ಪಂಜಾಬ್: ಮತ್ತೊಂದು ಪಾಕಿಸ್ತಾನದ ಡ್ರೋನ್ ಪತ್ತೆ, ಹೊಡೆದುರುಳಿಸಿದ ಸೇನೆ
ನವದೆಹಲಿ, ಡಿ. 22: ಪದೇ ಪದೇ ಪಾಕಿಸ್ತಾನದ ಡ್ರೋನ್ಗಳು ದೇಶದೊಳಗೆ ನುಗ್ಗಲು ಪ್ರಯತ್ನಿಸುತ್ತಲೇ ಇವೆ. ಇವುಗಳನ್ನು ವಿಫಲಗೊಳಿಸುವಲ್ಲಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಕಾರ್ಯನಿರತವಾಗಿದೆ. ಈಗ ಮತ್ತೊಮ್ಮೆ ಪಂಜಾಬ್ನ ತರ್ನ್ ತರನ್ ಜಿಲ್ಲೆಯಲ್ಲಿ ಪಾಕಿಸ್ತಾನದ ಕಡೆಯಿಂದ ಮತ್ತೊಂದು ಡ್ರೋನ್ ಒಳನುಗ್ಗುವ ಪ್ರಯತ್ನ ಮಾಡಿದ್ದು, ಆ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಬಿಎಸ್ಎಫ್ ಹೇಳಿಕೆ ತಿಳಿಸಿದೆ.
ಫಿರೋಜ್ಪುರ ಸೆಕ್ಟರ್ನ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಈ ಘಟನೆ ನಡೆದಿದೆ. ತರ್ನ್ ತರನ್ ಜಿಲ್ಲೆಯ ಫಿರೋಜ್ಪುರ ಸೆಕ್ಟರ್ನ ಗಡಿ ಹೊರಠಾಣೆ ಹರ್ಭಜನ್ನ ವ್ಯಾಪ್ತಿ ಪ್ರದೇಶದಲ್ಲಿ ಪಾಕಿಸ್ತಾನದಿಂದ ಡ್ರೋನ್ ಒಳನುಗ್ಗುತ್ತಿರುವುದನ್ನು ಬಿಎಸ್ಎಫ್ ಪಡೆಗಳು ಪತ್ತೆ ಮಾಡಿದ್ದವು. ಅದಕ್ಕೆ ತಕ್ಷಣ ಗುಂಡು ಹೊಡೆದು ಉರುಳಿಸಲಾಗಿದೆ ಎಂದು ಮಾಹಿತಿ ನೀಡಿದೆ.
ಗುರುವಾರ ಬೆಳಗ್ಗೆ 8 ಗಂಟೆಗೆ ಬಿಎಸ್ಎಫ್ ಪಡೆಗಳು ಹೊಲವೊಂದರಲ್ಲಿ ಡ್ರೋನ್ ಅನ್ನು ವಶಪಡಿಸಿಕೊಂಡಿವೆ. ಇತ್ತಿಚೆಗೆ, ಬಿಎಸ್ಎಫ್ ಹಲವಾರು ಪಾಕಿಸ್ತಾನದ ಡ್ರೋನ್ಗಳ ಒಳನುಗ್ಗುವಿಕೆ ಪ್ರಯತ್ನಗಳನ್ನು ವಿಫಲಗೊಳಿಸಿದೆ.

ಮಂಗಳವಾರ ಸಂಜೆ ಕೂಡ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಕಡೆಯಿಂದ ಅಮೃತಸರ ಸೆಕ್ಟರ್ನಲ್ಲಿರುವ ಡಾವೊಕೆ ಬಾರ್ಡರ್ ಔಟ್ಪೋಸ್ಟ್ (ಬಿಒಪಿ) ನಿಂದ ದೇಶಕ್ಕೆ ಪ್ರವೇಶಿಸಿದ ಡ್ರೋನ್ ಅನ್ನು ಬಿಎಸ್ಎಫ್ ಪಡೆಗಳು ಹೊಡೆದುರುಳಿಸಿದವು.
ಇದಕ್ಕೂ ಮುನ್ನ ನವೆಂಬರ್ 26 ರಂದು, ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯಲ್ಲಿರುವ ಅಮೃತಸರ ಸೆಕ್ಟರ್ನಲ್ಲಿರುವ ಡಾವೊಕೆ ಬಾರ್ಡರ್ ಔಟ್ಪೋಸ್ಟ್ (ಬಿಒಪಿ) ನಲ್ಲಿ ಸಂಶಯಾದಸ್ಪದವಾಗಿ ಹಾರುತ್ತಿದ್ದ ಡ್ರೋನ್ ಕಂಡು ಹಿಡಿದಿದ್ದರು. ಬಳಿಕ ಅದನ್ನು ಹೊಡೆದುರುಳಿಸಿದದ್ದರು. ಭದ್ರತಾ ಸಿಬ್ಬಂದಿ ತಮ್ಮ ರೈಫಲ್ಗಳಿಂದ ಆರು ಸುತ್ತು ಗುಂಡು ಹಾರಿಸಿ ಡ್ರೋನ್ ಅನ್ನು ಹೊಡೆದುರುಳಿಸಿದ್ದರು.

ನಂತರ, ಇದು ಚೀನಾ ನಿರ್ಮಿತ ಕ್ವಾಡ್ಕಾಪ್ಟರ್ ಡಿಜೆಐ ಮ್ಯಾಟ್ರಿಸ್ 300ಆರ್ಟಿಕೆ ಬ್ರಾಂಡ್ ಡ್ರೋನ್ ಎಂದು ಕಂಡುಬಂದಿತ್ತು. ಡ್ರೋನ್ನಲ್ಲಿ ಕೆಲವು ಕ್ಯಾಮೆರಾಗಳನ್ನು ಅಳವಡಿಸಿರುವುದು ಕಂಡುಬಂದಿತ್ತು.
ಕಳೆದ ಎರಡು ತಿಂಗಳಲ್ಲಿ ಅಮೃತಸರ ಪ್ರದೇಶದಲ್ಲಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಮೂರು ಡ್ರೋನ್ಗಳನ್ನು ಹೊಡೆದುರುಳಿಸಿದೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications