದ 59 ವರ್ಷದೊಳಗಿನ ವಯಸ್ಕರು ಇಲ್ಲದಿರುವ ಕುಟುಂಬದ ಸದಸ್ಯರು.
3) 16ರಿಂದ 59 ವರ್ಷದೊಳಗಿನ ಪುರುಷರು ಇಲ್ಲದಿರುವ, ಆದರೆ, ಮಹಿಳೆ ನಿರ್ವಹಿಸುತ್ತಿರುವ ಬಡ ಕುಟುಂಬ.
4) ಕನಿಷ್ಠ ಒಬ್ಬರು ವಿಕಲಾಂಗವಿರುವ ಮತ್ತು ಹಿರಿಯರಿದ್ದರೂ ಅಂಗವೈಕಲ್ಯತೆ ಇರುವ ಕುಟುಂಬ.
5) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬ.
6) ದಿನಗೂಲಿ ನೌಕರಿಯನ್ನೇ ನಂಬಿರುವ, ಯಾವುದೇ ಭೂಮಿ ಇಲ್ಲದ ಕುಟುಂಬ.
7) ನಿರ್ಗತಿಕರು ಮತ್ತು ಭಿಕ್ಷೆಯ ಮೇಲೆ ಆಧಾರಿತ ಕುಟುಂಬ.
8) ಒಳಚರಂಡಿ ಸ್ವಚ್ಛಗೊಳಿಸುವ ಕಾಯಕದಲ್ಲಿ ತೊಡಗಿರುವ ಕುಟುಂಬ.
9) ಆಧುನಿಕ ಸಂಸ್ಕೃತಿಗೆ ತೆರೆದುಕೊಂಡಿರದ ಗುಡ್ಡಗಾಡು ಕುಟುಂಬ.
10) ಜೀತಪದ್ಧತಿಯಿಂದ ಕಾನೂನಾತ್ಮಕವಾಗಿ ಬಿಡುಗಡೆಗೊಂಡಿರುವ ಕುಟುಂಬ.

ನಗರ ಪ್ರದೇಶದಲ್ಲಿ
1) ಕಸ ಆಯುವವರು
2) ಭಿಕ್ಷುಕರು
3) ಮನೆಗೆಲಸಗಾರರು
4) ಬೀದಿ ವ್ಯಾಪಾರಿಗಳು / ಚಮ್ಮಾರರು / ಆಯುವವರು / ಬೀದಿಯಲ್ಲಿ ಇತರ ಕೆಲಸದಲ್ಲಿ ತೊಡಗಿರುವವರು
5) ಕಟ್ಟಡ ಕರ್ಮಿಗಳು / ನಲ್ಲಿ ರಿಪೇರಿಯವರು / ದಿನಗೂಲಿ ನೌಕರರು / ಬಣ್ಣ ಬಳಿಯುವವರು / ವೆಲ್ಡಿಂಗ್ ಮಾಡುವವರು / ರಕ್ಷಣಾ ಸಿಬ್ಬಂದಿಗಳು / ಕೂಲಿ ಕಾರ್ಮಿಕರು
6) ಕಸ ಗುಡಿಸುವವರು / ಶೌಚಾಲಯ ಸ್ವಚ್ಛಗೊಳಿಸುವವರು / ಮಾಲಿಗಳು
7) ಮನೆ ಸಂಬಂಧಿ ಕೆಲಸದಲ್ಲಿ ತೊಡಗಿರುವವರು / ಕುಶಲಕರ್ಮಿಗಳು / ಕರಕುಶಲ ಕರ್ಮಿಗಳು / ಶಿಂಪಿಗಳು
8) ಸಾರಿಗೆ ಕೆಲಸಗಾರರು / ಡ್ರೈವರ್ / ನಿರ್ವಾಹಕರು / ಡ್ರೈವರ್ ಮತ್ತು ನಿರ್ವಾಹಕರಿಗೆ ಸಹಾಯಕರಾಗಿರುವವರು / ಗಾಡಿ ಎಳೆಯುವವರು / ರಿಕ್ಷಾ ಎಳೆಯುವವರು.
9) ಅಂಗಡಿಯಲ್ಲಿ ಕೆಲಸ ಮಾಡುವವರು / ಸಹಾಯಕರು / ಸಣ್ಣ ಸಂಸ್ಥೆಯಲ್ಲಿ ಕೆಲಸ ಮಾಡುವ ಜವಾನರು / ಸಹಾಯಕರು / ಬಟವಾಡೆ ಮಾಡುವವರು / ಅಟೆಂಡರ್ / ಮಾಣಿಗಳು.
10) ಎಲೆಕ್ಟ್ರಿಶಿಯನ್ / ಮೆಕ್ಯಾನಿಕ್ / ಅಸೆಂಬ್ಲರ್ / ರಿಪೇರಿ ಕೆಲಸ ಮಾಡುವವರು.
11) ಅಗಸ / ಚೌಕಿದಾರ್ (ಮನೆ ಕಾಯುವವರು)
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications