Get Updates
Get notified of breaking news, exclusive insights, and must-see stories!

G20 Summit: ಬಡತನ ಮುಚ್ಚಿಡಲು ಪರದೆ ಹಾಕಿದ ಮೋದಿ ಸರ್ಕಾರ?

ಇಡೀ ಜಗತ್ತಿನ ಗಮನ ಈಗ ರಾಷ್ಟ್ರ ರಾಜಧಾನಿ ದೆಹಲಿ ಕಡೆಗೆ ನೆಟ್ಟಿದೆ. ಭಾರತದ ನೇತೃತ್ವ ಜಿ20 ಶೃಂಗಸಭೆಗೆ ಮಹತ್ವದ ಮೆರಗು ನೀಡಿದೆ. ಆದರೆ ಇದೇ ಸಂದರ್ಭದಲ್ಲಿ ದೆಹಲಿಯಲ್ಲಿ ಇರುವ ಬಡತನ ಮರೆಮಾಚಲು ಕೇಂದ್ರ ಸರ್ಕಾರ, ಕೊಳೆಗೇರಿಗಳಿಗೆ ಪರದೆ ಹಾಕಿದೆಯಾ? ಎಂಬ ಪ್ರಶ್ನೆ ಕೇಳಿಬಂದಿದೆ. ಈ ಕುರಿತು ಕಾಂಗ್ರೆಸ್ ವಿಡಿಯೋ ಒಂದನ್ನು ಶೇರ್ ಮಾಡಿದೆ. ಹಾಗಾದರೆ ವಿಡಿಯೋದಲ್ಲಿ ಇರುವ ಆರೋಪ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶ್ರೀಮಂತರು ಮಾತ್ರ ವಾಸ ಮಾಡುತ್ತಿಲ್ಲ. ಲಕ್ಷಾಂತರ ಬಡವರು ಕೂಡ ದೆಹಲಿಯಲ್ಲಿ ಬದುಕುತ್ತಿದ್ದಾರೆ. ಅದರಲ್ಲೂ ದಕ್ಷಿಣ ದೆಹಲಿಯ ವಸಂತ ವಿಹಾರದಲ್ಲಿ ಇರುವ ಕೂಲಿ ಕ್ಯಾಂಪ್ ಸಾವಿರಾರು ಬಡ ಕುಟುಂಬಗಳಿಗೆ ನೆರಳು ನೀಡಿದೆ. ಕೂಲಿ ಕ್ಯಾಂಪ್ ಪ್ರದೇಶದಿಂದ ಕೂಗಳತೆ ದೂರದಲ್ಲಿ ಐಶಾರಾಮಿ ಜೀವನ ನಡೆಸುವ ಮನೆ, ಹೋಟೆಲ್‌ಗಳು ಇವೆ. ಆದರೆ ಜಿ20 ಶೃಂಗಸಭೆ ಕಾರಣಕ್ಕೆ ಕೂಲಿ ಕ್ಯಾಂಪ್ ಜಾಗದ ಬಡತನ ಮರೆಮಾಚಲು ಪರದೆ ಹಾಕಿದ ಆರೋಪ ಕೇಳಿಬಂದಿದೆ. ಕಾಂಗ್ರೆಸ್ ತನ್ನ ಟ್ವಿಟ್ಟರ್ ಅಥವಾ ಎಕ್ಸ್ ಖಾತೆ ಮೂಲಕ ಈ ಬಗ್ಗೆ ವಿಡಿಯೋ ಶೇರ್ ಮಾಡಿ ಆರೋಪ ಮಾಡಿದೆ.

ಬಡತನ ಮರೆಮಾಚಲು ಸರ್ಕಾರದ ಯತ್ನ?

ಕಾಂಗ್ರೆಸ್ ಟ್ಟಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ ವಿಡಿಯೋ ಕೂಲಿ ಕ್ಯಾಂಪ್ ಪ್ರದೇಶದ್ದು ಅಂತಾ ಹೇಳಲಾಗಿದೆ. ವಿಡಿಯೋದಲ್ಲಿ ಸ್ಥಳೀಯ ನಿವಾಸಿಗಳು ತಮ್ಮನ್ನು ಪರದೆ ಹಾಕಿ, ಈ ರೀತಿ ಮುಚ್ಚಿಡಲು ಯತ್ನಿಸಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಅಲ್ಲದೆ ಜಿ20 ಶೃಂಗಸಭೆ ಕಾರಣಕ್ಕೆ ಕೂಲಿ ಕ್ಯಾಂಪ್ ಪ್ರದೇಶಕ್ಕೆ ಪರದೆ ಹಾಕಿರುವ ಹಿನ್ನೆಲೆ ಉಸಿರಾಟಕ್ಕೂ ಸಮಸ್ಯೆ ಆಗುತ್ತಿದೆ ಎಂದು ಗಂಭೀರ ಆರೋಪ ಕೇಳಿಬಂದಿದೆ. ಇದೀಗ ಕಾಂಗ್ರೆಸ್ ಶೇರ್ ಮಾಡಿರುವ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Another fight has been started between Congress and Central Government over G20

ವಿದೇಶಿ ಪ್ರತಿನಿಧಿಗಳಿಗೆ ಸಕಲ ವ್ಯವಸ್ಥೆ

ಜಿ20 ಶೃಂಗಸಭೆ ಹಿನ್ನೆಲೆ ರಾಷ್ಟ್ರ ರಾಜಧಾನಿ ದೆಹಲಿ ಇದೀಗ ಏಳು ಸುತ್ತಿನ ಕೋಟೆಯಂತೆ ಬದಲಾಗಿದೆ. ವಿವಿಧ ದೇಶಗಳ ಅಧ್ಯಕ್ಷರು, ಪ್ರಧಾನಿಗಳು ಹಾಗೂ ಜನಪ್ರತಿನಿಧಿಗಳು ಜಿ20 ಶೃಂಗಸಭೆಗೆ ಆಗಮಿಸಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಹದ್ದಿನ ಕಣ್ಣಿಡಲಾಗಿದೆ. ಹಾಗೇ ಜಿ20 ಶೃಂಗಸಭೆ ನಡೆಯುತ್ತಿರುವ ಪ್ರದೇಶದ ಸುತ್ತಮುತ್ತ ಸಾರ್ವಜನಿಕರ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ. ಅದರಲ್ಲೂ ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಗಮಿಸಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ.

ಮತ್ತೊಂದು ಕಡೆ ರಷ್ಯಾ & ಉಕ್ರೇನ್ ಯುದ್ಧದ ಬೆನ್ನಲ್ಲೇ ನಡೆಯುತ್ತಿರುವ ಜಿ20 ಶೃಂಗಸಭೆ ಸಾಕಷ್ಟು ಗಮನ ಸೆಳೆದಿದೆ. ಆದರೆ ಈ ಸಂದರ್ಭದಲ್ಲಿ ದೆಹಲಿ ಬಡತನ ಮುಚ್ಚಿಡುತ್ತಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಬಿಜೆಪಿ ನಾಯಕರು ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಆದ್ರೆ ಕಾಂಗ್ರೆಸ್ ಮಾತ್ರ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದೆ. ಈ ಮೂಲಕ ಮತ್ತೊಂದು ವಿಚಾರಕ್ಕೆ ಕಾಂಗ್ರೆಸ್ & ಬಿಜೆಪಿ ನಡುವೆ ಜಟಾಪಟಿ ಶುರುವಾಗುವ ಸೂಚನೆ ಸಿಕ್ಕಂತಾಗಿದೆ.

ಒಟ್ನಲ್ಲಿ ಇಡೀ ಜಗತ್ತು ದೆಹಲಿ ಕಡೆ ಕಣ್ಣಿಟ್ಟು ಕೂತಿದ್ದು, ಜಿ20 ಶೃಂಗಸಭೆ ಅದ್ಧೂರಿಯಾಗಿ ಆರಂಭವಾಗಿದೆ. ಇಂದು ಸಂಜೆ ರಾಷ್ಟ್ರಪತಿಗಳು ಆಯೋಜನೆ ಮಾಡಿರುವ ವಿಶೇಷ ಔತಣ ಕೂಟದಲ್ಲಿ ಜಗತ್ತಿನ ಗಣ್ಯರು ಭಾಗವಹಿಸಲಿದ್ದಾರೆ. ಇದಾದ ಬಳಿಕ ನಾಳೆ ಕೂಡ ಶೃಂಗಸಭೆ ನಡೆಯಲಿದ್ದು ನಾಳೆ ಸಂಜೆ ಜಿ20 ಶೃಂಗಸಭೆಗೆ ತೆರೆ ಬೀಳಲಿದೆ. ಹೀಗಾಗಿ ರಾಷ್ಟ್ರ ರಾಜಧಾನಿ ದೆಹಲಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+